ಕರ್ನಾಟಕ

karnataka

By

Published : Mar 16, 2020, 1:10 PM IST

Updated : Mar 16, 2020, 4:22 PM IST

ETV Bharat / state

ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ: ಆ್ಯಂಬುಲೆನ್ಸ್ ಜೊತೆಯಲ್ಲೇ ರೆಸಾರ್ಟ್​ಗೆ ಬಂದ ವೈದ್ಯರು

ರಮಡ ರೆಸಾರ್ಟ್​ನಲ್ಲಿರುವ ಮಧ್ಯಪ್ರದೇಶದ ಬಂಡಾಯ ಶಾಸಕರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು ವೈದ್ಯರ ತಂಡ ರೆಸಾರ್ಟ್​ಗೆ ಭೇಟಿ ನೀಡಿದೆ.

Health issue to madhya pradesh Rebel MLA,ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ
ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ

ಯಲಹಂಕ:ಬೆಂಗಳೂರಿನ ರಮಡ ರೆಸಾರ್ಟ್​ನಲ್ಲಿರುವ ಮಧ್ಯಪ್ರದೇಶದ ಬಂಡಾಯ ಶಾಸಕರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಮೂವರು ವೈದ್ಯರ ತಂಡ ರೆಸಾರ್ಟ್​ಗೆ ಭೇಟಿ ನೀಡಿದೆ.

ಮಧ್ಯಪ್ರದೇಶ ಬಂಡಾಯ ಶಾಸಕರಿಗೆ ಅನಾರೋಗ್ಯ

ಮಧ್ಯಪ್ರದೇಶ ಬಂಡಾಯ ಶಾಸಕರು ಯಲಹಂಕ ಬಳಿಯ ರಮಾಡ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಿದ್ದು. ಮಧ್ಯಪ್ರದೇಶ ರಾಜಕೀಯ ಅಸ್ಥಿರತೆಗೆ ಕಾರಣವಾಗಿದ್ದಾರೆ. ಸದ್ಯ ರಮಾಡ ಹೊಟೇಲ್​ನಲ್ಲಿ 22 ಬಂಡಾಯ ಶಾಸಕರು ತಂಗಿದ್ದಾರೆ. ಮೂವರು ವೈದ್ಯರ ತಂಡ ಆ್ಯಂಬುಲೆನ್ಸ್ ಸಮೇತ ಹೋಟೆಲ್​​​​ ಒಳ ಹೋಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಬಂಡಾಯ ಶಾಸಕರಲ್ಲಿ ಒಬ್ಬರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಇಸಿಜಿ ಮಾಡುವ ಉಪಕರಣದೊಂದಿಗೆ ವೈದ್ಯರ ತಂಡ ಒಳಗೆ ಹೋಗಿದೆ. ಬಂಡಾಯ ಶಾಸಕರ ಆರೋಗ್ಯದ ದೃಷ್ಟಿಯಿಂದ ಆ್ಯಂಬುಲೆನ್ಸ್ ಮತ್ತು ವೈದ್ಯರ ತಂಡ ಹೋಟೆಲ್​​ನಲ್ಲೇ ಇರಲಿದೆ ಎಂದು ಹೇಳಲಾಗಿದೆ.

Last Updated : Mar 16, 2020, 4:22 PM IST

ABOUT THE AUTHOR

...view details