ಕರ್ನಾಟಕ

karnataka

ETV Bharat / state

ಖಾಸಗಿ ಅನುದಾನ ರಹಿತ, ಭಾಷಾಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಕಾಯಿದೆ 1983 ಅನ್ವಯ

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್​ದೀಕ್ಷಿತ್​ ಅವರಿರುವ ನ್ಯಾಯಪೀಠ ರಾಜರಾಜೇಶ್ವರಿ ದಂತ ಕಾಲೇಜು ಮತ್ತು ಆಸ್ಪತ್ರೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.

By ETV Bharat Karnataka Team

Published : Nov 4, 2023, 7:23 AM IST

high court
ಹೈಕೋರ್ಟ್​

ಬೆಂಗಳೂರು: ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಹಾಗೂ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ನೌಕರರ ರಾಜೀನಾಮೆ ಮತ್ತು ಹಿಂಬಡ್ತಿ ವಿಚಾರದಲ್ಲಿ ಕರ್ನಾಟಕ ಶಿಕ್ಷಣ ಕಾಯಿದೆ 1983 ಅನ್ವಯವಾಗಲಿದೆ ಎಂದು ಹೈಕೋರ್ಟ್ ತಿಳಿಸಿದೆ.

ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್​ 97 ರಾಜೀನಾಮೆ ನೀಡುವುದಕ್ಕೂ ಮುನ್ನ ಆಡಳಿತ ಮಂಡಳಿಗೆ ನೋಟಿಸ್​ ನೀಡುವ ವಿಚಾರ ಮತ್ತು ನಿಗದಿತ ನಮೂನೆಯಲ್ಲಿ ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಅಧಿಕಾರಿಯಿಂದ ದೃಢೀಕರಿಸುವ ವಿಚಾರನ್ನು ತಿಳಿಸಲಿದೆ. ಸೆಕ್ಷನ್​ 98 ಹಿಂಬಡ್ತಿ ನೀಡುವುದಕ್ಕಾಗಿ ಸಕ್ಷಮ ಪ್ರಾಧಿಕಾರ ಮತ್ತು ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಬಳಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿದೆ.

ರಾಜರಾಜೇಶ್ವರಿ ದಂತ ಕಾಲೇಜು ಮತ್ತು ಆಸ್ಪತ್ರೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್​ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಕರ್ನಾಟಕ ಶಿಕ್ಷಣ ಕಾಯಿದೆಯ ಈ ಸೆಕ್ಷನ್​ಗಳು ಕಾರ್ಮಿಕ ಕಾನೂನಿನಂತೆ ಸಾಮಾಜಿಕ ಭದ್ರತೆಯನ್ನು ಒದಗಿಸಲಿವೆ ಎಂದು ಅಭಿಪ್ರಾಯ ಪಟ್ಟಿದೆ.

