ಬೆಂಗಳೂರು:ಸಚಿವ ಕೆ.ಜೆ.ಜಾರ್ಜ್ ಜೊತೆಗೆ ತೆಗೆಸಿಕೊಂಡಿದ್ದ ಪೋಟೋಗಳನ್ನು ತೋರಿಸಿ ಅಮಾಯಕರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುಧಾಕರ್ ಕಣ್ಣನ್ ಎಂಬಾತನೇ ವಂಚಕನಾಗಿದ್ದು, ಸಚಿವರೊಂದಿಗೆ ಈ ಹಿಂದೆ ಸಮಾರಂಭವೊಂದರಲ್ಲಿ ತೆಗೆಸಿಕೊಂಡಿದ್ದ ಪೋಟೋಗಳನ್ನು ನಾಗರಾಜ್ ಎಂಬಾತನಿಗೆ ತೋರಿಸಿ ನಿಮ್ಮ ಮಗನಿಗೆ ಕ್ರಿಶ್ಚಿಯನ್ ಮಿಷನರಿ ಕಾಲೇಜಲ್ಲಿ ಡೊನೇಷನ್ ಇಲ್ಲದೇ ಸೀಟು ಕೊಡಿಸ್ತೀನಿ. ನನಗೆ ಪ್ರಭಾವಿ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಗೊತ್ತು ಎಂದು ನಂಬಿಸಿ 50 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದಾನೆ.