ಕರ್ನಾಟಕ

karnataka

ETV Bharat / state

ಕೋವಿಡ್ ಪರಿಹಾರ ನಿಧಿಗೆ ಪಿಇಎಸ್ ಸಂಸ್ಥೆ 3 ಕೋಟಿ, ಎಂಟಿಬಿ 1 ಕೋ.ರೂ ದೇಣಿಗೆ

ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡುವಂತೆ ಸಿಎಂ ಕೋರಿಕೆಗೆ ಸ್ಪಂದಿಸಿದ ಪಿಇಎಸ್​ ಶಿಕ್ಷಣ ಸಂಸ್ಥೆ 3 ಕೋಟಿ.ರೂ ಹಾಗೂ ಎಂಟಿಬಿ ನಾಗರಾಜ್​ 1 ಕೋಟಿ ರೂ ಧನಸಹಾಯ ನೀಡಿದ್ದಾರೆ.

By

Published : Apr 3, 2020, 12:11 PM IST

Chief Minister's Covid Relief Fund
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು:ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ ಮನವಿಗೆ ಪಿಇಎಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದೊರೆಸ್ವಾಮಿ ಹಾಗೂ ರಾಜಕಾರಣಿ ಎಂಟಿಬಿ ನಾಗರಾಜ್ ಸ್ಪಂದಿಸಿದ್ದಾರೆ.

ಕೋವಿಡ್ ಪರಿಹಾರ ನಿಧಿಗೆ ಧನಸಹಾಯ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ದೊರೆಸ್ವಾಮಿ, ಮುಖ್ಯಮಂತ್ರಿ ಭೇಟಿಯಾಗಿ 3 ಕೋಟಿ ರೂ.ಗಳ ಚೆಕ್ ನೀಡಿದರು. ಬಳಿಕ ಆಗಮಿಸಿದ ಮಾಜಿ ಸಚಿವ ಎಂಟಿಬಿ ನಾಗರಾಜ್ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಿದರು.

ABOUT THE AUTHOR

...view details