ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ; ಹಾಜರಾತಿ ಪ್ರಮಾಣ ಹೆಚ್ಚಿಸುವತ್ತ ಗಮನ - bangalore latest news

6 ರಿಂದ 10ನೇ ತರಗತಿವರೆಗೆ ರೆಗ್ಯುಲರ್ ಕ್ಲಾಸ್ ನಡೆಯುತ್ತಿದ್ದು, ಇದರಲ್ಲಿ 9 -10ನೇ ತರಗತಿಯ ಹಾಜರಾತಿ ತೃಪ್ತಿದಾಯಕವಾಗಿದೆ. ಹಲವೆಡೆ ಶೇ.70 ರಷ್ಟು ಹಾಜರಾತಿ ಇದ್ದು, ಇನ್ನು ಕೆಲವು ಜಿಲ್ಲೆಯಲ್ಲಿ ಶೇ. 90 ರಷ್ಟು ಹಾಜರಾತಿ ಇದೆ. ಆದರೆ 6, 7 ಮತ್ತು 8ನೇ ತರಗತಿಯ ಹಾಜರಾತಿಯು ಸ್ವಲ್ಪ ಕಡಿಮೆ ಇದ್ದು, ಮುಂಬರುವ ದಿನಗಳಲ್ಲಿ ಇದು ಏರಿಕೆ ಆಗುವ ನಿರೀಕ್ಷೆ ಇದೆ.

education department put efforts to increase the attendance of students
ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾ - ಹಾಜರಾತಿ ಪ್ರಮಾಣ ಹೆಚ್ಚಿಸುವತ್ತ ಗಮನ

By

Published : Mar 5, 2021, 6:52 PM IST

ಬೆಂಗಳೂರು: ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ವಕ್ಕರಿಸಿದ್ದ ಮಹಾಮಾರಿ ಕೊರೊನಾ ಸೋಂಕಿನ ಹರಡುವಿಕೆ ತಡೆಯಲೆಂದು ಲಾಕ್​ಡೌನ್​ ಘೋಷಣೆಯಾಯ್ತು. ಬಳಿಕ ಕೋವಿಡ್ ಆರ್ಭಟ ಕಡಿಮೆಯಾಗುತ್ತಿದ್ದಂತೆ ಹಂತ ಹಂತವಾಗಿ ಅನ್​​ಲಾಕ್​​ ಆಗುತ್ತಾ ಬಂತು. ತದನಂತರ ಸೋಂಕು ನಿಯಂತ್ರಣಕ್ಕೆ ವ್ಯಾಕ್ಸಿನ್​ ಅಭಿಯಾನ ಆರಂಭವಾಯ್ತು. ಇದೀಗ ಎಲ್ಲಾ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆಯಾದರೂ ಕೊರೊನಾ ಸೋಂಕು ಇನ್ನೂ ಸಂಪೂರ್ಣವಾಗಿ ನಮ್ಮನ್ನು ಬಿಟ್ಟುಹೋಗಿಲ್ಲ. ಇದರ ನೇರ ಪರಿಣಾಮ ಬಿದ್ದದ್ದು ಮಾತ್ರ ಶಾಲಾ-ಕಾಲೇಜುಗಳಿಗೆ.

ಜಿಲ್ಲಾವಾರು ಹಾಜರಾತಿ ಪ್ರಮಾಣ

ಕಳೆದ ಕೆಲವು ದಿನಗಳ ಹಿಂದಷ್ಟೇ ಶಾಲಾ-ಕಾಲೇಜುಗಳು ಆರಂಭವಾಗಿದೆ. ಮೊದ ಮೊದಲು ಶಿಕ್ಷಣ ಇಲಾಖೆಯು 10 ನೇ ತರಗತಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ ಆರಂಭಿಸಿತ್ತು. ಬಳಿಕ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಿಧಾನವಾಗಿ ಅಂದರೆ ಕಳೆದ ಫೆಬ್ರವರಿ 22 ರಿಂದ 6 ರಿಂದ 9ನೇ ತರಗತಿಗಳು ಆರಂಭವಾಗಿವೆ. ಕೋವಿಡ್ ಹಿನ್ನೆಲೆ ರಾಜ್ಯದ ಶಾಲೆಗಳಲ್ಲಿ ಹಾಜರಾತಿ ಪ್ರಕ್ರಿಯೆ ಹೇಗಿದೆ? ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯಾ? ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಪ್ರತಿಕ್ರಿಯಿಸಿದ್ದಾರೆ.‌

ತೃಪ್ತಿದಾಯಕ ಹಾಜರಾತಿ ಪ್ರಮಾಣ:

