ಕರ್ನಾಟಕ

karnataka

ETV Bharat / state

ಮೋದಿ ಕರೆ ಧಿಕ್ಕರಿಸಿ ಅಪಾಯಕ್ಕೆ ಸಿಲುಕಬೇಡಿ:  ನಾವು ನಿಮ್ಮೊಂದಿಗಿದ್ದೇವೆ ಎಂದ ಸಿಎಂ - ಮೋದಿ ಅವರು 21 ದಿನ ಮನೆಯಲ್ಲಿ ಇರುವಂತೆ ಮನವಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 21 ದಿನ ಮನೆಯಲ್ಲಿ ಇರುವಂತೆ ಮನವಿ ಮಾಡಿ, ದೇಶದ ಜನತೆಯ ರಕ್ಷಣೆಗೆ ನಿಂತಿದ್ದಾರೆ. ಹಾಗಾಗಿ ಯಾರೂ ಅವರ ಕರೆಯನ್ನು ಧಿಕ್ಕರಿಸಿ, ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

Fallow the Modi's call
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Mar 24, 2020, 11:37 PM IST

ಬೆಂಗಳೂರು: ಯಾರೂ ಆತಂಕಕ್ಕೆ ಒಳಗಾಗಬೇಡಿ. ನಮ್ಮ ಸರ್ಕಾರ ನಿಮ್ಮ ಜೊತೆಗಿದೆ. ನಿಮ್ಮ ಯೋಗಕ್ಷೇಮ ನನ್ನ ಸರ್ಕಾರದ ಗುರಿ. ಮೋದಿ ಅವರ ಕರೆಯನ್ನು ಧಿಕ್ಕರಿಸಿ, ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೇ ಪರಿಸ್ಥಿತಿ ಲಾಭಕ್ಕೆ ಯತ್ನಿಸಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 21 ದಿನ ಮನೆಯಲ್ಲಿ ಇರುವಂತೆ ಮನವಿ ಮಾಡಿ, ದೇಶದ ಜನತೆಯ ರಕ್ಷಣೆಗೆ ನಿಂತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿಯವರಿಗೆ ಈ ಕ್ರಮ ಬಿಟ್ಟರೆ ಬೇರೊಂದು ಮಾರ್ಗ ಅವರ ಮುಂದಿರಲಿಲ್ಲ. ಜಗತ್ತಿನ ಅನೇಕ ದೇಶಗಳು ಈ ಮಹಾಮಾರಿ ಕೊರೊನಾ-19ನ್ನು ತಡೆಯಲು ವಿಫಲವಾದ ಕಾರಣ, ಮೋದಿ ಅವರು ದೂರದೃಷ್ಟಿ ಇಟ್ಟುಕೊಂಡು 21 ದಿನಗಳ ಕಾಲ ಮನೆಯಲ್ಲಿರುವ ಇರುವ ಕ್ರಮಕ್ಕೆ ಕರೆ ನೀಡಿದ್ದಾರೆ.

ದೇಶದ ಜನರ ರಕ್ಷಣೆ ಮಾಡಬೇಕು ಎನ್ನುವುದೇ ಮೋದಿ ಅವರ ಗುರಿ. ಈ ದೊಡ್ಡ ಮತ್ತು ಕಷ್ಟಕರ ಕಾರ್ಯದಲ್ಲಿ ನಾವು ಮೋದಿಯವರ ಜೊತೆಗಿದ್ದೇವೆ. ನಾನೊಬ್ಬನೇ ಅಲ್ಲ, ಕರ್ನಾಟಕದ 6.5 ಕೋಟಿ ಜನ ಅವರ ಜೊತೆ ಇದ್ದಾರೆ ಮತ್ತು ಪ್ರಧಾನಿಯವರ ಕರೆಯನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

21 ದಿನ ಮನೆಯಲ್ಲಿ ಕಾಲ ಕಳೆಯುವುದು ತಪಸ್ಸಿದ್ದಂತೆ. ಈ ತಪಸ್ಸಿನಲ್ಲಿ ನಾವೆಲ್ಲರೂ ಭಾಗಿಯಾಗಿ ನಮ್ಮ ಜೀವವನ್ನು ಉಳಿಸಿಕೊಳ್ಳೋಣ. ಇನ್ನು ರಾಜ್ಯ ಸರ್ಕಾರ ಈ ಸಮಯದಲ್ಲಿ ಜನರನ್ನು ರಕ್ಷಣೆ ಮಾಡುವ ಹೊಣೆಯ ಜೊತೆಗೆ ಬಡವರಿಗೆ ಅಗತ್ಯ ವಸ್ತುಗಳನ್ನು ಹೇಗೆ ತಲುಪಿಸುವುದು ಎಂದು ಯೋಚಿಸುತ್ತಿದೆ ಮತ್ತು ತಲುಪಿಸುತ್ತೇವೆ. ನನ್ನ ಮನವಿಯೇನೆಂದರೆ ಯಾರೂ ಆತಂಕಕ್ಕೆ ಒಳಗಾಗಬೇಡಿ. ನಮ್ಮ ಸರ್ಕಾರ ನಿಮ್ಮ ಜೊತೆಗಿದೆ. ನಿಮ್ಮ ಯೋಗಕ್ಷೇಮ ನನ್ನ ಸರ್ಕಾರದ ಗುರಿ. ಮೋದಿ ಅವರ ಕರೆಯನ್ನು ಧಿಕ್ಕರಿಸಿ, ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಬೇಡಿ ಎಂದಿದ್ದಾರೆ. ಕಾಳಸಂತೆಕೋರರು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನ ಪಟ್ಟರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details