ಕರ್ನಾಟಕ

karnataka

ETV Bharat / state

ಐಎಂಎ ಸಂಸ್ಥೆ ಆಸ್ತಿ ಮುಟ್ಟುಗೋಲಿಗೆ ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರ ನೇಮಕ - undefined

ಐಎಂಎ ಸಂಸ್ಥೆಯ ಆಸ್ತಿ‌ ಮುಟ್ಟುಗೋಲು ಹಾಕಿಕೊಳ್ಳಲು ಹೊಸ ಪ್ರಾದೇಶಿಕ ಆಯುಕ್ತರನ್ನು ಸರ್ಕಾರ ನೇಮಿಸಿದ್ದು ಆದೇಶ ಹೊರಡಿಸಿದೆ.

ಸಾಂಧರ್ಭಿಕ ಚಿತ್ರ

By

Published : Jul 24, 2019, 11:53 PM IST

ಬೆಂಗಳೂರು:ಬೆಂಗಳೂರು ನಗರ ಜಿಲ್ಲಾಧಿಕಾರಿಯೇ ಐಎಂಎ ಸಂಸ್ಥೆಯ ಅವ್ಯವಹಾರದಲ್ಲಿ ತೊಡಗಿದ್ದರಿಂದ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೇಮಕ ಮಾಡಿದೆ.

ಐಎಂಎ ವಂಚನೆ ಪ್ರಕರಣ ಬರೀ ಬೆಂಗಳೂರಿಗಷ್ಟೇ ಸೀಮಿತವಾಗದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ನಡೆದಿತ್ತು. ಹಾಗಾಗಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ವಿ.ರಶ್ಮಿ ಅವರನ್ನು ನೇಮಕ ಮಾಡಿರುವ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಹಣಕಾಸು ಅವ್ಯವಹಾರ ತಡೆಗಟ್ಟಲು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಬಿ.ಎಂ ವಿಜಯ ಶಂಕರ್ ಅವರನ್ನು ಸಕ್ಷಮ ಪ್ರಾಧಿಕಾರ ಅಧಿಕಾರಿಯನ್ನಾಗಿ ಸರ್ಕಾರ ನೇಮಿಸಿತ್ತು. ಆದರೆ, ಐಎಂಎ ವಂಚನೆ ಪ್ರಕರಣದಲ್ಲಿ ಅವರ ಹೆಸರೂ ಕೂಡ ಕೇಳಿ ಬಂದ ಕಾರಣ ಎಸ್‌ಐಟಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ.

For All Latest Updates

TAGGED:

ABOUT THE AUTHOR

...view details