6 ರಿಂದ 10ನೇ ತರಗತಿವರೆಗೆ ರೆಗ್ಯುಲರ್ ಕ್ಲಾಸ್ ನಡೆಯುತ್ತಿದ್ದು, ಇದರಲ್ಲಿ 9 -10ನೇ ತರಗತಿಯ ಹಾಜರಾತಿ ತೃಪ್ತಿದಾಯಕವಾಗಿದೆ. ಹಲವೆಡೆ ಶೇ.70 ರಷ್ಟು ಹಾಜರಾತಿ ಇದ್ದು, ಇನ್ನು ಕೆಲವು ಜಿಲ್ಲೆಯಲ್ಲಿ ಶೇ. 90 ರಷ್ಟು ಹಾಜರಾತಿ ಇದೆ. ಆದರೆ 6, 7 ಮತ್ತು 8ನೇ ತರಗತಿಯ ಹಾಜರಾತಿಯು ಸ್ವಲ್ಪ ಕಡಿಮೆ ಇದ್ದು, ಮುಂಬರುವ ದಿನಗಳಲ್ಲಿ ಇದು ಏರಿಕೆ ಆಗುವ ನಿರೀಕ್ಷೆ ಇದೆಯೆಂದು ತಿಳಿಸಿದರು.

ಬೆಂಗಳೂರಿನಲ್ಲಿ‌ ಹೆಚ್ಚುತ್ತಿರುವ ಕೋವಿಡ್​ ಕ್ಲಸ್ಟರ್ - ಮಕ್ಕಳ ಮೇಲೆ ವಿಶೇಷ ನಿಗಾ:

ಉದ್ಯಾನನಗರಿ ಬೆಂಗಳೂರು ಸೇರಿದಂತೆ ಹಲವೆಡೆ ಕೋವಿಡ್ ಕ್ಲಸ್ಟರ್​ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೋಷಕರಲ್ಲಿ ಆತಂಕ‌ ಕೊಂಚ ಜಾಸ್ತಿಯಾಗಿದೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನೆಲ್ಲ ಶಿಕ್ಷಕರಿಗೆ ಈ ಕುರಿತು ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿದೆ. ಮಕ್ಕಳ ಚಟುವಟಿಕೆ ಹಾಗು ಅವರ ಮುಖ ಭಾವದಲ್ಲಿ ಬದಲಾವಣೆಯಾದರೆ ಅವರಲ್ಲಿ ಧೈರ್ಯ ತುಂಬುವ ಕೆಲಸವನ್ನೂ ಕೂಡ ಮಾಡಲಾಗುತ್ತಿದೆ ಅಂತಾರೆ ಅನ್ಬುಕುಮಾರ್.

ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ-ಜಿಲ್ಲಾಮಟ್ಟದಲ್ಲಿ ಪರಿಶೀಲನೆ:

ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆಯಾದರೂ ಕೂಡ ಮುಂಜಾಗ್ರತಾ ದೃಷ್ಟಿಯಿಂದ ಕೋವಿಡ್​​ ನಿಯಮ ಪಾಲನೆ ಮಾಡುವುದು ಅನಿವಾರ್ಯ. ಹೀಗಾಗಿ ಪ್ರತಿ ಶಾಲೆಗಳಲ್ಲಿ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕೆಂದು ಖಡಕ್ ಸೂಚನೆ ನೀಡಲಾಗಿದೆ.

ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್

ಶಾಲಾರಂಭಕ್ಕೂ ಮುನ್ನ ಮತ್ತು ನಂತರವೂ ಸ್ಯಾನಿಟೈಸ್ ಮಾಡುವುದು, ಮಕ್ಕಳು ಮಾಸ್ಕ್ ಧರಿಸುವುದು ಸೇರಿದಂತೆ ಮನೆಯಿಂದಲೇ ಊಟ ತರುವಂತೆ ಸೂಚಿಸಲಾಗಿದೆ.

ಕೊರೊನಾ ನಿಯಮ ಪಾಲನೆಗಾಗಿ ಕಣ್ಗಾವಲಿಡಲು ಜಿಲ್ಲಾಮಟ್ಟದಲ್ಲಿ ತಂಡ ರಚನೆ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಯಾವ ವಿದ್ಯಾರ್ಥಿಗಳಲ್ಲೂ ಕೊರೊನಾ ಸೋಂಕು ಕಂಡು ಬಂದಿಲ್ಲ, ಹೀಗಾಗಿ ಮುಂದೆಯೂ ಇದನ್ನೇ ಪಾಲಿಸಿಕೊಂಡು ಬರಲಾಗುತ್ತದೆ ಎಂದು ಅವರು ವಿವರಿಸಿದರು. ‌

ABOUT THE AUTHOR

...view details