ಕರ್ನಾಟಕ

karnataka

By

Published : Oct 3, 2022, 9:04 PM IST

ETV Bharat / state

ಇಂಧನ ಹೊಂದಾಣಿಕೆ ಶುಲ್ಕ ಕೈಗಾರಿಕೆಗಳಿಗೆ ಹೊರೆ:ಸರ್ಕಾರದ ಮಧ್ಯಪ್ರವೇಶಕ್ಕೆ ಎಫ್​​​​ಕೆಸಿಸಿಐ ಮನವಿ

ಅ.1ರಿಂದ ಇಂಧನ ಹೊಂದಾಣಿಕೆ ಶುಲ್ಕ ಅನ್ವಯವಾಗುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದ್ದು, ಇದರಿಂದ ಕೈಗಾರಿಕೆಗಳು ಮತ್ತು ವರ್ತಕರಿಗೆ ಹೊರೆಯಾಗಲಿದ್ದು, ರಾಜ್ಯ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಎಫ್​ಕೆಸಿಸಿಐ ಅಧ್ಯಕ್ಷ ಮನವಿ ಮಾಡಿದ್ದಾರೆ.

KN_BNG_02_
ಎಫ್​ಕೆಸಿಸಿ

ಬೆಂಗಳೂರು: ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್ 1 ರಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೊರಡಿಸಿರುವ ಆದೇಶದಿಂದ ಕೈಗಾರಿಕೆಗಳು ಮತ್ತು ವರ್ತಕರಿಗೆ ಹೊರೆಯಾಗಲಿದ್ದು, ರಾಜ್ಯ ಸರ್ಕಾರ ನೆರವಿಗೆ ದಾವಿಸಬೇಕು ಎಂದು ಎಫ್​ಕೆಸಿಸಿಐ ಮನವಿ ಮಾಡಿದೆ.

ಇಂಧನ ಹೊಂದಾಣಿಕೆ ಶುಲ್ಕಗಳನ್ನು (ಎಫ್‌ಎಸಿ) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ಕಾಯ್ದೆಯ ಸೆಕ್ಷನ್ 62 (4) ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ಮೂಲಕ ನಿರ್ಧರಿಸುತ್ತಿದೆ. ಸೆಕ್ಷನ್ 62 (4) ನಿಯಂತ್ರಣದಿಂದ ನಿರ್ದಿಷ್ಟಪಡಿಸಿದಂತೆ ಇಂಧನ ಹೆಚ್ಚುವರಿ ಶುಲ್ಕವಾಗಿ ವಿಧಿಸಬಹುದಾದ ಯಾವುದೇ ಶುಲ್ಕಗಳನ್ನು ನಿರ್ಧರಿಸಲು ಅವಕಾಶವಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಎಂಎಸ್ಎಂಇ ವಲಯ ಮಿಲಿಯನ್ ಯುನಿಟ್‌ಗಳನ್ನು ಮಾತ್ರ ಬಳಸುವುದರಿಂದ ವಿದ್ಯುತ್ ತೆರಿಗೆಯನ್ನು ಶೇ 4 ಕ್ಕೆ ಇಳಿಸಲು ನಾವು ರಾಜ್ಯ ಸರ್ಕಾರವನ್ನು ವಿನಂತಿಸುತ್ತೇವೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲ್ ರೆಡ್ಡಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಈ ಮಧ್ಯಸ್ಥಿಕೆಯು ಕರ್ನಾಟಕ ರಾಜ್ಯದಲ್ಲಿ 5.35 ಲಕ್ಷ ಎಂಎಸ್‌ಎಂಇ ಘಟಕಗಳಿಗೆ ಅಪಾರ ನೆರವು ನೀಡುತ್ತದೆ. ಇದರಲ್ಲಿ ಸುಮಾರು 40 ಲಕ್ಷ ಜನ ಉದ್ಯೋಗಿಗಳಿದ್ದು,ಅವರು ತಮ್ಮ ಕುಟುಂಬದಲ್ಲಿ ಸುಮಾರು 4 ವ್ಯಕ್ತಿಗಳನ್ನು ನೋಡಿಕೊಳ್ಳುತ್ತಾರೆ. ಆಹಾರ, ವಸತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸರ್ಕಾರದ ಹೊರೆ ಕಡಿಮೆ ಮಾಡಲು ಎಂಎಸ್ಎಂಇಗಳು ಕಾಳಜಿ ವಹಿಸುತ್ತವೆ.

ಈ ಹಿಂದೆ, ಕೆಇಆರ್‌ಸಿ ಮತ್ತು ಸುಂಕ ಪರಿಷ್ಕರಣೆ ಆದೇಶವು ಎಂಎಸ್‌ಎಂಇಗಳಿಗೆ ಪ್ರತಿ ಯೂನಿಟ್‌ಗೆ 50 ಪೈಸೆ ರಿಯಾಯಿತಿ ನೀಡಿತ್ತು. ಆದಾಗ್ಯೂ, ಈ ರಿಯಾಯಿತಿಯನ್ನು ಮೊದಲ ಇಂಧನ ಹೊಂದಾಣಿಕೆ ಸುಂಕದ ಹೆಚ್ಚಳ ಮತ್ತು ನಂತರದ ಎರಡನೇ ಇಂಧನ ಹೊಂದಾಣಿಕೆ ಸುಂಕದ ಹೆಚ್ಚಳದಿಂದ ತೆಗೆದುಹಾಕಲಾಗಿದೆ.

ವಿದ್ಯುತ್ ತೆರಿಗೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಆದಾಯ ರೂ.2,823 ಕೋಟಿಗಳು ಮತ್ತು ರಾಜ್ಯ ಸರ್ಕಾರವು ನೀಡುವ ರಿಯಾಯಿತಿಗಳು ರಾಜ್ಯದ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಮತ್ತು ಬಜೆಟ್ ಬೆಂಬಲದ ಅಗತ್ಯವಿರುವುದಿಲ್ಲ. ಹಾಗಾಗಿ ನಮ್ಮ ನೆರವಿಗೆ ಸರ್ಕಾರ ಧಾವಿಸಬೇಕಿದೆ. ಈ ಸಂಕಷ್ಟದ ಅವಧಿಯಲ್ಲಿ ಕೈಗಾರಿಕೆಗಳು ಮತ್ತು ವ್ಯಾಪಾರಕ್ಕೆ ಸಹಾಯ ಮಾಡಲು ಸರ್ಕಾರವು ಮುಂದೆ ಬರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಬಿ ವಿ ಗೋಪಾಲ್ ರೆಡ್ಡಿ ಪತ್ರಿಕಾ ಹೇಳಿಕೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ಶಾಕ್: ಅ.1 ರಿಂದ ಮತ್ತಷ್ಟು ದುಬಾರಿ

ABOUT THE AUTHOR

...view details