ಕರ್ನಾಟಕ

karnataka

ETV Bharat / state

ಸಿ.ಎಂ. ಇಬ್ರಾಹಿಂ ನಾಯಕತ್ವದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೆ: ಹೆಚ್​​​ಡಿಕೆ ವಿಶ್ವಾಸ - ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ

ರಾಜ್ಯದ ಉದ್ದಗಲಕ್ಕೂ ದೇವೇಗೌಡರ ಜೊತೆ ಇಬ್ರಾಹಿಂ ಪಕ್ಷಕ್ಕೆ ದುಡಿದಿದ್ದರು. ಅಂದು ಸ್ವತಂತ್ರ ಅಧಿಕಾರ ಸಿಕ್ಕಿತ್ತು. ದೇವೇಗೌಡರು ಸಿಎಂ ಆಗಿದ್ದರು, ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿದ್ದರು. ಮನೆಗೆ ಮರಳಿ ಬರ್ತಾಯಿದ್ದಾರೆ. ಈಗ ಮತ್ತೆ ಅದೇ ಪರಿಸ್ಥಿತಿ ಉಂಟಾಗಿದೆ. ಇಬ್ರಾಹಿಂ ನಾಯಕತ್ವದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೆಚ್​​​ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ

By

Published : Mar 31, 2022, 7:38 PM IST

ಬೆಂಗಳೂರು : ಸಿ.ಎಂ. ಇಬ್ರಾಹಿಂ ಇಂದು ಜಾತ್ಯತೀತ ಜನತಾ ದಳ(ಜೆಡಿಎಸ್) ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಅವರು ಮರಳಿ ಮನೆಗೆ ಬಂದಿದ್ದು, ಅವರ ನಾಯಕತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು​ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಸಿ.ಎಂ.‌ ಇಬ್ರಾಹಿಂರನ್ನು ಭೇಟಿಯಾದ ವೇಳೆ ಹೆಚ್​ಡಿಕೆ ಈ ಕುರಿತು ಮಾತನಾಡಿದರು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ

ಇಬ್ರಾಹಿಂ ಜನತಾದಳದ ಪ್ರಾಡೆಕ್ಟ್ : ಸಿ.ಎಂ. ಇಬ್ರಾಹಿಂ ದೇವೇಗೌಡರ ಕುಟುಂಬದಲ್ಲಿ ಸಹೋದರನಂತೆ ಇರುವ ನಾಯಕ. ಮಧ್ಯದಲ್ಲಿ‌ ಸಣ್ಣ ಭಿನ್ನಾಭಿಪ್ರಾಯದಿಂದ ದೂರ ಆಗಿದ್ದರು. 1994ರಲ್ಲಿ ಜನತಾ ದಳಕ್ಕೆ ಸೇರ್ಪಡೆಯಾಗಿದ್ದರು. ಇಬ್ರಾಹಿಂ ಜನತಾದಳದ ಪ್ರಾಡೆಕ್ಟ್. ಅವರ ರಾಜಕೀಯ ಜೀವನ ಕಾಕತಾಳೀಯ. ರಾಜ್ಯದ ಉದ್ದಗಲಕ್ಕೂ ದೇವೇಗೌಡರ ಜೊತೆ ಇಬ್ರಾಹಿಂ ಪಕ್ಷಕ್ಕೆ ದುಡಿದಿದ್ದರು. ಅಂದು ನಮ್ಮ ಪಕ್ಷಕ್ಕೆ ಸ್ವತಂತ್ರ ಅಧಿಕಾರ ಸಿಕ್ಕಿತ್ತು. ದೇವೇಗೌಡರು ಸಿಎಂ ಆಗಿದ್ದರು, ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿದ್ದರು. ಮನೆಗೆ ಮರಳಿ ಬರ್ತಾಯಿದ್ದಾರೆ. ಈಗ ಮತ್ತೆ ಅದೇ ಪರಿಸ್ಥಿತಿ ಉಂಟಾಗಿದೆ. ಇಬ್ರಾಹಿಂ ನಾಯಕತ್ವದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೆಚ್​ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ನಾಡಿನ ಸಾಮರಸ್ಯ ಹಾಳು ಮಾಡುತ್ತಿದೆ:ಅಂದು ಬಾಬರಿ ಮಸೀದಿ ಒಡೆಯಲಾಗಿತ್ತು. ಇಂದು ದೇಶದಲ್ಲಿ ಇರುವ ಸನ್ನಿವೇಶ ಅದಕ್ಕೆ ಹೋಲಿಕೆಯಾಗುತ್ತದೆ. ಇದು ಬಿಜೆಪಿ ಉಂಟು ಮಾಡಿರುವ ವಾತಾವರಣ. ಇಂದು ನಾಡಿನ ಸಾಮರಸ್ಯ ಹಾಳು ಮಾಡುವಂಥ ಕೆಲಸವನ್ನು ಬಿಜೆಪಿ‌ ಮಾಡುತ್ತಿದೆ. ಹಿಜಾಬ್ ಆಯ್ತು, ವ್ಯಾಪಾರ ಮಾಡಬೇಡಿ, ಈಗ ಹಲಾಲ್. ರಾಜ್ಯದಲ್ಲಿ ಮಾತ್ರ ಯಾಕೆ ಇಂಥ ಘಟನೆಗಳು ನಡೆಯುತ್ತಿವೆ?. ರಾಜಕೀಯಕ್ಕಾಗಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹುಡುಗರನ್ನ ಇಟ್ಕೊಂಡು ಏನ್ ಮಾಡುತ್ತಿದ್ದಾರೆ. ಅದನ್ನ ಮಟ್ಟಹಾಕಲು ಜೆಡಿಎಸ್ ಜವಾಬ್ದಾರಿ ತೆಗೆದುಕೊಂಡಿದೆ ಎಂದು ಹೇಳಿದರು.

