ಕರ್ನಾಟಕ

karnataka

By

Published : Oct 3, 2019, 2:46 PM IST

ETV Bharat / state

ಐಎಎಸ್​, ಕೆಎಎಸ್​ ಪರೀಕಾಂಕ್ಷಿಗಳಿಗೆ ಡಾ. ವಿಷ್ಣುವರ್ಧನ್​ ಹೆಸರಲ್ಲಿ ಉಚಿತ ತರಬೇತಿ

ಡಾ ರಾಜಕುಮಾರ್ ಹೆಸರಿನಲ್ಲಿ ಐಎಎಸ್ ಅಕಾಡೆಮಿ ಪ್ರಾರಂಭ ಆಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಡಾ. ವಿಷ್ಣುವರ್ಧನ್​ ಹೆಸರಿನಲ್ಲೂ ಐಎಎಸ್, ಕೆಪಿಎಸ್​ಸಿ ಪರೀಕ್ಷೆ ಬರೆಯುವವರಿಗೆ ತರಬೇತಿ ನೀಡಲಾಗುವುದು.

ಡಾ.ವಿಷ್ಣುವರ್ಧನ್​

ಬೆಂಗಳೂರು:ಡಾ ರಾಜಕುಮಾರ್ ಹೆಸರಿನಲ್ಲಿ ಈಗಾಗಲೇ ಐಎಎಸ್ ಅಕಾಡೆಮಿ ಪ್ರಾರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಡಾ. ವಿಷ್ಣುವರ್ಧನ್​ ಹೆಸರಿನಲ್ಲೂ ಐಎಎಸ್, ಕೆಎಎಸ್ ಪರೀಕ್ಷೆ ಬರೆಯುವವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಡಾ.ವಿಷ್ಣು ಸೇನಾ ಸಮಿತಿ

ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಯೋಜನೆಗೆ ಡಾ.ಜ್ಯೋತಿ ಅವರ ನೇತೃತ್ವದ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್ ತುಂಬು ಸಹಕಾರ ನೀಡುತ್ತಿದೆ. ಇವರಿಬ್ಬರ ಸಹಯೋಗದಲ್ಲಿ ಈಗಾಗಲೇ ಮೊದಲನೇ ಬ್ಯಾಚ್ ಅತ್ಯಂತ ಯಶಸ್ವಿಯಾಗಿ ಮುಗಿದಿದ್ದು, ವಿದ್ಯಾರ್ಥಿಗಳು ಉನ್ನತ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಿದ್ದಾರೆ. ಅದೇ ವಿಶ್ವಾಸದಲ್ಲಿ ಈಗ 2ನೇ ಬ್ಯಾಚ್​ನ್ನು ಆರಂಭಿಸುತ್ತಿದ್ದಾರೆ. ಈ ಸುವರ್ಣಾವಕಾಶವನ್ನು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವೇಶ ಪರೀಕ್ಷೆ ದಿನಾಂಕ 13.10.2019 ರಂದು ಮತ್ತು ಫಲಿತಾಂಶ ದಿನಾಂಕ 14.10.2019 ಪ್ರಕಟವಾಗುವಾಗುತ್ತದೆ. ಜಾತಿ, ಶಿಫಾರಸುಗಳು ಆಯ್ಕೆಯ ಮಾನದಂಡವಲ್ಲ, ಎಸ್ಎಸ್ಎಲ್​ಸಿ ಅಂಕಪಟ್ಟಿ ಕಡ್ಡಾಯವಾಗಿ ಸಲ್ಲಿಸಬೇಕು. ಆಧಾರ್ ಕಾರ್ಡ್ ಮತ್ತು ಇತರೆ ವಿಳಾಸ ದೃಢೀಕರಣ ಪ್ರಮಾಣಪತ್ರ, ಹೈದ್ರಾಬಾದ್ ಕರ್ನಾಟಕ ವಾಸಿಗಳಾಗಿದ್ದರೆ 371ಜೆ ಪ್ರಮಾಣಪತ್ರ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದರೆ ಧೃಡೀಕರಣ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಬೇಕು. ಜೊತೆಗೆ ನಾಲ್ಕು ಭಾವಚಿತ್ರಗಳನ್ನು ಅರ್ಜಿ ಜೊತೆ ಲಗತ್ತಿಸಬೇಕು.

ಇನ್ನು ಪ್ರವೇಶ ಪರೀಕ್ಷೆ ಪಿವಿ ಪ್ಲಾಜಾ, #216, 16ನೇ ಕ್ರಾಸ್, ಎಂಸಿ ಬಡಾವಣೆ, ವಿಜಯನಗರ, ಬೆಂಗಳೂರಿನಲ್ಲಿ ನಡೆಯುತ್ತವೆ. ಆಸಕ್ತರು ವಿವರಗಳಿಗೆ9902488801/ 9945125500 ಸಂಪರ್ಕಿಸಬಹುದಾಗಿದೆ.

ABOUT THE AUTHOR

...view details