ಕರ್ನಾಟಕ

karnataka

By

Published : Feb 12, 2023, 1:25 PM IST

ETV Bharat / state

ಜೆಡಿಎಸ್ ಮುಖಂಡನೆಂದು ಹೇಳಿ ವಂಚಿಸಿದ ಆರೋಪ: ಮನೆಗೆ ನುಗ್ಗಿ ಧರ್ಮದೇಟು ಕೊಟ್ಟ ಮಹಿಳೆ

ಜೆಡಿಎಸ್ ಮುಖಂಡ ಅಂತಾ ಹೇಳಿಕೊಂಡು ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪದಡಿ ಜಿ.ಕೆ.ಗೌಡ ಎಂಬಾತನ ವಿರುದ್ಧ ಕೇಸು​ ದಾಖಲಾಗಿದೆ.

fraud case
ವಂಚನೆ ಆರೋಪ

ಬೆಂಗಳೂರು: ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷನ ಹೆಸರಿನಲ್ಲಿ ಮಹಿಳೆಗೆ ವಂಚಿಸಿದ್ದ ಆರೋಪಿಯ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಲ್ಕತ್ತಾ ಮೂಲದ ಮಹಿಳೆಯನ್ನ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಬಳಿಕ ಹಣ ಪಡೆದು ವಂಚಿಸಿರುವ ಆರೋಪದಡಿ ಜಿ.ಕೆ.ಗೌಡ ಎಂಬಾತನ ವಿರುದ್ಧ ಕೇಸ್​ ದಾಖಲಾಗಿದೆ.

ಲೈವ್ ಬ್ಯಾಂಡ್​ನಲ್ಲಿ ಕೆಲಸ ಮಾಡಿಕೊಂಡಿದ್ದ ಕೋಲ್ಕತ್ತಾ ಮೂಲದ ಮಹಿಳೆಗೆ ಪರಿಚಯವಾಗಿದ್ದ ಆರೋಪಿಯು ತಾನು ಉತ್ತರ ಕನ್ನಡದ ಜಿಲ್ಲೆಯ ಜೆಡಿಎಸ್ ಮುಖಂಡ ಅಂತಾ ಹೇಳಿಕೊಂಡಿದ್ದನಂತೆ. ಮದುವೆಯಾಗುವುದಾಗಿ ನಂಬಿಸಿ 8 ವರ್ಷದಿಂದ ಜೊತೆಗಿದ್ದ ಆರೋಪಿ ಜಿ.ಕೆ.ಗೌಡ, ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಮೂರು ಬಾರಿ ಗರ್ಭಪಾತ ಮಾಡಿಸಿದ್ದಾನೆ. ಜೊತೆಗೆ ನನ್ನ ಬಳಿಯಿದ್ದ 20 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ನನ್ನನ್ನು ನಿರ್ಲಕ್ಷಿಸುತ್ತಿರುವ ಆರೋಪಿ, ಆತನ ರೂಮ್​ಮೇಟ್​ಗಳಿಗೆ ನನ್ನ ನಂಬರ್ ನೀಡಿದ್ದಾನೆ. ಬಳಿಕ ಅವರಿಂದ ಕರೆ ಮಾಡಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

ಇದನ್ನೂ ಓದಿ:ಇನ್ಸ್ಟಾಗ್ರಾಮ್​ನಲ್ಲಿ ಉದ್ಯೋಗದ ಆಸೆ ತೋರಿಸಿ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ; ಟೆಕ್ಕಿ ಅರೆಸ್ಟ್‌

ಆರೋಪಿಯ ವರ್ತನೆಯಿಂದ ಬೇಸತ್ತ ಮಹಿಳೆ ನಿನ್ನೆ ಮಹಿಳಾ ಸಂಘಟನೆಯೊಂದರ ಸಹಾಯದಿಂದ ಜಿ.ಕೆ.ಗೌಡ ವಾಸವಿರುವ ಬಾಡಿಗೆ ಮನೆಗೆ ನುಗ್ಗಿ ಧರ್ಮದೇಟು ನೀಡಿದ್ದಾರೆ. ಬಳಿಕ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ:ಸಾಲ ಕೊಡಿಸುವುದಾಗಿ ನಂಬಿಸಿ ಹೊಲ ಬರೆಸಿಕೊಂಡು ಮಹಿಳೆಗೆ ವಂಚನೆ!

ಹೋಟೆಲ್ ಸಿಬ್ಬಂದಿಯೊಂದಿಗೆ ಗಲಾಟೆ: ಮದ್ಯದ ಅಮಲಿನಲ್ಲಿ ಹೋಟೆಲ್​ಗೆ ಬಂದ ಯುವಕರು ಬಿಲ್ ಕೊಡುವ ವಿಚಾರವಾಗಿ ಸಿಬ್ಬಂದಿಯೊಂದಿಗೆ ದಾಂಧಲೆ ನಡೆಸಿರುವ ಘಟನೆ ತಡರಾತ್ರಿ ಯಶವಂತಪುರ ಠಾಣಾ ವ್ಯಾಪ್ತಿಯ ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿ ನಡೆದಿದೆ. ಹುಟ್ಟುಹಬ್ಬದ ಪಾರ್ಟಿ ಮಾಡಲು ಹೋಟೆಲ್​ಗೆ ಹೋಗಿದ್ದ ಯುವಕರ ಗುಂಪು ಬಳಿಕ‌ ಬಿಲ್ ಕೊಡುವ ವಿಚಾರವಾಗಿ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಹೋಟೆಲ್ ಸಿಬ್ಬಂದಿ ಮತ್ತು ಯುವಕರ ನಡುವೆ ಗಲಾಟೆ ಆರಂಭವಾಗಿದೆ. ಬಳಿಕ ಎರಡೂ ಕಡೆಯವರು ರಸ್ತೆಯಲ್ಲಿ ನಿಂತು ಜಗಳವಾಡಿಕೊಂಡಿದ್ದಾರೆ. ವಿಷಯ ತಿಳಿದ ಯಶವಂತಪುರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ ಗಾಳ: ಮನೆಗೆ ಆಹ್ವಾನಿಸಿದವನಿಗೆ ವಂಚಿಸಿದ್ದ ಇಬ್ಬರ ಬಂಧನ

ABOUT THE AUTHOR

...view details