ಕರ್ನಾಟಕ

karnataka

ಅತ್ತಿಬೆಲೆ ಪಟಾಲಮ್ಮ ಕೆರೆ ಒತ್ತುವರಿಗೆ ಪ್ರಭಾವಿಗಳ ಹುನ್ನಾರ... ತಂತಿ ಬೇಲಿ ಹಾಕಿಸಿದ ತಹಸೀಲ್ದಾರ್​

By

Published : Oct 30, 2019, 8:07 AM IST

Updated : Oct 30, 2019, 8:21 AM IST

ಆನೇಕಲ್​ನಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಜಾಗವನ್ನು ಕಬಳಿಕೆ ಮಾಡಲು ಹುನ್ನಾರ ನಡೆಸಿದ್ದರ ಬಗ್ಗೆ ತಹಶೀಲ್ದಾರ್ ಗಮನಕ್ಕೆ ಬಂದಿದ್ದು, ಕೂಡಲೇ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ತಂತಿ ಬೇಲಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಹಶೀಲ್ದಾರ್​​

ಆನೇಕಲ್ :ಇಲ್ಲಿನ ಅತ್ತಿಬೆಲೆ ಪಟಾಲಮ್ಮ ಕೆರೆ ಸರ್ವೇ ನಂಬರ್ 8 ರಲ್ಲಿ, 1 ಎಕರೆ 28 ಕುಂಟೆ ಕೆರೆ ಜಾಗವನ್ನು ಕೆಲ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದರು ಎನ್ನಲಾದ ಜಾಗವನ್ನು, ತಹಶೀಲ್ದಾರ್ ದಿನೇಶ್​​​ ಅವರು ಸ್ಥಳ ಪರಿಶೀಲನೆ ನಡೆಸಿ ತಂತಿ ಬೇಲಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಲಮ್ಮ ಕೆರೆಯಲ್ಲಿ 3 ಎಕರೆ 26 ಕುಂಟೆ ಜಾಗವಿತ್ತು. ಅದರಲ್ಲಿ 1 ಎಕರೆ 20 ಗುಂಟೆ ಜಾಗದಲ್ಲಿ ಕೆಲ ಪ್ರಭಾವಿಗಳು ಮನೆಗಳನ್ನು ಕಟ್ಟಿಕೊಂಡಿದ್ದಲ್ಲದೇ, ಕೆರೆ ಜಾಗದಲ್ಲಿ ಕಸ ತಂದು ಸುರಿದಿದ್ದಾರೆ. ಈ ಬಗ್ಗೆ ಎಚ್ಚೆತ್ತ ತಾಲೂಕು ಆಡಳಿತ ಆ ಜಾಗವನ್ನು ವಶಕ್ಕೆ ಪಡೆದು ಬೇಲಿ ಹಾಕಿದ್ದಾರೆ.

ಸರ್ಕಾರಿ ಜಾಗ ಒತ್ತುವರಿ

ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಹಶಿಲ್ದಾರ್ ಸ್ಥಳಕ್ಕೆ ಭೇಟಿಕೊಟ್ಟು ಸರ್ಕಾರಿ ನಾಮಫಲಕ ಹಾಕುವ ಮೂಲಕ ಆ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಕೆರೆಯಂಗಳವನ್ನು ಪುನರುಜ್ಜೀವನ ಮಾಡೋದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಕ್ಷಣಕ್ಕೆ ಕಾಂಪೌಂಡ್ ಹಾಕಲಾಗಿದೆ.

Last Updated : Oct 30, 2019, 8:21 AM IST

ABOUT THE AUTHOR

...view details