ಕರ್ನಾಟಕ

karnataka

ನಗ್ನ ವಿಡಿಯೋ ಹರಿಬಿಡುವುದಾಗಿ ಬ್ಲಾಕ್​​ಮೇಲ್​ : ಬೆಂಗಳೂರಲ್ಲಿ ಇಂಜಿನಿಯರ್​ ಆತ್ಮಹತ್ಯೆ

By

Published : Jan 26, 2022, 5:48 PM IST

ಯುವತಿ ಮಾತು ನಂಬಿ ವಿಡಿಯೋ ಕಾಲ್​​​​​ನಲ್ಲಿ ಬೆತ್ತಲಾಗಿದ್ದ ಇಂಜಿನಿಯರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಲಾಕ್​​​ಮೇಲ್ ಭೂತಕ್ಕೆ ಬೆಂಗಳೂರಲ್ಲಿ ಮತ್ತೊಂದು ಜೀವ ಬಲಿಯಾಗಿದೆ.

Engineer Committed Suicide
ಇಂಜಿನಿಯರ್​ ಆತ್ಮಹತ್ಯೆ

ಬೆಂಗಳೂರು:ಬ್ಲಾಕ್​​​ಮೇಲ್​​​ಗೆ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ಮಾತು ನಂಬಿ ವಿಡಿಯೋ ಕಾಲ್​​​​​ನಲ್ಲಿ ಬೆತ್ತಲಾಗಿದ್ದ ಇಂಜಿನಿಯರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆಲ ದಿನಗಳ ಹಿಂದೆಯಷ್ಟೇ ಸೈಬರ್ ಕ್ರಿಮಿಗಳ ಬ್ಲಾಕ್​​ಮೇಲ್​​​ನಿಂದ ವೈದ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಯುವತಿ ಸೋಗಿನಲ್ಲಿ ಮೆಸೇಜ್ ಮಾಡಿ ಬ್ಲಾಕ್ ಮೇಲ್ ಮಾಡ್ತಿದ್ದ ಭೂಪಾಲ್ ಮೂಲದ ಸಾರ್ಥಕ್ ಎಂಬಾತನನ್ನು ಬಂಧಿಸಲಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೇಸ್​ ಬೆಳಕಿಗೆ ಬಂದಿದೆ. ಈ ಬಾರಿ ಇಂಜಿನಿಯರ್ ರೋಹಿತ್ ಎಂಬುವವರು ಬ್ಲಾಕ್​​ಮೇಲ್ ಭೂತಕ್ಕೆ ಬಲಿಯಾಗಿದ್ದಾನೆ.

ನಗ್ನ ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ:ವೃತ್ತಿಯಲ್ಲಿ ಮೃತ ರೋಹಿತ್ ಇಂಜಿನಿಯರ್​ ಆಗಿದ್ದು, ಇನ್​ಸ್ಟಾಗ್ರಾಮ್​​​​​ನಲ್ಲಿ ರೋಹಿತ್​​​​​ಗೆ ಯುವತಿಯೋರ್ವಳು ಪರಿಚಯವಾಗಿದ್ದಾಳೆ. ಕಾಲ ಕಳೆದಂತೆ ಆಕೆಯ ಜೊತೆ ಸಲುಗೆಯಿಂದ ಮಾತನಾಡಲು ಆರಂಭಿಸಿದ್ದನು. ಆತ್ಮೀಯತೆ ಬೆಳೆಯುತ್ತಿದ್ದಂತೆ ವಿಡಿಯೋ ಕಾಲ್ ಮಾಡಿ ಗಂಟೆಗಟ್ಟಲೇ ಮಾತನಾಡುತ್ತಿದ್ದನು. ಇಷ್ಟಾಗಿದ್ದರೆ ಪರವಾಗಿರಲಿಲ್ಲ. ಆದರೆ ಅಲ್ಲಿ ಆಗಿದ್ದೇ ಬೇರೆ. ದಿನಕಳೆದಂತೆ ಇವರ ವಿಡಿಯೋ ಕಾಲ್ ಮಾತುಕತೆ ವಿಪರೀತವಾಗಿದೆ‌. ಹೀಗಿರುವವಾಗ ಯುವತಿ ರೋಹಿತ್​​ನನ್ನು ಬೆತ್ತಲಾಗುವಂತೆ ಉತ್ತೇಜಿಸಿದ್ದಾಳೆ. ಆಕೆಯ ಮಾತು ನಂಬಿದ ಈತ, ಹೇಳಿದಂತೆಲ್ಲ ಮಾಡಿದ್ದಾನೆ. ಆದ್ರೆ ನಂತರ ಆತ ಊಹೆಯೂ ಮಾಡಲಾರದಂತಹ ಶಾಕ್ ಕಾದಿತ್ತು.

ಇನ್​ಸ್ಟಾಗ್ರಾಮ್​​​ನಲ್ಲಿ ಈತನ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಯುವತಿ, ಅದೇ ವಿಡಿಯೋ ಇಟ್ಟುಕೊಂಡು ಬ್ಲಾಕ್​​​​ಮೇಲ್ ಮಾಡಲು ಶುರುಮಾಡಿದ್ದಾಳೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮಾನ ಮರ್ಯಾದೆಗೆ ಅಂಜಿದ ಆತ, ಮಲ್ಲೇಶ್ವರಂನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಆರು ತಿಂಗಳ ಕಂದಮ್ಮ ಸೇರಿ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ..

ಭಾಸ್ಕರ್ ರಾವ್ ಟ್ವೀಟ್​:

ಈ ಬಗ್ಗೆ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಪ್ರತಿಕ್ರಿಯಿಸಿ, ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಸಂಪರ್ಕದ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿದ್ದಕ್ಕಾಗಿ 24 ವರ್ಷದ ಇಂಜಿನಿಯರ್ ಯುವಕ ಬೆಂಗಳೂರಿನ ಮಲ್ಲೇಶ್ವರಂ ಬಳಿ ರೈಲ್ವೆ ಮಾರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಯ ಮತ್ತು ಅವಮಾನದಿಂದ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಯುವ ಸಮೂಹಕ್ಕೆ ಕಿವಿಮಾತು ಹೇಳಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು, ತನಿಖೆ ಮುಂದುವರೆಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಬ್ಲಾಕ್​​​ಮೇಲ್ ಮಾಡಿದ್ದು, ಯುವತಿನಾ ಅಥವಾ ಯುವತಿ ಸೋಗಿನಲ್ಲಿ ಯಾರಾದರೂ ಯುವಕರು ಹಣಕ್ಕಾಗಿ ಬ್ಲಾಕ್​​​​ಮೇಲ್ ಮಾಡಿದ್ರಾ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details