ಕರ್ನಾಟಕ

karnataka

ಬೆಂಗಳೂರು: ಹೃದಯಾಘಾತದಿಂದ ಹೆಡ್ ಕಾನ್​ಸ್ಟೇಬಲ್ ಸಾವು

By

Published : Jul 8, 2020, 9:40 AM IST

ಸಂಜಯನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್​ಸ್ಟೇಬಲ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಹೆಡ್ ಕಾನ್​ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಮೇಶ್. ಎಲ್. ಮೃತ ಹೆಡ್ ಕಾನ್​ಸ್ಟೇಬಲ್.

Head Constable death
ಹೃದಯಾಘಾತದಿಂದ ಹೆಡ್ ಕಾನ್​ಸ್ಟೇಬಲ್ ಸಾವು

ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸಿದ ಹೆಡ್ ಕಾನ್​ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ರಮೇಶ್.ಎಲ್. ಮೃತರು. ಇವರು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್​ಸ್ಟೇಬಲ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಆದರೆ, ನಿನ್ನೆ ಏಕಾಏಕಿ ಹೃದಯಕ್ಕೆ ಸಂಬಂಧಿಸಿದ‌ ಖಾಯಿಲೆ‌ ಉಲ್ಬಣವಾದಾಗ ಸ್ಥಳೀಯ ಸುಗುಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮೃತದೇಹವನ್ನು ‌ಕೋವಿಡ್ ಟೆಸ್ಟ್​ಗೆ ಒಳಪಡಿಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ.

ABOUT THE AUTHOR

...view details