ಕರ್ನಾಟಕ

karnataka

By

Published : Oct 24, 2020, 8:33 PM IST

ETV Bharat / state

ಪದೇ ಪದೆ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ‌ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು

ಹತ್ತಕ್ಕೂ ಹೆಚ್ಚು ಗಾಂಜಾ ಪ್ರಕರಣಗಳಲ್ಲಿ ನಾಲ್ಕು ಬಾರಿ ಜೈಲಿಗೆ ತೆರಳಿ ಮರಳಿ ಬಂದು ಅದೇ ಗಾಂಜಾ ದಂಧೆಯಲ್ಲಿ ತೊಡಗುತ್ತಿದ್ದರು..

Anekal
ಪದೆ ಪದೇ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ‌ ಗೂಂಡಾ ಕಾಯ್ದೆ ಪ್ರಕರಣ ದಾಖಲು

ಆನೇಕಲ್ : ಅನೇಕ ಬಾರಿ ಗಾಂಜಾ ಪ್ರಕರಣ ಹೆಚ್ಚಾಗಿ ಎಚ್ಚರಿಕೆ ನೀಡಿದ್ದರೂ ಕೇಳದ ಇಬ್ಬರು ವ್ಯಕ್ತಿಗಳ ಮೇಲೆ ಆನೇಕಲ್ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆನೇಕಲ್ ಪಟ್ಟಣದ ಶಂಭಯ್ಯ ಮತ್ತು ಜಯಂತಿ ಎಂಬುವರ ಮೇಲೆ ಗೂಂಡಾ ಕಾಯಿದೆ ಜಾರಿ ಮಾಡಿದ್ದು, ತೀವ್ರ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಎನ್.ಡಿ.ಪಿ.ಎಸ್ ಕಾಯ್ದೆ ಉಲ್ಲಂಘನೆ ಹಿನ್ನೆಲೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹತ್ತಕ್ಕೂ ಹೆಚ್ಚು ಗಾಂಜಾ ಪ್ರಕರಣಗಳಲ್ಲಿ ನಾಲ್ಕು ಬಾರಿ ಜೈಲಿಗೆ ತೆರಳಿ ಮರಳಿ ಬಂದು ಅದೇ ಗಾಂಜಾ ದಂಧೆಯಲ್ಲಿ ತೊಡಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details