ಕರ್ನಾಟಕ

karnataka

ETV Bharat / state

ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಪ್ರಿನ್ಸಿಪಾಲ್ ಸೇರಿ 10 ಲೆಕ್ಚರರ್ಸ್ ವಿರುದ್ಧ ತನಿಖೆ ಚುರುಕು - ಪ್ರಿನ್ಸಿಪಾಲ್ ಸೇರಿ 10 ಲೆಕ್ಚರರ್ಸ್ ವಿರುದ್ಧ ತನಿಕೆ ಚುರುಕು

ಅಮೃತ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹರ್ಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಕಾಲೇಜಿನ ಪ್ರಿನ್ಸಿಪಾಲ್​ ಸೇರಿ 10 ಲೆಕ್ಚರರ್ಸ್​ಗಳ ವಿರುದ್ದ ಪರಪ್ಪನ ಅಗ್ರಹಾರ ಪೊಲೀಸರು FIR ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಹರ್ಷ

By

Published : Oct 28, 2019, 4:41 PM IST

ಬೆಂಗಳೂರು:ಇಂಜಿನಿಯರಿಂಗ್ ವಿದ್ಯಾರ್ಥಿ ಹರ್ಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಕಾಲೇಜು ಪ್ರಿನ್ಸಿಪಾಲ್ ಸೇರಿ 10 ಲೆಕ್ಚರರ್ಸ್​ಗಳ ವಿರುದ್ದ ಪರಪ್ಪನ ಅಗ್ರಹಾರ ಪೊಲೀಸರು FIR ದಾಖಲಿಸಿದ್ದಾರೆ.

ಅಮೃತ್ ಇಂಜಿನಿಯರಿಂಗ್ ಕಾಲೇಜಿನ ಪ್ರೀನ್ಸಿಪಾಲ್ ಧನ್ ರಾಜ್ ಸ್ವಾಮಿ ಹಾಗೂ ಇತರೆ ಶಿಕ್ಷಕರು ಸಾಕ್ಷ್ಯ ನಾಶ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ ಹಾಗೆ ವಿದ್ಯಾರ್ಥಿ ಹರ್ಷ ಬಿದ್ದ ಜಾಗದಲ್ಲಿ ನೀರು ಹಾಕಿ ರಕ್ತ ತೊಳೆದು ಸಾಕ್ಷ ನಾಶ ಮಾಡಿದ್ದಾರೆ. ಬಿದ್ದಿರುವ ಸ್ಥಳದಲ್ಲಿದ್ದ ಸಿಸಿಟಿವಿ ಪೊಟೆಜ್ ಡಿಲೀಟ್ ಮಾಡಿ ಕಾಲೇಜು ಆಡಳಿತ ಮಂಡಳಿ ತನಿಖೆಗೆ ಅಡ್ಡಿಪಡಿಸಿಸಿದ್ದಾರೆಂದು ಐಪಿಸಿ ಸೆಕ್ಷನ್​ 201, 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ‌ಮುಂದುವರೆಸಲಾಗಿದೆ.

ಕಾಲೇಜಿನಲ್ಲಿ ವಿದ್ಯುತ್ ಹಾಗೂ ಹಾಸ್ಟೆಲ್​​ ಊಟ ಸರಿ ಇಲ್ಲ ಎಂದು ಕಾಲೇಜು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ದ ಪತ್ರಿಭಟನೆ ನಡೆಸಿದ್ದರು. ಹೀಗಾಗಿ 40 ವಿದ್ಯಾರ್ಥಿಗಳನ್ನ ಅಮಾನತು ಮಾಡಲಾಗಿತ್ತು. 40 ವಿದ್ಯಾರ್ಥಿಗಳ ಪೈಕಿ ಹರ್ಷ ಸಹ ಒಬ್ಬ ವಿದ್ಯಾರ್ಥಿ ಹೀಗಾಗಿ ಹರ್ಷ ಮನನೊಂದು ಅಮೃತ ಕಾಲೇಜಿನ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ‌ಎಂದು ಹರ್ಷ ಪೋಷಕರು ಹಾಗೂ ಸ್ನೇಹಿತರು ಆರೋಪಿಸಿದ್ದರು.

ಸದ್ಯ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿ ಪ್ರಿನ್ಸಿಪಾಲ್ ಧನ್​ರಾಜ್ ಸ್ವಾಮಿ ಸೇರಿ ಹತ್ತು ಲೆಕ್ಚರರ್ಸ್​ಗಳ ವಿರುದ್ಧ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details