ಕರ್ನಾಟಕ

karnataka

ಸೋಂಕು ಕಡಿಮೆ ಆಗಬೇಕಾದರೆ ಲಾಕ್​ಡೌನ್ ಅನಿವಾರ್ಯ: ಸಚಿವ ಸುಧಾಕರ್

By

Published : May 7, 2021, 11:56 AM IST

ಕೋವಿಡ್ ಎರಡನೇ ಅಲೆ ಉಲ್ಭಣಗೊಳ್ಳುತ್ತಿದ್ದು ರಾಜ್ಯದಲ್ಲಿ ಲಾಕ್​ಡೌನ್​ ಅವಶ್ಯಕತೆ ಇದೆಯೆಂದು ಸಿಎಂ ನೇತೃತ್ವದ ಮಹತ್ವದ ಸಭೆಗೆ ತೆರಳುವ ಮುನ್ನ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.

dr sudhakar
ಆರೋಗ್ಯ ಸಚಿವ ಡಾ. ಸುಧಾಕರ್

ಬೆಂಗಳೂರು: ಸೋಂಕು ಕಡಿಮೆ ಆಗಬೇಕಾದರೆ ಲಾಕ್​ಡೌನ್ ಅನಿವಾರ್ಯ. ಇಲ್ಲದೇ ಹೋದ್ರೆ ಸಾವು-ನೋವು ಜಾಸ್ತಿ ಆಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.

ಆರೋಗ್ಯ ಸಚಿವ ಡಾ. ಸುಧಾಕರ್

ಮಾಧ್ಯಮಗಳ ಜತೆ ಸದಾಶಿವ ನಗರದ ತಮ್ಮ ನಿವಾಸದೆದುರು ಸಿಎಂ ಸಭೆಗೂ ಮುನ್ನ ಮತನಾಡಿದ ಅವರು, ಆರೋಗ್ಯ ಇಲಾಖೆ ಲಾಕ್​ಡೌನ್ ಅನ್ನು ಬಲವಾಗಿ ಪ್ರತಿಪಾದಿಸುತ್ತದೆ. ಸಿಎಂ ಜೊತೆಯೂ ಈ ಬಗ್ಗೆ ಮಾತನಾಡುತ್ತೇನೆ. ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ತಾರೆ ಎಂದರು.

ಲಾಕ್​ಡೌನ್​​ಗೆ ಸ್ಥಳೀಯವಾಗಿಯೂ ಒತ್ತಡವಿದೆ. ತಜ್ಞರು ಸಹ ಈ ಬಗ್ಗೆ ಸಹಮತ​ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಲಾಕ್​ಡೌನ್ ಅನಿವಾರ್ಯವಾಗಿದೆ ಎಂದು ಸುಧಾಕರ್ ತಿಳಿಸಿದರು.

ಇದನ್ನೂ ಓದಿ:ಜನ ನಿಯಮ ಪಾಲಿಸುತ್ತಿಲ್ಲ, ರಾಜ್ಯಕ್ಕೆ ಲಾಕ್​ಡೌನ್​ ಅನಿವಾರ್ಯ ಆಗಬಹುದು: ಸಿಎಂ ಬಿಎಸ್​​ವೈ

ABOUT THE AUTHOR

...view details