ಕರ್ನಾಟಕ

karnataka

By

Published : Jul 13, 2021, 7:50 PM IST

ETV Bharat / state

ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು ನಾಲ್ವರು ಬೈಕ್ ಕಳ್ಳರ ಬಂಧನ : ಒಟ್ಟು 14 ದ್ವಿಚಕ್ರ ವಾಹನ ವಶ..

ಅನುಮಾನಗೊಂಡ ಪೊಲೀಸ್ ಸಿಬ್ಬಂದಿ ಹಿಂಬಾಲಿಸಿ ಪರಿಶೀಲಿಸಿದಾಗ ಡ್ರ್ಯಾಗರ್ ಪತ್ತೆಯಾಗಿದೆ. ಠಾಣೆಗೆ ಕರೆತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮುಖ್ಯವಾಗಿ ಆರೋಪಿಗಳಿಂದ ಬಸವೇಶ್ವರನಗರ, ಯಲಹಂಕ ನ್ಯೂಟೌನ್ ವ್ಯಾಪ್ತಿಯಲ್ಲಿ ಎರಡು ಬೈಕ್ ರಿಕವರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ..

bike-robbers-arrested-by-police-in-bangalore
ಬೈಕ್ ಕಳ್ಳರ ಬಂಧನ

ಬೆಂಗಳೂರು :ಎರಡು ಪ್ರತ್ಯೇಕ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಉತ್ತರ ವಿಭಾಗದ ರಾಜಾಜಿನಗರ ಮತ್ತು ಜೆಸಿ ನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ 1 :ರಾಜಾಜಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 4.15 ಲಕ್ಷ ರೂ. ಮೌಲ್ಯದ ಏಳು ದ್ವಿಚಕ್ರ ವಾಹನಗಳು ಸೇರಿದಂತೆ ಒಂದು ಡ್ರ್ಯಾಗರ್‌ನ ವಶಕ್ಕೆ ಪಡೆದಿದ್ದಾರೆ. ಇಬ್ಬರು ಬಂಧಿತರ ಹೆಸರನ್ನು ಗೌಪ್ಯವಾಗಿಡಲಾಗಿದ್ದು, ಆರೋಪಿಗಳು ಜುಲೈ 10ರಂದು ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿ ಪ್ರಕಾಶ್ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುತ್ತ-ಮುತ್ತ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದರು.

ಬೈಕ್​ ಕಳ್ಳರು

ಅನುಮಾನಗೊಂಡ ಪೊಲೀಸ್ ಸಿಬ್ಬಂದಿ ಹಿಂಬಾಲಿಸಿ ಪರಿಶೀಲಿಸಿದಾಗ ಡ್ರ್ಯಾಗರ್ ಪತ್ತೆಯಾಗಿದೆ. ಠಾಣೆಗೆ ಕರೆತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮುಖ್ಯವಾಗಿ ಆರೋಪಿಗಳಿಂದ ಬಸವೇಶ್ವರನಗರ, ಯಲಹಂಕ ನ್ಯೂಟೌನ್ ವ್ಯಾಪ್ತಿಯಲ್ಲಿ ಎರಡು ಬೈಕ್ ರಿಕವರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕದ್ದ ಬೈಕ್​ಗಳು

ಪ್ರಕರಣ 2 : ಮತ್ತೊಂದು ಪ್ರಕರಣದಲ್ಲಿ ಉತ್ತರ ವಿಭಾಗದ ಜೆಸಿನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದು, 4.3 ಲಕ್ಷ ರೂ. ಮೌಲ್ಯದ ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಇತ್ತೀಚೆಗೆ ಜೆಸಿನಗರ ಠಾಣಾ ವ್ಯಾಪ್ತಿಯಲ್ಲಿ ಕೆಂಪಯ್ಯ ಬ್ಲಾಕ್ ಮಸೀದಿ ಒಂದರ ಬಳಿ ಬೈಕ್‌ವೊಂದನ್ನು ಕಳವು ಮಾಡಿದ್ದರು. ಈ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ ಕೆಜೆಹಳ್ಳಿ, ಡಿಜೆಹಳ್ಳಿ, ಹೆಣ್ಣೂರು, ಮಹಾದೇವಪುರ ಸೇರಿ 7 ಠಾಣಾ ವ್ಯಾಪ್ತಿಯ ಪ್ರಕರಣ ಪತ್ತೆಯಾಗಿವೆ ಎಂದಿದ್ದಾರೆ.

ಓದಿ:'ಸಮುದ್ರದಲ್ಲಿ ಸಣ್ಣ ಅಲೆ ಬಂದಾಗ ಸ್ನಾನ ಮಾಡಿಕೊಳ್ಳಬೇಕು; ದೊಡ್ಡ ಅಲೆ ಬಂದಾಗ ಜಾಗೃತರಾಗಿರಬೇಕು'

ABOUT THE AUTHOR

...view details