ಕರ್ನಾಟಕ

karnataka

ETV Bharat / state

ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ : 3 ರೀತಿ ಹೇಳಿಕೆಕೊಟ್ಟ ಆರೋಪಿಗಳು, ಪೊಲೀಸರಿಗೆ ತಲೆನೋವು - Fire to Satish Reddy car case news

ಜೈಲಿಗೆ ಹೋದವರಿಗೆ ಸಹಾಯ ಮಾಡಲಿಲ್ಲ. ಯಾರಿಗೂ ಸಹಾಯ ಮಾಡದೇ ಇವರು ದೊಡ್ಡವರಾ? ಎಂದು ಪೊಲೀಸರಿಗೇ ಮರು ಪ್ರಶ್ನಿಸಿದ್ದಾರಂತೆ. ಆದರೆ, ಯಾರು ಜೈಲಿಗೆ ಹೋಗಿದ್ದರು? ಯಾರಿಗೆ ರೆಡ್ಡಿ ಸಹಾಯ ಮಾಡಬೇಕಿತ್ತು ಎನ್ನುವುದು ತನಿಖೆ ವೇಳೆ ಗೊತ್ತಾಗಿಲ್ಲ. ಮೂರು ಹೇಳಿಕೆಗಳನ್ನು ದಾಖಲಿಸಿರುವ ಪೊಲೀಸರಿಗೆ ಕೇಸ್ ತಲೆ ನೋವಾಗಿ ಪರಿಣಮಿಸಿದೆ. ಸದ್ಯ ಹೆಚ್ಚಿನ ತನಿಖೆಯನ್ನು ನಗರದ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ನೇತ್ರತ್ವದಲ್ಲಿ ನಡೆಯುತ್ತಿದೆ..

Fire to Satish Reddy car case
ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ

By

Published : Aug 14, 2021, 5:33 PM IST

ಬೆಂಗಳೂರು :ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟಿದ್ದ ಪ್ರಕರಣದ ಸಂಬಂಧ ಬಂಧಿತರಾಗಿದ್ದ ಆರೋಪಿಗಳು ಮೂರು ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮೂರೂ ಹೇಳಿಕೆಗಳನ್ನು ಮರು ಪರಿಶೀಲನೆ ಮಾಡಲು ತನಿಖಾ ತಂಡ ನಿರ್ಧಾರಿಸಿದ್ದು, ಆರೋಪಿಗಳ ಮಾಹಿತಿಗೆ ಪೂರಕ ಸಾಕ್ಷಿಗಳನ್ನು ಹುಡುಕುತ್ತಿದೆ ಎನ್ನಲಾಗಿದೆ.

