ಕರ್ನಾಟಕ

karnataka

By

Published : Jul 29, 2019, 8:27 PM IST

ETV Bharat / state

ಕೆಎಂಎಫ್​ ಚುನಾವಣೆ ಮುಂದೂಡಿ ಬಿಜೆಪಿಯಿಂದ ದ್ವೇಷದ ರಾಜಕಾರಣ: ರೇವಣ್ಣ

ಕೆಎಮ್ಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯನ್ನ ಯಾಕೆ ಮುಂದೂಡಿದ್ರು ಅಂದ್ರೆ, ನಮಗೆ ಎಂಟು ನಿರ್ದೇಶಕರ ಬೆಂಬಲ ಇದೆ. ಇಂದು ಚುನಾವಣೆ ನಡೆದರೆ ನಾವು ಗೆಲ್ಲುತ್ತೇವೆ ಎಂದು ಸಿಎಂ ಚುನಾವಣೆ ಮುಂದೂಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ.

ಎಚ್ ಡಿ ರೇವಣ್ಣ ಪತ್ರಿಕಾಗೋಷ್ಠಿ

ಬೆಂಗಳೂರು: ಇಂದು ನಡೆಯಬೇಕಿದ್ದ ಕೆಎಂಎಫ್​​ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿ ಸುತ್ತೋಲೆ ಹೊರಡಿಸಿದ ಹಿನ್ನೆಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪತ್ರಿಕಾಗೋಷ್ಠಿ ನಡೆಸಿದರು.

ರಾಜ್ಯ ಸರ್ಕಾರ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಸಿಎಂ ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ರು. ನಾವು ಗೆಲ್ಲುತ್ತೇವೆ ಅಂತ ಚುನಾವಣೆ ಮುಂದೂಡಿದ್ದಾರೆ. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿವೆ. ಅದರಲ್ಲಿ ಮಂಡ್ಯ ಮತ್ತು ತುಮಕೂರು ಸೂಪರ್ ಸೀಡ್ ಆಗಿದೆ. 4 ಬಾರಿ ಬೋರ್ಡ್ ಮೀಟಿಂಗ್ ಆಗಿದ್ರೂ ಪ್ರಯೋಜನವಾಗಿಲ್ಲ. 2 ನಾಮೀನೇಷನ್ ಅನರ್ಹ ಮಾಡಲಾಗಿದೆ. 15ನೇ ತಾರೀಖಿನಿಂದ 30ರ ಒಳಗೆ ಎಲೆಕ್ಷನ್ ಮಾಡಬೇಕೆಂದಿತ್ತು. ಅದಕ್ಕೆ ನಾವು ಇಂದು ಬೆಳಿಗ್ಗೆ 6:45ಕ್ಕೆ ನಾಮಿನೇಷನ್ ಹಾಕಿದ್ದೆವು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪತ್ರಿಕಾಗೋಷ್ಠಿ

ರಾಮನಗರ ಹಾಗೂ ಬೆಂಗಳೂರು ಒಕ್ಕೂಟದ ನಾಮಿನೇಷನ್​​ಗಳನ್ನ ರದ್ದು ಮಾಡಿದ್ದಾರೆ. ಆದ್ರೆ ಚುನಾವಣೆಯನ್ನ ಯಾಕೆ ಮುಂದೂಡಿದ್ರು? ನಮಗೆ ಎಂಟು ನಿರ್ದೇಶಕರ ಬೆಂಬಲ ಇದೆ. ಇಂದು ಚುನಾವಣೆ ನಡೆದರೆ ನಾವು ಗೆಲ್ಲುತ್ತೇವೆ ಎಂದು ಸಿಎಂ ಚುನಾವಣೆ ಮುಂದೂಡಿದ್ದಾರೆ. ಅಧಿಕಾರಿಗಳನ್ನ ಮ್ಯಾನ್ಯುಪ್ಲೇಟ್ ಮಾಡಿದ್ದಾರೆ. ದ್ವೇಷದ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ನಾನು ಭೀಮಾನಾಯ್ಕ್​​ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಟ್ಟು ಕೊಡ್ತೀನಿ ಅಂತಾ ಹೇಳಿಲ್ಲ. ಅವರು ಇದುವರೆಗೂ ಡೈರಿಗೆ ಹಾಲೇ ಹಾಕಿಲ್ಲ. ಇನ್ನು ಅಧ್ಯಕ್ಷ ಸ್ಥಾನ ಕೊಡೋದು ಹೇಗೆ? ನಾನು ಯಾರನ್ನೂ ಹೈಜಾಕ್ ಮಾಡಿಲ್ಲ. ‌ಎಲ್ಲ ನಿರ್ದೇಶಕರು ಇಲ್ಲೇ ಇದ್ದಾರೆ ಬೇಕಿದ್ರೆ ಕೇಳಿ. ಮಧ್ಯಾಹ್ನ ಚುನಾವಣೆಗೆ ಸ್ಟೇ ಕೊಡ್ತಾರೆ ಅಂದ್ರೆ ಇದರಿಂದ ಅರ್ಥ ಆಗುತ್ತೆ. ಇದರ ಹಿಂದೆ ರಾಜಕೀಯ ಕೈವಾಡ ಇದೆ ಎಂದರು.

ಅಲ್ಲದೆ ಕುಮಾರಸ್ವಾಮಿ ಭೀಮಾನಾಯ್ಕ್​​​ಗೆ ಮಾತು ಕೊಟ್ಟಿದ್ದಾರೆ ಎನ್ನುವ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ರೇವಣ್ಣ, ಭೀಮಾನಾಯ್ಕ್​​ಗೆ ಮಾತು ಕೊಡಲು ಕುಮಾರಸ್ವಾಮಿ ಯಾರು? ಕೆಎಂಎಫ್​​ಗೂ ಅವರಿಗೂ ಏನು ಸಂಬಂಧ? ಸದ್ಯ ಸ್ಟೇ ಆರ್ಡರ್​​ಗೆ ಅರ್ಜಿ‌ ಸಲ್ಲಿಸಿದ್ದೇನೆ. ಅದು ಸಿಕ್ಕ ಕೂಡಲೇ ನಿರ್ದೇಶಕರ ಜೊತೆ ಚರ್ಚಿಸಿ ಕಾನೂನು ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ತೇವೆ ಎಂದು ರೇವಣ್ಣ ತಿಳಿಸಿದರು.

ABOUT THE AUTHOR

...view details