ಕರ್ನಾಟಕ

karnataka

ETV Bharat / state

ಕೋವಿಡ್ ಆತಂಕದಲ್ಲಿ ಕ್ಯಾನ್ಸರ್ ನಿರ್ಲಕ್ಷಿಸಬೇಡಿ: ಎಸ್​.ಆರ್​.ಪಾಟೀಲ್​ - Bangalore Latest News Update

ಇತ್ತೀಚಿನ ಜೀವನಶೈಲಿಯಿಂದಾಗಿ ಕ್ಯಾನ್ಸರ್‌ ಹೆಚ್ಚುತ್ತಿದ್ದು, ಎಲ್ಲರಿಗೂ ಈ ರೋಗದ ಬಗ್ಗೆ ಅರಿವು ಬೇಕಾಗಿದೆ. ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನ; ಭಯ ಬೇಡ, ಅರಿವು ಮೂಡಿಸಿ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್ಆರ್ ಪಾಟೀಲ್ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್ ಮಾಡಿದ್ದಾರೆ.

Don't ignore Cancer in Covid Anxiety: SRP
ಕೋವಿಡ್ ಆತಂಕದಲ್ಲಿ ಕ್ಯಾನ್ಸರ್ ನಿರ್ಲಕ್ಷಿಸಬೇಡಿ: ಎಸ್ಆರ್​ಪಿ

By

Published : Nov 7, 2020, 5:00 PM IST

ಬೆಂಗಳೂರು:ಕ್ಯಾನ್ಸರ್ ರೋಗವನ್ನು ಕೋವಿಡ್ ಕಾರಣ ನೀಡಿ ನಿರ್ಲಕ್ಷಿಸಬೇಡಿ ಎಂದು ನಾಡಿನ ಜನತೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್ಆರ್ ಪಾಟೀಲ್ ಮನವಿ ಮಾಡಿದ್ದಾರೆ.

ಎಸ್ಆರ್ ಪಾಟೀಲ್ ಟ್ವೀಟ್​

ಟ್ವೀಟ್ ಮೂಲಕ ಈ ಮನವಿ ಮಾಡಿರುವ ಅವರು, ರಾಷ್ಟ್ರೀಯ ಕ್ಯಾನ್ಸರ್‌ ಜಾಗೃತಿ ದಿನ; ಭಯ ಬೇಡ, ಅರಿವು ಮೂಡಿಸಿ. ಇತ್ತೀಚಿನ ಜೀವನಶೈಲಿಯಿಂದಾಗಿ ಕ್ಯಾನ್ಸರ್‌ ಹೆಚ್ಚುತ್ತಿದ್ದು, ಎಲ್ಲರಿಗೂ ಈ ರೋಗದ ಬಗ್ಗೆ ಅರಿವು ಬೇಕಾಗಿದೆ. ಪ್ರಸ್ತುತ ಎಲ್ಲೆಡೆ ಕೊರೋನಾ ಸೋಂಕು ಇದೆ. ಕ್ಯಾನ್ಸರ್‌ ಕಡೆಗಣಿಸಬೇಡಿ. ಮಾಸ್ಕ್‌ ಹಾಕಿಕೊಂಡು, ಅಂತರ ಕಾಪಾಡಿ ಎಂದಿದ್ದಾರೆ.

ಸೌಮ್ಯ ರೆಡ್ಡಿ ಟ್ವೀಟ್:

ಸೌಮ್ಯ ರೆಡ್ಡಿ ಟ್ವೀಟ್

ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್ ಮಾಡಿದ್ದು, ಕ್ಯಾನ್ಸರ್‌ ರೋಗದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ 7ರಂದು “ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ಯಾನ್ಸರ್ ಕುರಿತು ಜನರಲ್ಲಿ ಒಂದಿಷ್ಟು ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಇದು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಹಾಗೂ ಪ್ರಜ್ಞಾವಂತ ಜನಸಮುದಾಯ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details