ಕರ್ನಾಟಕ

karnataka

ETV Bharat / state

ಮಳೆಗಾಲ ಮುಗಿದರೂ ಮುಗಿದಿಲ್ಲ ಸ್ಮಾರ್ಟ್ ಸಿಟಿ ಕಾಮಗಾರಿ: ಮುಖ್ಯ ಆಯುಕ್ತರಿಂದ ಪತ್ರ! - ಬೆಂಗಳೂರು ಸುದ್ದಿ

ಸತತವಾದ ಮಳೆಯಿಂದಾಗಿ ಶಿಥಿಲ ಮನೆಗಳು ಕುಸಿಯುತ್ತಿವೆ. ಹೀಗಾಗಿ ಎಲ್ಲ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಪಾಯಕಾರಿ ಕಟ್ಟಡದಲ್ಲಿರುವವರನ್ನು ಖಾಲಿ ಮಾಡಿಸಲು ತಿಳಿಸಲಾಗಿದೆ ಎಂದು ಮುಖ್ಯ ಆಯುಕ್ತರು ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಪತ್ರ ಬರೆದಿದ್ದಾರೆ.

gaurav-gupta-wrote-letter-for-complete-the-smart-city-works
ಮುಖ್ಯ ಆಯುಕ್ತ ಗೌರವ್ ಗುಪ್ತ

By

Published : Oct 21, 2021, 7:54 PM IST

ಬೆಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಗಳ ವೇಗ ಕುಂಠಿತಗೊಂಡಿದೆ. ರಸ್ತೆಗುಂಡಿಗಳ ಜೊತೆಗೆ ಮಳೆ ಬಂದಾಗ ರಸ್ತೆಕಾಮಗಾರಿಗಳೂ ವಾಹನ ಸಂಚಾರಕ್ಕೆ ತೊಡಕಾಗುತ್ತಿವೆ. ಕಾಮಗಾರಿಗಳಿಗೆ ನೀಡಿದ್ದ ಡೆಡ್ ಲೈನ್ ಈಗಾಗಲೇ ಮುಗಿದಿದ್ದು, ಈ ಸಂಬಂಧ ಮಾತನಾಡಿರುವ ಮುಖ್ಯ ಆಯುಕ್ತ ಗೌರವ್ ಗುಪ್ತ, ಸ್ಮಾರ್ಟ್ ಸಿಟಿ ರಸ್ತೆ, ಚರಂಡಿ ಕಾಮಗಾರಿಗಳಿಗೆ ವೇಗ ನೀಡುವ ಕುರಿತು ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.

ಸದ್ಯದಲ್ಲೇ ಸಭೆ ನಡೆಸಲಾಗುತ್ತದೆ. ಯೋಜನೆಗಳನ್ನು ಸಮಯಕ್ಕೆ ತಕ್ಕಂತೆ ಮುಗಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಪತ್ರ ಬರೆಯಲಾಗಿದೆ ಎಂದ ಅವರು, ಕಾರಣಾಂತರಗಳಿಂದ ಯೋಜನೆಗಳ ಕೊಟೇಶನ್ ಪೂರ್ಣಗೊಂಡಿಲ್ಲ. ಚರಂಡಿ ಹಾಗೂ ಕುಡಿಯುವ ನೀರಿನ ಹಳೇ ಕನೆಕ್ಷನ್ ಗಳನ್ನು ಹೊಸ ಕನೆಕ್ಷನ್ ಗೆ ಬದಲಾವಣೆ ಮಾಡಿಲ್ಲ. ಇದರಿಂದ ಮಳೆ ಬಂದಾಗ ತಕ್ಷಣ ಸಮಸ್ಯೆ ಉದ್ಭವಿಸುತ್ತಿದೆ. ಈ ಎಲ್ಲ ಸಮಸ್ಯೆಗಳನ್ನೂ ಸರಿಪಡಿಸುವಂತೆ ಸ್ಮಾರ್ಟ್ ಸಿಟಿ ವಿಭಾಗಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.

ಮುಖ್ಯ ಆಯುಕ್ತ ಗೌರವ್ ಗುಪ್ತ

ಸತತವಾದ ಮಳೆಯಿಂದಾಗಿ ಶಿಥಿಲ ಮನೆಗಳು ಕುಸಿಯುತ್ತಿವೆ. ಹೀಗಾಗಿ ಎಲ್ಲ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಪಾಯಕಾರಿ ಕಟ್ಟಡದಲ್ಲಿರುವವರನ್ನು ಖಾಲಿ ಮಾಡಿಸಲು ತಿಳಿಸಲಾಗಿದೆ. ಅಲ್ಲದೇ, ಅಕ್ಕಪಕ್ಕದ ಕಟ್ಟಡಗಳಿಗೆ ತೊಂದರೆಯಾಗುವಂತಿದ್ದರೆ, ಶಿಥಿಲ ಕಟ್ಟಡವನ್ನು ಕೂಡಲೇ ನೆಲಸಮಗೊಳಿಸಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲಸಿಕೆ ಸಾಧನೆಯಲ್ಲಿ ಬೆಂಗಳೂರಿನದ್ದೂ ಬಹುಮುಖ್ಯ ಪಾತ್ರ

ಬೆಂಗಳೂರು ನಗರದಲ್ಲಿ ಲಸಿಕೆ ವಿತರಣೆಗೆ ಹೆಚ್ಚು ಒತ್ತು ಕೊಡಲಾಗಿದೆ. ಎಲ್ಲ ಮಹಾನಗರಕ್ಕೆ ಹೋಲಿಸಿದರೆ ಅತಿಹೆಚ್ಚು ಲಸಿಕೆ ವಿತರಣೆಯಾಗಿದೆ. ಶೇ87ರಷ್ಟು ಮೊದಲ ಡೋಸ್ ಹಾಗೂ ಎರಡನೇ ಡೋಸ್ ಕೂಡಾ ಶೇ 52ರಷ್ಟು ಪೂರ್ಣಗೊಂಡಿದೆ. 12 ವಾರಗಳ ಕಾಲ ಸಮಯ ಬಿಟ್ಟು ಎರಡನೇ ಡೋಸ್ ಪಡೆಯಬೇಕಾಗುತ್ತದೆ. ಹೀಗಾಗಿ ಆ ಸಮಯ ಬಂದಾಗ ಎರಡನೇ ಡೋಸ್ ಪೂರೈಕೆ ಕೂಡಾ ಹೆಚ್ಚಾಗಲಿದೆ ಎಂದರು.

ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಬಿಬಿಎಂಪಿ ಕೂಡ ಅದರ ನಿರ್ದೇಶನದಂತೆ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ಎಲ್ಲ ಸಿದ್ಧತೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೂ ಅಕ್ಟೋಬರ್ 25 ರಿಂದ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೂ ಶಾಲೆ ಆರಂಭಗೊಳ್ಳಲಿವೆ ಎಂದು ತಿಳಿಸಿದರು.

ABOUT THE AUTHOR

...view details