ಕರ್ನಾಟಕ

karnataka

ETV Bharat / state

ಈ ವಾರದೊಳಗೆ ಕೇಂದ್ರದಿಂದ ನೆರೆ‌ ಪರಿಹಾರ ಬಿಡುಗಡೆ: ಬಸವರಾಜ್ ಬೊಮ್ಮಾಯಿ - ಔರಾದ್ಕರ್ ವರದಿ ಶೀಘ್ರ ಜಾರಿ

ವಿಕಾಸಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ನೆರೆಪರಿಹಾರ ಹಣಕ್ಕೆ ಕೆಲ ಪ್ರಕ್ರಿಯೆಗಳು ಇವೆ. ನಮ್ಮ ಲೆಕ್ಕಕ್ಕೂ, ಅವರ ಲೆಕ್ಕಕ್ಕೂ ವ್ಯತ್ಯಾಸಗಳಿವೆ. ಈ ವಾರದೊಳಗೆ ಬಹುತೇಕ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವರಾಜ್ ಬೊಮ್ಮಾಯಿ

By

Published : Oct 4, 2019, 3:41 PM IST

ಬೆಂಗಳೂರು: ಬಹುತೇಕ ಈ ವಾರದೊಳಗೆ ನೆರೆ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ನೆರೆಪರಿಹಾರ ಹಣಕ್ಕೆ ಕೆಲ ಪ್ರಕ್ರಿಯೆಗಳು ಇವೆ. ನಮ್ಮ ಲೆಕ್ಕಕ್ಕೂ, ಅವರ ಲೆಕ್ಕಕ್ಕೂ ವ್ಯತ್ಯಾಸಗಳು ಇರಬಹುದು. ಅದು ನನಗೆ ಗೊತ್ತಿಲ್ಲ. ಆ ಸಂಬಂಧ ಸ್ಪಷ್ಟೀಕರಣ ಕೇಳುವುದು ಸಹಜ. ಕೇಂದ್ರದಲ್ಲಿ ಉನ್ನತ‌ ಮಟ್ಟದ ಸಭೆ ನಡೆಯಲಿದ್ದು, ವಾರದೊಳಗೆ ಬಹುತೇಕ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದಿಂದ ನೆರೆ‌ ಪರಿಹಾರ ಬಿಡುಗಡೆಯಾಗಲಿದೆ

ನೆರೆ ಪರಿಹಾರದಲ್ಲಿ ಬೇರೆ ಬೇರೆ ಹಂತಗಳಿವೆ. ನೆರೆ ಪರಿಹಾರ ಸಂಬಂಧ ಗ್ರೌಂಡ್​​ನಲ್ಲಿ ಕೆಲಸ ನಿಲ್ಲಿಸಿಲ್ಲ. ನಾವು ಹಣ‌ ಬಿಡುಗಡೆ ಮಾಡಿದ್ದೇವೆ. ಕೇಂದ್ರದಿಂದ ಹಣ ಬಂದರೆ ಪರಿಹಾರ ಕಾಮಗಾರಿ ಚುರುಕು ಪಡೆಯುತ್ತದೆ ಎಂದು ತಿಳಿಸಿದರು.

ಕಳೆದ ಬಾರಿಯೂ ನೆರೆ ಪರಿಹಾರ ಕೇಳಿದ ಒಂದೂವರೆ ತಿಂಗಳ ಬಳಿಕ‌ ಪರಿಹಾರ ಘೋಷಣೆಯಾಗಿತ್ತು. ಡಿಸಿ ಅಕೌಂಟ್​​ನಲ್ಲಿ ದುಡ್ಡು ಇದೆ, ಕೆಲಸಗಳು ನಿಂತಿಲ್ಲ. ಯಾವ ನೆರೆ ಪರಿಹಾರ ಕೆಲಸ ಮಾಡಬೇಕು ಅದೆಲ್ಲ ನಡೆಯುತ್ತಿದೆ ಎಂದು ತಿಳಿಸಿದರು.

ಔರಾದ್ಕರ್ ವರದಿ ಶೀಘ್ರ ಜಾರಿ:

ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಅಕ್ಟೋಬರ್ 6 ರಂದು ಸಿಎಂ ಜತೆ ಸಭೆ ನಡೆಸುತ್ತೇವೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

ವರದಿ ಜಾರಿಗೆ ಸಿಎಂ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ.‌ ಅತೀ ಶೀಘ್ರದಲ್ಲೇ ವರದಿ ಜಾರಿಯಾಗಲಿದೆ. ಸಿಎಂ ಸಭೆ ಬಳಿಕ ಮತ್ತೊಮ್ಮೆ ವರದಿಯನ್ನು ‌ಆರ್ಥಿಕ ಇಲಾಖೆಗೆ ಕಳುಹಿಸಲಾಗುವುದು. ಬಳಿಕ ಗೃಹ ಇಲಾಖೆ ಈ ಸಂಬಂಧ ಅಂತಿಮ‌ ಆದೇಶ ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details