ಜನತಾ ಜಲಧಾರೆ ನಡೆಸುತ್ತೇವೆ : ಜೆಡಿಎಸ್​ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವ ಬಗ್ಗೆ ಯಾವುದೇ ಅನುಮಾನವಿಲ್ಲ. ರಂಜಾನ್ ಬಳಿಕ ಬೃಹತ್ ಸಮಾವೇಶ ಮಾಡಿ ಇಬ್ರಾಹಿಂ ಸೇರ್ಪಡೆ ಕಾರ್ಯಕ್ರಮ ಆಯೋಜಿಸುತ್ತೇವೆ. ಒಂದು ಕಡೆ ರಂಜಾನ್ , ಮತ್ತೊಂದು ಕಡೆ ಯುಗಾದಿ. ಇದಾದ ಬಳಿಕ ಜನತಾ ಜಲಧಾರೆ ನಡೆಸುತ್ತೇವೆ. ಇದರ ಜವಾಬ್ದಾರಿಯನ್ನು ಇಬ್ರಾಹಿಂ ಪಡೆದುಕೊಳ್ಳುತ್ತಾರೆ‌ ಎಂದು ಹೆಚ್​ಡಿಕೆ ತಿಳಿಸಿದರು.

ಒಂದು ತಿಂಗಳ ಗಡುವು, ಇಲ್ಲವಾದರೆ ಪಾದಯಾತ್ರೆ: ಇಂದು ಸರ್ಕಾರಕ್ಕೆ ಒಂದು ಎಚ್ಚರಿಕೆ ನೀಡುತ್ತೇನೆ. ಒಂದು ತಿಂಗಳು ಗಡುವು ನೀಡಿದ್ದೇನೆ. ನಾಡಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.‌ ಇಲ್ಲವಾದರೆ ಪಾದಯಾತ್ರೆ ನಡೆಸಿ ದೊಡ್ಡ ಹೋರಾಟ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. ಈ ಬಗ್ಗೆ ನಾನು ಸಿಎಂಗೆ ಪತ್ರ ಬರೆಯುತ್ತೇನೆ. ಬಜರಂಗದಳ ಹುಡುಗರನ್ನ ಇಟ್ಕೊಂಡು ಜಟ್ಕಾ ಅಂತ ಇದ್ದಾರೆ. ಕರ್ನಾಟಕವನ್ನ ಉತ್ತರ ಪ್ರದೇಶ ಮಾಡಲು ಬಿಡಲ್ಲ. ಮತ್ತೊಂದು ಸ್ವಾತಂತ್ರ್ಯ ಹೋರಾಟ ಆರಂಭ ಮಾಡುತ್ತೇವೆ. ನಾವು ಕೂಡ ಹಲಾಲ್ ಮಾಂಸ ತಿಂದು ಬದುಕಿದ್ದೇವೆ. ನಮ್ಮನ್ನು ಕೂಡ ಬಹಿಷ್ಕಾರ ಮಾಡ್ತಾರಾ?. ಇವೆಲ್ಲಾ ಇಲ್ಲಿ ವರ್ಕೌಟ್ ಆಗಲ್ಲ. ಟಿಪ್ಪು ವಿಚಾರವನ್ನ ಕಾಂಗ್ರೆಸ್ ನವರು ತಂದರು. ನಂತರ ಬೀದಿಗೆ ಬಿಟ್ಟು ಹೋದರು ಎಂದು ಆರೋಪಿಸಿದರು.

ಅವಧಿಗೂ ಮುನ್ನ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ, ಬಿಜೆಪಿಯವರಿಗೆ ಗೆಲ್ಲುವ ವಾತಾವರಣ ಏನೂ ಇಲ್ಲ. ಹಿಜಾಬ್, ಹಲಾಲ್ ಇಟ್ಕೊಂಡು ಬರ್ತಾಯಿದ್ದಾರೆ. ಇದನ್ನೆಲ್ಲಾ ಜನ ನೋಡುತ್ತಿದ್ದಾರೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details