ಕರ್ನಾಟಕ

karnataka

ETV Bharat / state

ಮುಂಬೈನಲ್ಲಿ ವರುಣನ ಆರ್ಭಟ; ಬೆಂಗಳೂರಿಂದ ಓಡಾಡುವ ಬಸ್​ಗಳ ಸಂಚಾರ ಹೀಗಿದೆ! - etv bharat

ಮಹಾನಗರಿ ಮುಂಬೈನಲ್ಲಿ ಕಳೆದ ವಾರದಿಂದ ಭಾರಿ ಮಳೆ ಸುರಿಯುತ್ತಿದೆ. ಇಂದು ಸಹ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದು ಹಲವು ವಿಮಾನಗಳ‌ ಹಾರಾಟದಲ್ಲಿ ಬದಲಾವಣೆ ಮಾಡಲಾಗಿದೆ. ಆದ್ರೆ ಕೆಎಸ್​ಆರ್​ಟಿಸಿ ಸೇವೆ ಎಂದಿನಂತೆ ಇರಲಿದೆ ಅನ್ನೋದು ಖುಷಿ ತರಿಸಿದೆ.

ಸಂಗ್ರಹ ಚಿತ್ರ

By

Published : Jul 2, 2019, 2:08 PM IST

ಬೆಂಗಳೂರು:ಮುಂಬೈನಲ್ಲಿ ಕಳೆದೊಂದು ವಾರದಿಂದ ಮಳೆರಾಯನ‌ ಆರ್ಭಟ ಜೋರಾಗಿದ್ದು, ಮಳೆಯಿಂದಾಗಿ ಈಗಾಗಲೇ ವಿಮಾನಗಳ‌ ಹಾರಾಟದಲ್ಲಿ ಬದಲಾವಣೆ ಮಾಡಲಾಗಿದೆ. ಇತ್ತ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಕೆಎಸ್​ಆರ್​ಟಿಸಿ ಸೇವೆ ಎಂದಿನಂತೆ ಇರಲಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿತ್ಯ ಬೆಂಗಳೂರಿನಿಂದ ಮುಂಬೈ ಮತ್ತು ಪುಣೆಗೆ ಮೂರು ಬಸ್​ಗಳು ಸಂಚಾರ ಮಾಡುತ್ತಿವೆ. ಆದರೆ, ಮುಂಬೈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರ ಓಡಾಟ ಕಡಿಮೆ‌ ಆಗಿದೆ. ಜನರ ಓಡಾಟ ಕಡಿಮೆ ಆಗಿದೆ ವಿನಃ ಕೆಎಸ್​ಆರ್​ಟಿಸಿ ಬಸ್​ಗಳ ಓಡಾಟ ಮಾತ್ರ ಯಥಾಸ್ಥಿತಿಯಲ್ಲೇ ಮುಂದುವರೆದಿದೆ.

ಇನ್ನು ಆನ್​ಲೈನ್​ ಬುಕ್ಕಿಂಗ್​ ಕೂಡ ಕಡಿಮೆ ಆಗಿದ್ದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್​ ಸೇವೆ ಇರಲಿದೆ ಅಂತ ಅಧಿಕಾರಿಗಳು ಮಾಹಿತಿ‌ ನೀಡಿದ್ದಾರೆ. ಬೆಂಗಳೂರಿನಿಂದ ನಿತ್ಯ ಮೂರು ಮಲ್ಟಿ ಆ್ಯಕ್ಸಲ್​ ವೋಲ್ವೋ ಬಸ್​ ಸೇವೆ ಇದ್ದು, ಸದ್ಯ, ಆನ್​ಲೈನ್​ಲ್ಲಿ ಮೂರು ಬಸ್​ಗಳ ಸೀಟುಗಳು ಖಾಲಿ ಇವೆ.

ABOUT THE AUTHOR

...view details