ಕರ್ನಾಟಕ

karnataka

By

Published : Sep 29, 2019, 9:18 PM IST

ETV Bharat / state

ರಾಯಲ್​​ ದಸರೆಗೆ ಹೊರಟ ಐತಿಹಾಸಿಕ ವಿಂಟೇಜ್​​​ ಕಾರುಗಳು‌

ನಾಡ ಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಬಂದಿದ್ದ 50ಕ್ಕೂ ಹೆಚ್ಚು ಕಾರುಗಳು ಮೈಸೂರಿನತ್ತ ಪ್ರಯಾಣ ಬೆಳೆಸಿವೆ.‌

ರಾಯಲ್ ದಸರಾಕ್ಕೆ ಹೊರಟ ಹಿಸ್ಟಾರಿಕಲ್ ವಿಂಟೇಜ್ ಕಾರುಗಳು‌

ಬೆಂಗಳೂರು:ದಸರಾ ಮಹೋತ್ಸವದ ರಂಗು ಹೆಚ್ಚಿಸಲು ದೇಶದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದಿದ್ದ 50ಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಬೆಂಗಳೂರಿನಿಂದ‌ ಮೈಸೂರಿಗೆ ಪಯಣ ಬೆಳೆಸಿವೆ. ರಾಜ್ಯಪಾಲ ವಜುಭಾಯ್​ ವಾಲಾ ವಿಂಟೇಜ್‌ ಕಾರುಗಳ ಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ರಾಯಲ್ ದಸರಾಕ್ಕೆ ಹೊರಟ ಹಿಸ್ಟಾರಿಕಲ್ ವಿಂಟೇಜ್ ಕಾರುಗಳು‌

ನಾಡಹಬ್ಬ ದಸರಾ ಉತ್ಸವಕ್ಕೆ ತೆರಳುತ್ತಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಈ ಕಾರುಗಳು ಹಲವು ವರ್ಷಗಳಿಂದ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಿವೆ. ಈ ವರ್ಷವೂ ಸಹ ದಸರಾ ಮಹೋತ್ಸವಕ್ಕೆ ಮೆರುಗು ತುಂಬಲು ತಮ್ಮ ಮಾಲೀಕರೊಂದಿಗೆ ಈ ಕಾರುಗಳು ಪಾರಂಪರಿಕ ನಗರಿಗೆ ತೆರಳಿದವು. ದೇಶದ ವಿವಿಧ ರಾಜ್ಯಗಳೂ ಸೇರಿದಂತೆ ನೆರೆಯ ಶ್ರೀಲಂಕಾದಿಂದಲೂ ನೂರಾರು ವರ್ಷಗಳ ಇತಿಹಾಸವಿರುವ ಕಾರುಗಳು ದಸರೆಗೆ ಆಗಮಿಸಿವೆ. ಈ ಕಾರುಗಳ ವೈಶಿಷ್ಟ್ಯವನ್ನು ತಿಳಿದು ಸ್ವತಃ ರಾಜ್ಯಪಾಲರೇ ಕಾರಿನಲ್ಲಿ ಕುಳಿತು ರಾಜಭವನದ ಸುತ್ತಾ ಒಂದು ಸುತ್ತು ಹಾಕಿದರು.‌

ಕೇವಲ ಕಾರುಗಳಷ್ಟೇ ಅಲ್ಲ, ಹಳೇ ಕಾಲದ ರಾಯಲ್ ಎನ್​ಫೀಲ್ಡ್ ಸೇರಿದಂತೆ ವಿವಿಧ ಕಂಪನಿಯ ಬೈಕುಗಳೂ ಕೂಡಾ ಇಲ್ಲಿ ಕಂಡುಬಂದವು. ರಾಜಭವನದಿಂದ ತೆರಳಿದ ಈ ಕಾರು, ಬೈಕುಗಳು ನೇರವಾಗಿ ವಿಧಾನಸೌಧಕ್ಕೆ ಹೋಗಿ, ಅಲ್ಲಿಂದ ಮೈಸೂರಿಗೆ ತಲುಪಿವೆ. ರಾಷ್ಟ್ರಕವಿ ಕುವೆಂಪು ಅವರ ಹಳೆಯ ಕಾರು ಇಲ್ಲಿ ವಿಶೇಷವಾಗಿ ಗಮನ ಸೆಳೆಯಿತು.

ABOUT THE AUTHOR

...view details