ದೊಡ್ಡಬಳ್ಳಾಪುರ: ನಗರಸಭೆಯಿಂದ ಹಂಚಿಕೆಯಾದ ನಿವೇಶನದಲ್ಲಿ ವಯಸ್ಸಾದ ಅಂಧ ದಂಪತಿ ವಾಸವಾಗಿದ್ದಾರೆ, ಆದರೀಗ ಮನೆ ಖಾಲಿ ಮಾಡುವಂತೆ ವೃದ್ಧರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ, ಮನೆ ಉಳಿಸಿಕೊಡುವಂತೆ ವಯಸ್ಸಾದ ದಂಪತಿ ಕಣ್ಣೀರು ಹಾಕುತ್ತಿದ್ದಾರೆ.
ಮುನಿನರಸಮ್ಮ(60)ಮತ್ತು ಬಾಲಯ್ಯ(65) ಅಂಧ ದಂಪತಿಗೆ ಶಿವಕುಮಾರ್ ಎಂಬುವವರು ಮನೆ ಖಾಲಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾನೆ. ಗಂಡ ಬಾಲಯ್ಯನಿಗೆ ಶೇಕಡಾ 40 ಮಾತ್ರ ದೃಷ್ಟಿ ಇದೆ. ಆದರೆ, ಹೆಂಡತಿ ಮುನಿನರಸಮ್ಮರಿಗೆ ಶೇಕಡಾ 20 ರಷ್ಟು ಮಾತ್ರ ದೃಷ್ಟಿ ಇದೆ, ಬಾಲಯ್ಯನಿಗೆ ಬರುವ ವಿಕಲಚೇತನರ ಪಿಂಚಣಿ ಹಣದಲ್ಲಿ ಇಬ್ಬರ ಜೀವನ ನಡೆಯುತ್ತಿದೆ, ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ.
ಮಗ ಹೆಂಡತಿ ಮಕ್ಕಳ ಜೊತೆ ಬೇರೆ ವಾಸವಾಗಿದ್ದಾರೆ, ನಗರಸಭೆಯ ಅಶ್ರಯ ಮನೆಯೇ ಈ ದಂಪತಿಗೆ ಅಶ್ರಯವಾಗಿತ್ತು ಆದರೆ ಈಗ ಶಿವಕುಮಾರ್ ಎನ್ನುವ ವ್ಯಕ್ತಿ ಕಿರುಕುಳ ಕೊಡುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರದ ಮಾದಗೊಂಡನಹಳ್ಳಿ ರಸ್ತೆಯ ರಾಜೀವ್ ಗಾಂಧಿ ಬಡಾವಣೆಯ 2 ನೇ ಹಂತದ ಮನೆ ನಂಬರ್ 137 ಅಂಧ ದಂಪತಿ ವಾಸವಾಗಿರುವ ಮನೆ, ನಗರಸಭೆಯಿಂದ ಹಂಚಿಕೆಯಾದ ಮನೆಗಳಿಗೆ ಕೆಲವರು ವಾಸ ಮಾಡಲಿಕ್ಕೆ ಬರದೇ ಖಾಲಿ ಇತ್ತು.