ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಕೊಲೆ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಸಂತೋಷ್(21) ಕಾಲಿಗೆ ಗುಂಡು ತಗುಲಿದೆ.
ರಾಜಗೋಪಾಲನಗರದ ಜಿ.ಕೆ. ಡಬ್ಲ್ಯೂ ಲೇಔಟ್ನಲ್ಲಿ ಫೈರಿಂಗ್ ನಡೆದಿದ್ದು, ಸಂತೋಷ್ ಅದೇ ಬಡಾವಣೆಯ ರೌಡಿಶೀಟರ್ ಆಗಿದ್ದ ಎಂದು ತಿಳಿದು ಬಂದಿದೆ. ಇದೇ ಜ. 9ರಂದು ಶ್ರೀನಿವಾಸ್ ಅಲಿಯಾಸ್ ಕರಿ ಸೀನನ ಕೊಲೆ ನಡೆದಿದ್ದು, ಸಂತೋಷ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಹಾಡಹಹಗಲೇ ರಾಜಗೋಪಾಲನಗರದ ಕಸ್ತೂರಿ ನಗರದಲ್ಲಿ ಆರೋಪಿಗಳು ಹತ್ಯೆಗೈದಿದ್ದರು.