ಕರ್ನಾಟಕ

karnataka

ETV Bharat / state

ಕೆಪಿಎಸ್​ಸಿ ಅಧ್ಯಕ್ಷ ಶ್ಯಾಂ ಭಟ್​ ಹೆಸರಲ್ಲಿ ವಂಚನೆ.. ಲಕ್ಷಗಟ್ಟಲೆ ಕಬಳಿಸಿದ ಭೂಪ - undefined

ಅಬಕಾರಿ ಹುದ್ದೆ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಎಸಿಪಿ ಹಾಗೂ ಇನ್​ಸ್ಪೆಕ್ಟರ್ ತಂಡ ರಚನೆ ಮಾಡಿದ್ದೀವಿ. ತನಿಖೆ ಮುಂದುವರೆಸಿ ಆರೋಪಿ ಪತ್ತೆ ಮಾಡಲಾಗುವುದು ಎಂದು ಡಿಸಿಪಿ ರವಿ.ಡಿ.ಚೆನ್ನಣ್ಣವರ್ ತಿಳಿಸಿದರು.

ಕೆಪಿಎಸ್​ಸಿ ಅಧ್ಯಕ್ಷರ ಹೆಸರಲ್ಲಿ ವಂಚನೆ..

By

Published : May 14, 2019, 4:23 PM IST

ಬೆಂಗಳೂರು : ಕೆಪಿಎಸ್​ಸಿ ಅಧ್ಯಕ್ಷ ಶ್ಯಾಂ ಭಟ್ ಹೆಸರಲ್ಲಿ ಅಬಕಾರಿ ಇನ್​ಸ್ಪೆಕ್ಟರ್ ಕೆಲಸ ಕೊಡಿಸೋದಾಗಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಿಎಆರ್​ನ‌ ನಿವೃತ್ತ ಆರ್​ಎಸ್ಐ ಪ್ರದೀಪ್ ಮೋಸಗೊಳಗಾದವರು. ತನ್ನ ಮಗ ನಾಗೇಂದ್ರ ಎಂಬುವವರಿಗೆ ಕೆಲಸ ಕೊಡಿಸಲು ಧನರಾಜ್ ಎಂಬಾತನನ್ನ ಸಂಪರ್ಕ ಮಾಡಿದ್ದಾರೆ. ಈ ವೇಳೆ 20 ಲಕ್ಷ ರೂ. ಹಣ ಕೊಟ್ಟರೆ ಕೆಪಿಎಸ್​ಸಿ ಅಧ್ಯಕ್ಷ ಶ್ಯಾಂ ಭಟ್ ರನ್ನ ಪರಿಚಯಿಸಿ ಅಬಕಾರಿ ಇನ್​ಸ್ಪೆಕ್ಟರ್ ಕೆಲಸ ಕೊಡಿಸೋದಾಗಿ ಹೇಳಿ ಮುಂಗಡವಾಗಿ 4 ಲಕ್ಷ 50 ಸಾವಿರ ರೂ. ಹಣವನ್ನ ಗಾಂಧಿನಗರದ ದಿವ್ಯಾ ರೆಸಿಡೆನ್ಸಿಯಲ್ಲಿ ಪಡೆದುಕೊಂಡು ನಂತರ 5 ಲಕ್ಷ 50 ಸಾವಿರ ರೂ. ಹಣವನ್ನ ಪಡೆದಿದ್ದ ಎಂದು ಆರೋಪಿಸಲಾಗಿದೆ.

ಕೆಪಿಎಸ್​ಸಿ ಅಧ್ಯಕ್ಷರ ಹೆಸರಲ್ಲಿ ವಂಚನೆ..

ಮತ್ತೆ ಧನರಾಜ್ 10 ಲಕ್ಷ ರೂ. ಹಣವನ್ನ ಶ್ಯಾಂ ಭಟ್ ಗೆ ಕೊಟ್ಟಿರೋದಾಗಿ ಹೇಳಿ 2 ನೇ ಲಿಸ್ಟ್ ನಲ್ಲಿ ಜಾಬ್ ಆಫರ್ ಇರುತ್ತೆ ಅಂದಿದ್ದ. ಧನರಾಜ್ ಬಳಿಕ‌ ಯಾವುದೇ ಕೆಲಸ‌ ಮಾಡಿಕೊಡದೆ ವಂಚನೆ ಮಾಡಿದ್ದಾನೆ. ಇನ್ನು ಮೋಸ ಹೋದವರು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಡಿಸಿಪಿ ರವಿ.ಡಿ.ಚೆನ್ನಣ್ಣವರ್​ ಮಾತನಾಡಿ, ಅಬಕಾರಿ ಹುದ್ದೆ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ಎಸಿಪಿ ಹಾಗೂ ಇನ್​ಸ್ಪೆಕ್ಟರ್ ತಂಡ ರಚನೆ ಮಾಡಿದ್ದೀವಿ. ತನಿಖೆ ಮುಂದುವರೆಸಿ ಆರೋಪಿ ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details