ಕರ್ನಾಟಕ

karnataka

By

Published : Jun 30, 2022, 7:26 PM IST

ETV Bharat / state

ನದಿ ಬದಿಯ ರಕ್ಷಣೆಗೆ ಮಂಗಳೂರಿನಲ್ಲಿ ಇಕೋ ರೆಸ್ಟೋರೇಶನ್ ಯೋಜನೆ

ವಿವಿಧ ಕಾರಣಗಳಿಂದ ನಿರಂತರವಾಗಿ ನಡೆಯುತ್ತಿರುವ ನದಿಗಳ ಅತಿಕ್ರಮ ತಡೆಯಲು ಮತ್ತು ಮಣ್ಣನ್ನು ಸಂರಕ್ಷಿಸುವುದು ಈ ಯೋಜನೆಯ ಉದ್ದೇಶ.

Eco-Restoration Model Project first in Karnataka state to come up in Mangaluru
ಇಕೋ ರೆಸ್ಟೋರೇಶನ್ ಯೋಜನೆ

ಮಂಗಳೂರು: ನದಿತಟಗಳ ಅತಿಕ್ರಮಣವನ್ನು ತಡೆಯಲು, ತ್ಯಾಜ್ಯ ರಾಶಿ, ನೆರೆ ಹಾವಳಿ, ಜೀವವೈವಿಧ್ಯ ಸಂರಕ್ಷಣೆ ಮಾಡುವ ಉದ್ದೇಶದಿಂದ ಬಿದಿರು ನೆಡುತೋಪು ನಿರ್ಮಾಣದ ಇಕೋ ರೆಸ್ಟೋರೇಶನ್ ಎಂಬ ಯೋಜನೆಯನ್ನು ಅರಣ್ಯ ಇಲಾಖೆಯು ಮಂಗಳೂರಿನಲ್ಲಿ ಹಮ್ಮಿಕೊಂಡಿದೆ.


ತಾಲೂಕಿನ ನೇತ್ರಾವತಿ ಮತ್ತು ಫಲ್ಗುಣಿ ನದಿಯ ಎರಡುೂ ಬದಿಯಲ್ಲಿ ಮತ್ತು ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಇಕ್ಕೆಲಗಳಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ. ಮಂಗಳೂರು ತಾಲೂಕಿನಲ್ಲಿ 66 ಕಿ.ಮೀ. ಮತ್ತು ಬಂಟ್ವಾಳ ತಾಲೂಕಿನ 30 ಕಿ.ಮೀ. ನದಿ ಬದಿ ವ್ಯಾಪ್ತಿಯಲ್ಲಿ ಯೋಜನೆ ಬರುತ್ತಿದೆ. ಒಟ್ಟು 96 ಕಿ.ಮೀ ವ್ಯಾಪ್ತಿಯಲ್ಲಿ ಒಟ್ಟು 35 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಈ ಮೂಲಕ ರಾಜ್ಯದ ಮಾದರಿ ಯೋಜನೆಯಾಗಿ ಮಂಗಳೂರಿನಲ್ಲಿ ಇಕೋ ರೆಸ್ಟೋರೇಶನ್ ಅನುಷ್ಠಾನಕ್ಕೆ ತರಲಾಗುತ್ತಿದೆ.

ಇತ್ತೀಚೆಗೆ ನದಿಪಾತ್ರಗಳ ಅತಿಕ್ರಮಣ ಹೆಚ್ಚಾಗುತ್ತಿದೆ. ಕೆಲವೆಡೆ ನದಿ ತೀರದಲ್ಲಿ ಆವರಣ ಗೋಡೆ, ತೋಟ, ಕಟ್ಟಡ ನಿರ್ಮಿಸಿ ಅತಿಕ್ರಮಣ ಮಾಡಲಾಗಿದೆ. ಇದನ್ನು ತೆರವುಗೊಳಿಸಿ, ಆ ಜಾಗದಲ್ಲಿ ಬಿದಿರು ನೆಡುವುದೇ ಈ ಯೋಜನೆ. ಹಳೆಯ ಕಟ್ಟಡಗಳ ತ್ಯಾಜ್ಯ, ಸತ್ತ ಪ್ರಾಣಿಗಳು, ಕಸವನ್ನು ನದಿ ಬದಿ ಹಾಕಲಾಗುತ್ತಿದ್ದು, ಇದರಿಂದ ನದಿ ನೀರು ಮಲಿನವಾಗುತ್ತಿದೆ.


ಬಿದಿರು ಗಿಡಗಳಿಗೆ ಉಪ್ಪು ನೀರನ್ನು ತಡೆದುಕೊಳ್ಳುವ ಶಕ್ತಿ ಇದ್ದು, ಇದರ ಬೇರು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಇದು ಮಣ್ಣಿನ ಸವಕಳಿಗೂ ಅವಕಾಶ ನೀಡುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ನದಿಬದಿಯಲ್ಲಿ ಬಿದಿರು ತೋಪನ್ನು ನಿರ್ಮಿಸಲಾಗುತ್ತಿದೆ.

ABOUT THE AUTHOR

...view details