ಆರೋಪಿಗಳ ಹೇಳಿಕೆ1: ಬಡವರು ಬಡವರಾಗೇ ಇರುತ್ತಾರೆ. ಶ್ರೀಮಂತರು ಶ್ರೀಮಂತರಾಗಿಯೇ ಇರುತ್ತಾರೆ ಎಂದು ಆಕ್ರೋಶಗೊಂಡಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ. ಒಂದಲ್ಲ ಮೂರು ಸಲ ಕೆಲಸ ಕೇಳ್ಕೊಂಡು ಬಂದಿದ್ದೆವು. ಆದರೆ, ಅವರ ಮನೆ ಹತ್ತಿರ ಒಂದು ಸಾರಿ ಕೂಡ ಶಾಸಕ ಸತೀಶ್ ರೆಡ್ಡಿ ಭೇಟಿ ಆಗಲಿಲ್ಲ. ಗೇಟ್ ಬಳಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಕಾದು ವಾಪಸ್ ಹೋಗಿದ್ದೆವು. ಹಣವಿದ್ದವರು ಹಣ ಮಾಡುತ್ತಾ ದೊಡ್ಡ ಕಾರಿನಲ್ಲಿ ತಿರುಗುತ್ತಾರೆ. ನಾವು ಬಡವರು ಬಡವರಾಗಿಯೇ ಇರಬೇಕಾ? ಇವರೆಲ್ಲರಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನ ಮಾಡಿ ಈ ಕೆಲಸ ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳ ಹೇಳಿಕೆ 2 :ದೊಡ್ಡವರಿಗೆ ಹೊಡೆದರೆ ದೊಡ್ಡ ಹೆಸರು ಮಾಡಬಹುದು. ಹೀಗೆ ಎಷ್ಟು ದಿನ ಬದುಕೋದು ಏನೂ ಇಲ್ಲದವರಂತೆ. ನಾವು ದೊಡ್ಡವರಂತೆ ಆಗಬೇಕು, ಅದಕ್ಕೆ ದೊಡ್ಡವರಿಗೇ ಹೊಡೆಯಬೇಕು, ದೊಡ್ಡವರು ನಮ್ಮನ್ನು ಕಂಡರೆ ಭಯ ಪಡಬೇಕು ಎಂದು ಮಾತನಾಡಿಕೊಂಡಿದ್ದೆವು. ಇದಕ್ಕೆ ಬೆಂಗಳೂರಿನಲ್ಲಿ ದೊಡ್ಡ ರೌಡಿಯಾಗಿ ರಾಜಕೀಯದಲ್ಲಿ ಇರುವ ಓರ್ವನ ಹೆಸರು ಪ್ರಸ್ತಾಪಿಸಿ ನಾವು ಅವರಂತೆ ಆಗಬೇಕು. ಅದಕ್ಕೆ ದೊಡ್ಡವರಿಗೆ ಹೊಡೆಯಬೇಕು ಎಂದು ತೀರ್ಮಾನ ಮಾಡಿದ್ದಾಗಿ ಮತ್ತೊಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಹೇಳಿಕೆ 3 :ಜೈಲಿಗೆ ಹೋದವರಿಗೆ ಸಹಾಯ ಮಾಡಲಿಲ್ಲ. ಯಾರಿಗೂ ಸಹಾಯ ಮಾಡದೇ ಇವರು ದೊಡ್ಡವರಾ? ಎಂದು ಪೊಲೀಸರಿಗೇ ಮರು ಪ್ರಶ್ನಿಸಿದ್ದಾರಂತೆ. ಆದರೆ, ಯಾರು ಜೈಲಿಗೆ ಹೋಗಿದ್ದರು? ಯಾರಿಗೆ ರೆಡ್ಡಿ ಸಹಾಯ ಮಾಡಬೇಕಿತ್ತು ಎನ್ನುವುದು ತನಿಖೆ ವೇಳೆ ಗೊತ್ತಾಗಿಲ್ಲ. ಮೂರು ಹೇಳಿಕೆಗಳನ್ನು ದಾಖಲಿಸಿರುವ ಪೊಲೀಸರಿಗೆ ಕೇಸ್ ತಲೆ ನೋವಾಗಿ ಪರಿಣಮಿಸಿದೆ. ಸದ್ಯ ಹೆಚ್ಚಿನ ತನಿಖೆಯನ್ನು ನಗರದ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ನೇತ್ರತ್ವದಲ್ಲಿ ನಡೆಯುತ್ತಿದೆ.

ಘಟನೆ ಬಳಿಕ ಎಚ್ಚೆತ್ತ ಶಾಸಕ ಸತೀಶ್ ರೆಡ್ಡಿ:

ಘಟನೆ ಬಳಿಕ ಎಚ್ಚೆತ್ತ ಶಾಸಕ ಸತೀಶ್ ರೆಡ್ಡಿ ಮನೆಯ ಸುತ್ತ ಸಿಸಿಟಿವಿ ಕಣ್ಗಾವಲು ಹಾಕಿಸಲು ಮುಂದಾಗಿದ್ದಾರೆ. ಎಂಟಕ್ಕೂ ಹೆಚ್ಚು ಕ್ಯಾಮರಾಗಳು ಅಳವಡಿಕೆ ಮಾಡಲಾಗುತ್ತಿದ್ದು. ಮನೆಯ ಮೂಲೆ ಮೂಲೆಗೂ ಕ್ಯಾಮರಾ ಕೆಂಗಣ್ಣು ಇರುತ್ತದೆ ಎಂದು ಮಾಹಿತಿ ದೊರೆತಿದೆ.

ಮನೆಯ ಹಿಂದಿನ ಗೇಟ್ ವೆಲ್ಡಿಂಗ್ ಮಾಡಿಸಿ ಸಂಪೂರ್ಣ ಕ್ಲೋಸ್ ಮಾಡಿಸಲು ಶಾಸಕ ಸತೀಶ್ ರೆಡ್ಡಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಕೆಲ ಸಿಸಿಟಿವಿ ಇದ್ದರೂ ಕವರ್ ಆಗದ ಹಾಗೆ ಪ್ಲಾನ್ ಮಾಡಿ ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿತ್ತು. ಹೀಗಾಗಿ ಘಟನೆ ನಂತರ ಎಚ್ಚೆತ್ತು ಮನೆಯ ಸುತ್ತ ಹೆಚ್ಚುವರಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲು ಬಿಜೆಪಿ ಶಾಸಕ ಮುಂದಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಓದಿ:MLA ಕಾರಿಗೆ ಬೆಂಕಿ ಪ್ರಕರಣ- ಮೂವರ ಬಂಧನ: ಕೃತ್ಯಕ್ಕೆ ಕಾರಣವಾಯ್ತು ಶಾಸಕರ ಶ್ರೀಮಂತಿಕೆ!

For All Latest Updates

TAGGED:

ABOUT THE AUTHOR

...view details