ಕರ್ನಾಟಕ

karnataka

ETV Bharat / state

ಜಗತ್ತಿನಲ್ಲಿ ಜನಿಸಿದವೆರಲ್ಲ ಜೈಪಾಲ್​​ ರೆಡ್ಡಿ ಆಗುವುದಿಲ್ಲ: ಮಾಜಿ ಸ್ಪೀಕರ್​ - Former Union Minister Jaipal Reddy

ಜೈಪಾಲ್ ರೆಡ್ಡಿ ಅವರು ಚಿಕ್ಕ ವಯಸ್ಸಿನಲ್ಲೇ ಪೊಲಿಯೋದಿಂದ ಅಂಗವಿಕಲತೆ ಸಮಸ್ಯೆ ಅನುಭವಿಸಿದ್ದರು. ಇದರಿಂದ ಎದೆಗುಂದದೆ 27ನೇ ವಯಸ್ಸಿಗೆ ಮೊದಲ ಬಾರಿ ಶಾಸಕರಾಗಿ ಅನಂತರ ಹಂತ ಹಂತವಾಗಿ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರಾಗಿದ್ದರು ಎಂದು ಮಾಜಿ ಸ್ಪೀಕರ್ ಕೆ.ರಮೇಶ್ ಕುಮಾರ್ ಹೇಳಿದ್ದಾರೆ.

ಮಾಜಿ ಸ್ಪೀಕರ್ ಕೆ.ರಮೇಶ್ ಕುಮಾರ್

By

Published : Aug 11, 2019, 9:52 PM IST

ಬೆಂಗಳೂರು: ಸಾರ್ವಜನಿಕ ಜೀವನದಲ್ಲಿ ಜನಸೇವೆಗೆ ಅವಕಾಶ ಸಿಗುವುದು ತುಂಬಾ ಕಷ್ಟ. ಸಿಕ್ಕರೆ ಅದನ್ನು ಉಳಿಸಿಕೊಳ್ಳೋದು ಇನ್ನೂ ಕಷ್ಟ. ಈ ನಡುವೆ ಕೊನೆವರೆಗೂ ಜೈಪಾಲ್ ರೆಡ್ಡಿ ಅವರು ಜನರ ನಂಬಿಕೆ ಉಳಿಸಿಕೊಂಡಿದ್ದರು ಎಂದು ಮಾಜಿ ಸ್ಪೀಕರ್ ಕೆ.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.

ಟಿ.ಸುಬ್ಬರಾಮಿ ಪೌಂಡೇಶನ್ ವತಿಯಿಂದ ನಗರದ ತೆಲುಗು ವಿಜ್ಞಾನ ಸಮಿತಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರ ಶ್ರದ್ಧಾಂಜಲಿ ಸಭಾ ಕಾರ್ಯಕ್ರಮದಲ್ಲಿ‌ ಅವರು ಮಾತನಾಡಿದರು. ಜೈಪಾಲ್ ರೆಡ್ಡಿ ಅವರು ಚಿಕ್ಕ ವಯಸ್ಸಿನಲ್ಲೇ ಪೊಲಿಯೋದಿಂದ ಅಂಗವಿಕಲತೆ ಸಮಸ್ಯೆ ಅನುಭವಿಸಿದ್ದರು. ಇದರಿಂದ ಎದೆಗುಂದದೆ 27ನೇ ವಯಸ್ಸಿಗೆ ಮೊದಲ ಬಾರಿ ಶಾಸಕರಾಗಿ ಅನಂತರ ಹಂತ ಹಂತವಾಗಿ ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರಾಗಿದ್ದರು.

ಕೇಂದ್ರ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರ ಶ್ರದ್ಧಾಂಜಲಿ ಸಭಾ ಕಾರ್ಯಕ್ರಮ

ಜಗತ್ತಿನಲ್ಲಿ ಎಷ್ಟು ಮಂದಿ ಜನಿಸುತ್ತಾರೆ. ಜನಿಸಿದವೆರಲ್ಲ ಜೈಪಾಲ್ ರೆಡ್ಡಿ ಆಗುವುದಿಲ್ಲ. ಇಳಿ ವಯಸ್ಸಿನಲ್ಲಿ ನಾನಾ ಕಾಯಿಲೆಯಿಂದ ಬಳಲುತ್ತಿದ್ದರೂ ಅವರು ಮಾತ್ರ ತಾವು ನಂಬಿಕೊಂಡಿದ್ದ ತತ್ವ - ಸಿದ್ಧಾಂತಗಳಿಂದ ಎಂದಿಗೂ ಹಿಂದೆ ಸರಿದಿರಲಿಲ್ಲ ಎಂದರು.

ಮಾಜಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಜೈಪಾಲ್ ರೆಡ್ಡಿ ಅವರು ಸಾಮಾಜಿಕ ಹೋರಾಟಗಾರ. ಧೀಮಂತ ವ್ಯಕ್ತಿತ್ವ ಹೊಂದಿದ್ದರು. ಸಚಿವರಾಗಿದ್ದಾಗ ತಮ್ಮ ಅಧಿಕಾರ ಬಳಸಿಕೊಂಡು ಜನ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ವೈಖರಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅನಾನುಕೂಲಗಳ ಮಧ್ಯೆಯು ಅಧ್ಯಯನಶೀಲರಾಗಿ ಸಾಮಾಜಿಕ ಕಾಳಜಿ‌ ಮೆರೆದಿದ್ದರು ಎಂದು‌ ಸ್ಮರಿಸಿದರು.

ABOUT THE AUTHOR

...view details