ಕರ್ನಾಟಕ

karnataka

ETV Bharat / state

ಚಿರತೆ ಜೊತೆ ಸೆಣಸಿ ತನ್ನ ತಾಯಿ ರಕ್ಷಿಸಿದ್ದ ಯುವಕನ ಶೌರ್ಯ ಕೊಂಡಾಡಿದ ಡಿಕೆಶಿ - ಚಿರತೆ ದಾಳಿ

ತಾಯಿ ಪ್ರಾಣ ಕಾಪಾಡಲು ಚಿರತೆಯೊಡನೆ ಸೆಣಸಿ ಕೊಂದ ಅರಸೀಕೆರೆಯ ಕಿರಣ್​​​ನ ಶೌರ್ಯವನ್ನು ನಾನು ಪ್ರಶಂಸಿಸುತ್ತೇನೆ. ಈ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತಾಯಿ - ಮಗನನ್ನು ಭೇಟಿಯಾಗುವಂತೆ ಹಾಸನ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ ಎಂದಿದ್ದಾರೆ.

dk-shivakumar
ಡಿಕೆ ಶಿವಕುಮಾರ್

By

Published : Feb 24, 2021, 4:01 PM IST

ಬೆಂಗಳೂರು: ಪ್ರಾಣ ರಕ್ಷಣೆಗೆ ಚಿರತೆಯೊಂದಿಗೆ ಸೆಣಸಿ ಗೆದ್ದ ಅರಸೀಕೆರೆ ಯುವಕನನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶಂಸಿಸಿದ್ದಾರೆ. ಟ್ವೀಟ್ ಮೂಲಕ ಯುವಕನ ಕಾರ್ಯವನ್ನು ಶ್ಲಾಘಿಸಿದ್ದಾರೆ.

ತಾಯಿ ಪ್ರಾಣ ಕಾಪಾಡಲು ಚಿರತೆಯೊಡನೆ ಸೆಣಸಿ ಕೊಂದ ಅರಸೀಕೆರೆಯ ಕಿರಣ್​​​ನ ಶೌರ್ಯವನ್ನು ನಾನು ಪ್ರಶಂಸಿಸುತ್ತೇನೆ. ಈ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತಾಯಿ -ಮಗನನ್ನು ಭೇಟಿಯಾಗುವಂತೆ ಹಾಸನ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ. ಅವರ ಚಿಕಿತ್ಸೆಗೆ 25,000 ರೂ. ಹಣವನ್ನೂ ತಲುಪಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯ ಬೈರಗೊಂಡನಹಳ್ಳಿಯಲ್ಲಿ ಜಮೀನಿಗೆ ತೆರಳುತ್ತಿದ್ದ ತಾಯಿ ಮತ್ತು ಮಗನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿತ್ತು. ಈ ಸಂದರ್ಭ ಚಿರತೆಯಿಂದ ತಪ್ಪಿಸಿಕೊಳ್ಳಲು ನಡೆಸಿದ ಹೋರಾಟದಲ್ಲಿ ಯುವಕ ಚಿರತೆಯನ್ನು ಸಾಯಿಸಿದ್ದ. ಈ ಮೂಲಕ ತನ್ನ ಹಾಗೂ ತನ್ನ ತಾಯಿಯ ಪ್ರಾಣವನ್ನು ರಕ್ಷಿಸಿದ್ದ.

ಇದನ್ನೂ ಓದಿ:ಸಂಸದೀಯ ಮೌಲ್ಯಗಳ ಕುಸಿತ ಕುರಿತು ವಿಧಾನಸೌಧದಲ್ಲಿ ಆತ್ಮಾವಲೋಕನ ಸಭೆ

ABOUT THE AUTHOR

...view details