ಕರ್ನಾಟಕ

karnataka

ETV Bharat / state

ಉಗ್ರರೊಂದಿಗಿನ ಕಾಳಗದಲ್ಲಿ ಐವರು ಯೋಧರು ಹುತಾತ್ಮ: ಹೆಚ್​ಡಿಕೆ ಸಂತಾಪ - killed five militants

ಭಾರತಕ್ಕೆ ನುಸುಳಲು ಕಾಶ್ಮೀರದ ಅತಿ ಎತ್ತರದ ಹಿಮ ಸುರಿಯುವ ಪ್ರದೇಶವನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಅತ್ಯಂತ ಪ್ರತಿಕೂಲ ವಾತಾವರಣದಲ್ಲೂ ಭಾರತೀಯ ಯೋಧರು ಶೌರ್ಯದಿಂದ ಉಗ್ರರನ್ನು ಹಿಮ್ಮೆಟ್ಟಿಸಿದ್ದಾರೆ ಎಂದಿರುವ ಕುಮಾರಸ್ವಾಮಿ, ಈ ಕಾಳಗದಲ್ಲಿ ಐವರು ಯೋಧರ ಪ್ರಾಣ ತ್ಯಾಗಕ್ಕೆ ಸಂತಾಪ ಸೂಚಿಸಿದ್ದಾರೆ.

ಹುತಾತ್ಮ ಯೋಧರಿಗೆ ಮಾಜಿ ಸಿಎಂ ಸಂತಾಪ
ಹುತಾತ್ಮ ಯೋಧರಿಗೆ ಮಾಜಿ ಸಿಎಂ ಸಂತಾಪ

By

Published : Apr 6, 2020, 10:11 PM IST

ಬೆಂಗಳೂರು: ಭಾರತದ ಒಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಐದು ನುಸುಳುಕೋರರ ವಿರುದ್ಧ ಭಾರತೀಯ ಸೇನೆ ಇಂದು ಯಶಸ್ವಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಎಲ್ಲರನ್ನೂ ಹೊಡೆದುರುಳಿಸಿದೆ. ಕಾಳಗದಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದು ತೀವ್ರ ನೋವು ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಭಾರತಕ್ಕೆ ನುಸುಳಲು ಕಾಶ್ಮೀರದ ಅತಿ ಎತ್ತರದ ಹಿಮ ಸುರಿಯುವ ಪ್ರದೇಶವನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಅತ್ಯಂತ ಪ್ರತಿಕೂಲ ವಾತಾವರಣದಲ್ಲೂ ಭಾರತೀಯ ಯೋಧರು ಶೌರ್ಯದಿಂದ ಉಗ್ರರನ್ನು ಹಿಮ್ಮೆಟ್ಟಿಸಿದ್ದಾರೆ ಎಂದಿರುವ ಮಾಜಿ ಸಿಎಂ, ಈ ಕಾಳಗದಲ್ಲಿ ಐವರು ಯೋಧರ ಪ್ರಾಣ ತ್ಯಾಗಕ್ಕೆ ಸಂತಾಪ ಸೂಚಿಸಿದ್ದಾರೆ.

ಐವರು ಸೈನಿಕರ ಬಲಿದಾನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನುಸುಳುಕೋರರ ವಿರುದ್ಧ ಮತ್ತಷ್ಟು ಕಾರ್ಯಾಚರಣೆಗಳನ್ನು ಭಾರತ ನಡೆಸಬೇಕು. ಈ ಮೂಲಕ ಗಡಿ ನಿಯಂತ್ರಣ ರೇಖೆಯಲ್ಲಿ ಆಗಾಗ ನಡೆಯುವ ಇಂಥಹ ಘಟನೆಗಳಲ್ಲಿ ಭಾರತೀಯ ಯೋಧರು ಪ್ರಾಣ ಕಳೆದುಕೊಳ್ಳುವ ಸನ್ನಿವೇಶವನ್ನು ತಪ್ಪಿಸಬೇಕು. ಉಗ್ರರ ಹೆಡೆಮುರಿ ಕಟ್ಟಬೇಕು ಎಂದಿದ್ದಾರೆ.

ಭಾರತದ ವಿರುದ್ಧ ತನ್ನ ನೆಲದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳನ್ನು ವಿಶ್ವದ ಹಲವು ರಾಷ್ಟ್ರಗಳ ಎಚ್ಚರಿಕೆಯ ಹೊರತಾಗಿಯೂ ಪಾಕಿಸ್ತಾನ ನಿಯಂತ್ರಿಸಿಲ್ಲ. ಇದಕ್ಕಾಗಿ ಭಾರತ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕಾದ ಅಗತ್ಯ ಎದುರಾಗಿದೆ. ಈ ಮೂಲಕ ಐವರು ವೀರ ಯೋಧರ ಆತ್ಮಕ್ಕೆ ಶಾಂತಿ ತಂದುಕೊಡಬೇಕಿದೆ ಎಂದಿದ್ದಾರೆ.

ABOUT THE AUTHOR

...view details