ಬೆಂಗಳೂರು:ಪ್ರವಾಹ ವಿಕೋಪವಾಗಿ ಎರಡು ತಿಂಗಳು ಆಗಿದೆ. ಒಂದು ಬಿಡಿಗಾಸನ್ನೂ ಈವರೆಗೆ ಪ್ರಧಾನಿ ಮೋದಿ ಸರ್ಕಾರ ನೀಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದ್ದಾರೆ.
ನೆರೆ ಪರಿಹಾರದ ವರದಿ ತಿರಸ್ಕಾರ.. ಸರ್ವಪಕ್ಷ ಮುಖಂಡರ ಸಭೆ ಕರೆಯಲು ದಿನೇಶ್ ಗುಂಡೂರಾವ್ ಆಗ್ರಹ.. - Flood relief fund
ಕರ್ನಾಟಕದಲ್ಲಿ ಭೀಕರ ಪ್ರವಾಹ ಉಂಟಾದ ಹಿನ್ನೆಲೆ ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.
![ನೆರೆ ಪರಿಹಾರದ ವರದಿ ತಿರಸ್ಕಾರ.. ಸರ್ವಪಕ್ಷ ಮುಖಂಡರ ಸಭೆ ಕರೆಯಲು ದಿನೇಶ್ ಗುಂಡೂರಾವ್ ಆಗ್ರಹ..](https://etvbharatimages.akamaized.net/etvbharat/prod-images/768-512-4647009-thumbnail-3x2-vicky.jpg)
ದಿನೇಶ್ ಗುಂಡೂರಾವ್
ಈ ಕುರಿತು ಟ್ವೀಟ್ ಮಾಡಿರುವ ಅವರು, ಈಗ ಕರ್ನಾಟಕ ಸರ್ಕಾರದ ನೆರೆ ಪರಿಹಾರ ವರದಿಗೂ ಕಿಮ್ಮತ್ತಿಲ್ಲ. ಗಾಯದ ಮೇಲೆ ಬರೆ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ. ಈಗಲಾದರೂ ಸಿಎಂ ಬಿ ಎಸ್ ಯಡಿಯೂರಪ್ಪನವರು ಸರ್ವಪಕ್ಷದ ಮುಖಂಡರ ಸಭೆಯನ್ನು ತಕ್ಷಣ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರದಿಂದ ಆಗುತ್ತಿರುವ ಘೋರ ಅನ್ಯಾಯದ ಬಗ್ಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.