ಕರ್ನಾಟಕ

karnataka

ETV Bharat / state

ಐಎಂಎ ದೋಖಾ: ಈಟಿವಿ ಭಾರತ ಎದುರು ಕಣ್ಣೀರಿಟ್ಟ ವಿಕಲಚೇತನ

ಐಎಂಎ ಜ್ಯುವೆಲ್ಲರಿ ಮೋಸದ ಜಾಲಕ್ಕೆ ಸಾವಿರಾರು ಜನರು ಸಿಲುಕಿದ್ದಾರೆ. ಇದೀಗ ವಿಕಲಚೇತನ ವ್ಯಕ್ತಿವೋರ್ವ ತನಗಾಗಿರುವ ವಂಚನೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ತನ್ನ ಹಣ ಮರಳಿ ಕೊಡಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ ಈ ವ್ಯಕ್ತಿ.

By

Published : Jun 14, 2019, 12:47 PM IST

ಐಎಂಎ ದೋಖಾದಿಂದ ಕಣ್ಣೀರಿಡುತ್ತಿರುವ ಅಂಗವಿಕಲ

ಬೆಂಗಳೂರು:ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್​​ ಸಾವಿರಾರು ಅಮಾಯಕರಿಗೆ ಉಂಡೆನಾಮ ಹಾಕಿದ್ದಾನೆ. ಈ ಮೋಸದ ಜಾಲಕ್ಕೆ ವಿಧವೆಯರು, ವಿಕಲಚೇತನರು ಸೇರಿದಂತೆ ಸಾವಿರಾರು ಜನರು ಸಿಲುಕಿದ್ದಾರೆ.

ಐಎಂಎ ದೋಖಾದಿಂದ ಕಣ್ಣೀರಿಡುತ್ತಿರುವ ವಿಕಲಚೇತನ

ಐಎಂಎ ಯಿಂದ ವಂಚನೆಗೊಳಗಾಗಿರುವ ವಿಕಲಚೇತನ ಏಸಾದ್​ವುಲ್ಲಾ ಖಾನ್ ಎಂಬುವರ ತಮಗೆ ನಡೆಯೋಕ್ಕೆ ಆಗದೆ ಇದ್ರು ಊರುಗೋಲು‌ ಹಿಡಿದು ಶಿವಾಜಿನಗರದ ಗಣೇಶ್ ಭಾಗ್ ಸಭಾಂಗಣಕ್ಕೆ ಬಂದು ದೂರು ನೀಡಿದ್ದಾರೆ. ಇನ್ನು ಈ ವೇಳೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಅವರು, ನಾನು ಮೈಸೂರು ರಸ್ತೆಯಲ್ಲಿ ಪಾನ್ ಬೀಡಾ ಅಂಗಡಿ ನಡೆಸುತ್ತಿದೆ. ಈ ವೇಳೆ ಕೆಲವರು ಐಎಂಎ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಲಾಭ ಬರುತ್ತೆ ಹೇಳಿದ್ರು. ಹಾಗಾಗಿ 2 ಲಕ್ಷ ಹಣ ಹೂಡಿಕೆ‌ ಮಾಡಿದ್ದೆ ಬರೋ ಲಾಭದಲ್ಲಿ ಬಾಡಿಗೆಗೆ ಕಟ್ಟಲು ಸ್ವಲ್ಪ ಹಣ ಬರುತ್ತೆ ಎಂದು ಹೂಡಿಕೆ ಮಾಡಿದ್ದೆ. ಈಗ ಲಾಭವೂ ಇಲ್ಲ, ಹಾಕಿದ ಹಣವೂ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಸಿಎಂ ಕುಮಾರಸ್ವಾಮಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

For All Latest Updates

ABOUT THE AUTHOR

...view details