ಕರ್ನಾಟಕ

karnataka

ETV Bharat / state

ಮನೆ ಮಂದಿ ಮಲಗೋದನ್ನೆ ಕಾಯುತ್ತಿದ್ದ ಕಳ್ಳರು... ಚಿನ್ನಾಭರಣ ಕದ್ದು ಪರಾರಿ - mobile and other valuables material Theft

ಮನೆ ಮಂದಿ ಮಲಗಿದ್ದ ವೇಳೆಯಲ್ಲಿಯೇ ಖದೀಮರು ತಮ್ಮ ಕೈಚಕ ತೋರಿಸಿದ್ದು, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

mobile and other valuables material Theft at Bangalore
ಮನೆಯಲ್ಲಿ ಮಲಗಿದ್ದಾಗಲೇ ಮನೆಗೆ‌ ನುಗ್ಗಿ ಕಳ್ಳತನ ಮಾಡಿದ ಖದೀಮರು..!

By

Published : Dec 9, 2019, 1:01 AM IST

ಬೆಂಗಳೂರು: ಮನೆ ಮಂದಿ ಮಲಗಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

ಬಾಣಸವಾಡಿಯ ಸುಬ್ಬಯ್ಯಪಾಳ್ಯದ ಇಂದಿರಾ ಸ್ಟ್ರೀಟ್‌ನಲ್ಲಿ ವಾಸಿಸುತ್ತಿರುವ ಪ್ರೇಮ್‌ಕುಮಾರ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಡಿ.6ರಂದು ಪ್ರೇಮ್‌ ಕುಮಾರ್ ತಮ್ಮ ಕುಟುಂಬದವರ ಜೊತೆ ಹೋಟೆಲ್‌ಗೆ ಹೋಗಿ ಊಟ ಮಾಡಿಕೊಂಡು ಬಂದು ಮನೆಯಲ್ಲಿ ಮಲಗಿದ್ದರು. ಆ ವೇಳೆ ಬಂದ ಕಳ್ಳರು ಮನೆಯಲ್ಲಿದ್ದ 16 ಗ್ರಾಂ ಚಿನ್ನದ ಸರ, ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಹಿನ್ನೆಲೆ ಪ್ರೇಮ್‌ಕುಮಾರ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಪತ್ತೆಕಾರ್ಯ ಮುಂದುವರೆಸಿದ್ದಾರೆ.

For All Latest Updates

ABOUT THE AUTHOR

...view details