ಬೆಂಗಳೂರು:ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ ಹಾಗೂ ಪ್ರಯಾಣಿಕನೋರ್ವನ ನಡುವಿನ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಬಗ್ಗೆ ನಗರದ ಕಾಡುಗೋಡಿ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.
ಇದೇ ಮೇ 14ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಟೆಕ್ಕಿ ಪಂಕಜ್ ಎಂಬಾತ ನಗರದ ಟಿನ್ ಫ್ಯಾಕ್ಟರಿಯಿಂದ ಐಟಿಪಿಎಲ್ಗೆ ಹೋಗಲು ಬಿಎಂಟಿಸಿ ಬಸ್ ಹತ್ತಿದ್ದ. ನಂತರ ಐಟಿಪಿಎಲ್ ನಿಲ್ದಾಣ ಬರುತ್ತಿದ್ದಂತೆ ಡೋರ್ ಬಳಿ ಪಂಕಜ್ ನಿಂತಿದ್ದ. ಈ ವೇಳೆ ಕಂಡಕ್ಟರ್ ಕೃಷ್ಣಪ್ಪ, ನೀನು ಕೆಳಗೆ ಬಿದ್ದು ಸತ್ತರೆ ನಾನ್ ಉತ್ತರ ಕೊಡಬೇಕು. ಡೋರ್ ಬಿಟ್ಟು ಒಳ ಹೋಗು ಎಂದು ಕಂಡಕ್ಟರ್ ಹೇಳಿದ್ದಾರಂತೆ. ಬಳಿಕ ಈ ಕುರಿತಂತೆ ಟೆಕ್ಕಿ ಪಂಕಜ್ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.
ಫೇಸ್ಬುಕ್ನಲ್ಲಿ ಟೆಕ್ಕಿ ಪೋಸ್ಟ್ ಗಲಾಟೆ ತಣ್ಣಗಾಗದ್ದನ್ನು ಮನಗಂಡ ಡ್ರೈವರ್ ಬಸ್ಸನ್ನು ಕಾಡುಗೋಡಿ ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿದ್ದಾನೆ. ಆಗ ಕರ್ತವ್ಯನಿರತ ಸರ್ಕಾರಿ ನೌಕರನ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಆರೋಪದಡಿ ಟೆಕ್ಕಿ ವಿರುದ್ಧ ಕಂಡಕ್ಟರ್ ಕೃಷ್ಣಪ್ಪ ದೂರು ನೀಡಿದ್ದಾರೆ. ಅಲ್ಲದೆ ಕಂಡಕ್ಟರ್ ಕೇಸ್ಗೆ ಪ್ರತಿಯಾಗಿ ಟೆಕ್ಕಿ ಕೂಡ ದೂರು ದಾಖಲಿಸಿದ್ದಾನೆ.
ಫೇಸ್ಬುಕ್ನಲ್ಲಿ ಟೆಕ್ಕಿ ಪೋಸ್ಟ್ ಫೇಸ್ಬುಕ್ನಲ್ಲಿ ಟೆಕ್ಕಿ ಪೋಸ್ಟ್:
ಇನ್ನು ಘಟನೆ ಬಳಿಕ ಟೆಕ್ಕಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾನೆ. ಬೆಂಗಳೂರಲ್ಲಿ ಹೊರ ರಾಜ್ಯದವರಿಗೆ ರಕ್ಷಣೆಯೇ ಇಲ್ಲ. ಹೊರ ರಾಜ್ಯದವರನ್ನು ನೋಡುವ ರೀತಿಯೇ ಬೇರೆಯಾಗಿದೆ. ಪೊಲೀಸರಿಂದ ನ್ಯಾಯವೇ ಸಿಕ್ಕಿಲ್ಲ ಎಂದು ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಆಕ್ರೋಶ ಹೊರ ಹಾಕಿದ್ದಾನೆ.