ಕರ್ನಾಟಕ

karnataka

By

Published : May 22, 2021, 10:33 AM IST

ETV Bharat / state

ನಿತ್ಯ 200ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿರುವ 'ಅಣ್ತಮ್ಮ'.. ಇವರ ಮಾನವೀಯ ಕಾರ್ಯಕ್ಕೆ ಪೊಲೀಸರ ಸಾಥ್

ಬೆಂಗಳೂರಿನ ಸಹೋದರರಿಬ್ಬರು ನಿತ್ಯ 200ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಈ ಸಹೋದರರ ಕೆಲಸಕ್ಕೆ ಪೊಲೀಸರು ಸಾಥ್ ನೀಡಿ ಬೆಂಬಲಿಸಿದ್ದಾರೆ.

food distribution to More then 200 peoples, food distribution to More then 200 peoples by brothers, Bangalore corona news, 200ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿರುವ ಸಹೋದರರು, ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿರುವ ಸಹೋದರರು, ಬೆಂಗಳೂರು ಕೊರೊನಾ ಸುದ್ದಿ,
ನಿತ್ಯ 200ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿರುವ ಅಣ್ತಮ್ಮ

ಬೆಂಗಳೂರು :ಮೊದಲ ಕಳೆದ ವರ್ಷ ಲಾಕ್‌ಡೌನ್ ಆದಾಗ ಅದೆಷ್ಟೊ ನಾಯಕರು, ದುಡ್ಡಿದ್ದವರು ಹಸಿದವರಿಗೆ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದರು. ಮೂರು ಹೊತ್ತಿಗೆ ಬಿಸಿ ಊಟ ವಿತರಿಸಿ, ದಿನಸಿ ನೀಡಿ ಬಡವರಿಗೆ ಅನೇಕರು ಸಹಾಯ ಹಸ್ತ ನೀಡಿದ್ದರು. ಆದ್ರೀಗ ಈ ಎಲ್ಲಾ ಸಹಾಯ ಹಸ್ತಗಳು ಕೊರೊನಾ ಭೀತಿಯ ನಡುವೆ ಮರೆಯಾಗಿವೆ. ಈ ನಡುವೆ ಸಹೋದರರಿಬ್ಬರು ನೂರಾರು ಜನರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.

ನಿತ್ಯ 200ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿರುವ ಅಣ್ತಮ್ಮ

ಆದ್ರೆ ಲಾಕ್ ಡೌನ್‌ನಲ್ಲೂ ಪಾರ್ಟಿಗೆ ದಾರಿ‌ ಹುಡುಕುವ ಯುವಕರ ನಡುವೆ ಅಣ್ಣ-ತಮ್ಮ ಸೇರಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ಸಹೋದರರಿಬ್ಬರು ಸೇರಿ ರಾಜಾಜಿನಗರ ಸುತ್ತಮುತ್ತಲ ಸುಮಾರು 200ಕ್ಕೂ ಹೆಚ್ಚು ಹಸಿದ ಹೊಟ್ಟೆಗಳಿಗೆ ಅನ್ನಾಹಾರ ನೀಡುತ್ತಿದ್ದಾರೆ.

ನಿತ್ಯ 200ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿರುವ ಅಣ್ತಮ್ಮ

ಭರತ್ ಸನ್ಚೆಟಿ, ದರ್ಶನ್ ಸನ್ಚೆಟಿಯಿಂದ ದಿನ ನಿತ್ಯ ಹಸಿದ ಹೊಟ್ಟೆ ತುಂಬಿಸುವ ಕಾರ್ಯ ನಡೆಯುತ್ತಿದೆ. ಮೂಲತಃ ಭರತ್ ಕುಟುಂಬ ಸ್ವಂತ ಉದ್ದಿಮೆ ಹೊಂದಿದ್ದಾರೆ. ಲಾಕ್​ಡೌನ್​ನಲ್ಲಿ ನಿತ್ಯ ಹಸಿವಿನಿಂದ ಪರದಾಡುವವರನ್ನ ನೋಡಿ ಭರತ್ ತಮ್ಮ ಕೈಲಾದಷ್ಟು ಜನಕ್ಕೆ ಊಟ ನೀಡಲು ಮುಂದಾಗಿದ್ದಾರೆ.

ನಿತ್ಯ 200ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿರುವ ಅಣ್ತಮ್ಮ

ಅಣ್ಣ ಭರತ್ ಕಾರ್ಯಕ್ಕೆ ತಮ್ಮ‌ ದರ್ಶನ್ ಕೈಜೋಡಿಸಿದ್ದಾರೆ. ಇಬ್ಬರೂ ಸೇರಿ ದಿನ ನಿತ್ಯ ಹಸಿದವರಿಗೆ ಆಹಾರ ನೀಡುತ್ತಿದ್ದಾರೆ. ಅಣ್ಣ-ತಮ್ಮಂದಿರು ದಿನದಲ್ಲಿ ಹತ್ತಾರು ಕಿಲೋಮೀಟರ್ ಸುತ್ತಿ ಹಸಿದವರಿಗೆ ಆಹಾರ ನೀಡುತ್ತಿದ್ದಾರೆ. ಇವರ‌ ಒಳ್ಳೆಯ ಕೆಲಸಕ್ಕೆ ಪೊಲೀಸ್ರು ಸಹ ಕೈ ಜೋಡಿಸಿದ್ದು, ಈ ಸಹೋದರರು ರಾಜಾಜಿನಗರ, ಮಾಗಡಿ ರಸ್ತೆ, ಯಶವಂತಪುರದಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

ಓದಿ:ಸೋಂಕಿತರ ಸಂಖ್ಯೆ ತಗ್ಗುತ್ತಿದ್ದರೂ ನಿಲ್ಲದ ಸಾವು.. ದೇಶದಲ್ಲಿ ಮತ್ತೆ 4,194 ಮಂದಿ ಕೊರೊನಾಗೆ ಬಲಿ

ABOUT THE AUTHOR

...view details