ಕರ್ನಾಟಕ

karnataka

ಡಿಎಸ್​​ಪಿ ಲಕ್ಷ್ಮಿ ಸಾವು ಪ್ರಕರಣ: ವಿವಿಧ ಆಯಾಮಗಳಲ್ಲಿ ಪೊಲೀಸರ ತನಿಖೆ

ಆರೋಪಿ ಮನೋಹರ್ ನಿವಾಸದಲ್ಲಿ ಡಿಎಸ್​​ಪಿ ಸಾವನ್ನಪ್ಪಿದ್ದು, ಲಕ್ಷ್ಮಿ ಹಾಗು ಮನೋಹರ್ ನಡುವಿನ ಸಂಬಂಧವೇನು?, ಯಾವಾಗಿನಿಂದ ಆರೋಪಿ ಮನೆಗೆ ಬರುತ್ತಿದ್ದರು?, ಎಷ್ಟು ಬಾರಿ ಇದೇ ರೀತಿ ಬಂದು ಪಾರ್ಟಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

By

Published : Dec 17, 2020, 5:01 PM IST

Published : Dec 17, 2020, 5:01 PM IST

dysp-laxmi-death-case-police-investigating
ಡಿವೈಎಸ್​​ಪಿ ಲಕ್ಷ್ಮಿ ಸಾವು ಪ್ರಕರಣ

ಬೆಂಗಳೂರು:ಡಿವೈಎಸ್​ಪಿ ಲಕ್ಷ್ಮಿ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಲಕ್ಷ್ಮಿ ಅವರ ಸಾವು ಆತ್ಮಹತ್ಯೆಯೋ, ‌ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡ ಆರೋಪಿಗಳ ಪೈಕಿ ಮನೋಹರ್ ಎಂಬಾತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರಿಗೂ ಒಳಪಡಿಸಿದ್ದಾರೆ. ಲಕ್ಷ್ಮಿ ಹಾಗು ಪತಿ ನವೀನ್ ಹೇಗಿದ್ದರು?, ಯಾವಾಗಿನಿಂದ ಬೇರೆಯಾಗಿದ್ದರು?, ಯಾವ ಕಾರಣಕ್ಕೆ ಬೇರೆಯಾಗಿದ್ದರು? ಎಂಬುದರ ಬಗೆಗೆಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇತ್ತೀಚಿನ ಲಕ್ಷ್ಮಿ ಜೀವನದ ಘಟನೆಗಳು, ನಡವಳಿಕೆ, ಯಾರ ಯಾರ ನಡುವೆ ಹೆಚ್ಚಿನ ಸಂಪರ್ಕ ಹೊಂದಿದ್ದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿ ಮನೋಹರ್ ನಿವಾಸದಲ್ಲಿ ಡಿಎಸ್​​ಪಿ ಸಾವನ್ನಪ್ಪಿದ್ದು, ಲಕ್ಷ್ಮಿ ಹಾಗು ಮನೋಹರ್ ನಡುವಿನ ಸಂಬಂಧ ಏನು?, ಯಾವಾಗಿನಿಂದ ಆರೋಪಿ ಮನೆಗೆ ಬರುತ್ತಿದ್ದರು?, ಎಷ್ಟು ಬಾರಿ ಇದೇ ರೀತಿ ಬಂದು ಪಾರ್ಟಿ ಮಾಡಿದ್ದಾರೆ ಎಂದೆಲ್ಲಾ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಓದಿ: ಕೋಲಾರದಲ್ಲಿ ನಡೆಯಲಿದೆ ಡಿವೈಎಸ್​ಪಿ ಲಕ್ಷ್ಮಿ ಅಂತ್ಯಸಂಸ್ಕಾರ

ABOUT THE AUTHOR

...view details