ಬೆಂಗಳೂರು: ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣಾ ಕೆಲಸಗಳು ಇರುವ ಕಾರಣ (ಫರ್ನೇಸ್ಗಳನ್ನು ಬದಲಾವಣೆ) ಚಿತಾಗಾರವನ್ನು ನಾಳೆಯಿಂದ ಒಂದು ವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತುರ್ತು ಕೆಲಸ ಹಿನ್ನೆಲೆ ಸುಮನಹಳ್ಳಿ ವಿದ್ಯುತ್ ಚಿತಾಗಾರ ಒಂದು ವಾರ ಸ್ಥಗಿತ - ಸುಮನಹಳ್ಳಿ ವಿದ್ಯುತ್ ಚಿತಾಗಾರ
ಬೆಂಗಳೂರಿನಲ್ಲಿ ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣಾ ಕೆಲಸಗಳು ಇರುವ ಕಾರಣ ನಾಳೆಯಿಂದ ಒಂದು ವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
![ತುರ್ತು ಕೆಲಸ ಹಿನ್ನೆಲೆ ಸುಮನಹಳ್ಳಿ ವಿದ್ಯುತ್ ಚಿತಾಗಾರ ಒಂದು ವಾರ ಸ್ಥಗಿತ Sumanahalli Electric Cemetery One Week Shutdown](https://etvbharatimages.akamaized.net/etvbharat/prod-images/768-512-11630397-thumbnail-3x2-vish.jpg)
ತುರ್ತು ಕೆಸಲ ಹಿನ್ನೆಲೆ ಸುಮನಹಳ್ಳಿ ವಿದ್ಯುತ್ ಚಿತಾಗಾರ ಒಂದು ವಾರ ಸ್ಥಗಿತ
ಸದ್ಯ ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆಗೆ ಪ್ರಮುಖ ಚಿತಾಗಾರವಾಗಿದ್ದ ಸುಮನಹಳ್ಳಿ ವಿದ್ಯುತ್ ಚಿತಾಗಾರವೇ ಸ್ಥಗಿತಗೊಂಡಿದೆ. ಇದರಿಂದ ಉಳಿದ ಹನ್ನೊಂದು ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಾಗಲಿದೆ.
ಈಗಾಗಲೇ ಚಿತಾಗಾರ ಬುಕಿಂಗ್ಗಾಗಿ ಜನ ಅರ್ಧ ದಿನ ಆಸ್ಪತ್ರೆಗಳ ಬಳಿಯೇ ಕಾಯುವ ಸ್ಥಿತಿ ಎದುರಾಗಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.