ಕಾಲೇಜಿನ ವಾದವನ್ನು ಆಲಿಸಿದ ನ್ಯಾಯಪೀಠ, ಉದ್ಯೋಗಿಗಳ ಹಿಂಬಡ್ತಿಗೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್​ 98(1)ರಲ್ಲಿ ಯಾವುದೇ ಉದ್ಯೋಗ ಎಂಬ ಪದ ಬಳಸಲಾಗಿದೆ. ಅಲ್ಲದೆ ಸೆಕ್ಷನ್​ 2(15)ರ ಪ್ರಕಾರ ಶಿಕ್ಷಣ ಸಂಸ್ಥೆಯಲ್ಲಿರುವ ಉದ್ಯೋಗದಲ್ಲಿರುವ ವ್ಯಕ್ತಿ ಎಂಬುದಾಗಿ ವ್ಯಾಖ್ಯಾನಿಸುತ್ತದೆ. ಅಲ್ಲದೆ, ಪ್ರತಿ ಉದ್ಯೋಗಿ ಹುದ್ದೆಯನ್ನು ಲೆಕ್ಕಿಸದೆ ಒಳಗೊಂಡಿರುತ್ತದೆ. ಕಾರ್ಯಗಳ ಸ್ವರೂಪ ಅಥವಾ ಶಿಕ್ಷಣ ಸಂಸ್ಥೆಯ ಪ್ರಕಾರ, ವಿಭಾಗ 2(14) ಅಡಿಯಲ್ಲಿ ಹೊರತುಪಡಿಸಿ, ಇದು 'ಶಿಕ್ಷಣ ಸಂಸ್ಥೆ'ಯನ್ನು ವ್ಯಾಖ್ಯಾನಿಸುತ್ತದೆ. ‘ಬೋಧಕ ಸಿಬ್ಬಂದಿ’ ಮತ್ತು ‘ಅನುದಾನಿತ ಶಿಕ್ಷಣ ಸಂಸ್ಥೆ’ ಎಂಬ ಪದಗಳನ್ನು ಬಳಸಿಕೊಳ್ಳುವ ಸೆಕ್ಷನ್ 98(2)ರ ಪಠ್ಯದಿಂದ ಇದು ಸ್ಪಷ್ಟವಾಗುತ್ತದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಎ ಬಿ ಮುರಗೋಡು ಅವರ ಮಗ ಡಾ. ಸಂಜಯ್​ ಮುರಗೋಡು ಎಂಬುವರನ್ನು ಮೂಲ ವೇತನದಲ್ಲಿ ಶೇ.25 ರಷ್ಟು ಮಂಜೂರು ಮಾಡಿ ಮರು ನೇಮಕ ಮಾಡಿಕೊಳ್ಳುವಂತೆ ಕಾರ್ಮಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜರಾಜೇಶ್ವರಿ ದಂತ ಕಾಲೇಜು ಮತ್ತು ಆಸ್ಪತ್ರೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ,
ರಾಜರಾಜೇಶ್ವರಿ ದಂತ ಕಾಲೇಜಿನಲ್ಲಿ ರೋಗಶಾಸ್ತ್ರ ಮತ್ತು ಮೈಕ್ರೋಬಯಾಲಜಿ ವಿಭಾಗದ ಪ್ರೋಫೆಸರ್​ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಮುರುಗೋಡು ಅವರಿಗೆ 2021ರ ಜೂನ್​ 11ರಿಂದ 12 ತಿಂಗಳ ಅವಧಿಗೆ ಶೇ.25 ರಷ್ಟು ಮೂಲ ವೇತನ ಪಾವತಿ ಮಾಡುವ ಮೂಲಕ ವೃತ್ತಿಯಿಂದ ವಜಾಗೊಳಿಸುವುದಾಗಿ ನೋಟಿಸ್​ ಜಾರಿ ಮಾಡಿತ್ತು. ಜೂನ್​ 14ರಿಂದ 2021ರಿಂದ ಮೂರು ತಿಂಗಳಲ್ಲಿ ವಜಾಗೊಳಿಸುವುದಾಗಿ ನೋಟಿಸ್​ ಜಾರಿ ಮಾಡಿದ್ದರು.

ಮೇಲ್ಮನವಿ ಕುರಿತ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ್ದ ಕಾಲೇಜು ಪರ ವಕೀಲರು, ನಮ್ಮ ಕಕ್ಷಿದಾರರು ಖಾಸಗಿ ಅನುದಾನ ರಹಿತ ಹಾಗೂ ಭಾಷಾ ಅಲ್ಪಸಂಖ್ಯಾತ ಸಂಸ್ಥೆಯಾಗಿದೆ. ಹೀಗಾಗಿ ಕರ್ನಾಟಕ ಶಿಕ್ಷಣ ಕಾಯಿದೆ 1983 ಅನ್ವಯವಾಗುವುದಿಲ್ಲ ಎಂದು ವಾದ ಮಂಡಿಸಿದ್ದರು.

ಅಲ್ಲದೆ, ಟಿಎಂಎ ಪೈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ್ದ ವಕೀಲರು, ದಂತ ಕಾಲೇಜು ಗಳನ್ನು ದಂತ ವೈದ್ಯರ ಕಾಯಿದೆ ನಿರ್ವಹಣೆ ಮಾಡಲಿದೆ. ಹೀಗಾಗಿ ಅನುದಾನ ರಹಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಮತ್ತು ಇತರೆ ಶಿಕ್ಷಣ ಸಂಸ್ಥೆಗಳನ್ನು ಕರ್ನಾಟಕ ಶಿಕ್ಷಣ ಕಾಯಿದೆ 1983ರ ಸೆಕ್ಷನ್​ 98(1)ನ ವ್ಯಾಪ್ತಿಗೆ ಸೇರಿಸಲಾಗದು ಎಂದು ವಾದ ಮಂಡಿಸಿದ್ದರು.

ಇದನ್ನೂಓದಿ:ತರಳಬಾಳು ಕೇಂದ್ರದ ಮಾಜಿ ಕಾರ್ಯದರ್ಶಿ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ABOUT THE AUTHOR

...view details