ಕರ್ನಾಟಕ

karnataka

ETV Bharat / state

ಪ್ರಾಣಿ-ಪಕ್ಷಿಗಳ ದಾಹ ನೀಗಿಸಲು ನೀರಿನ ಪಾಟ್ ವಿತರಿಸಿದ ಸ್ವಯಂ ಜಾಗೃತಿ ತಂಡ - ಬೆಂಗಳೂರಿನಲ್ಲಿ ಪ್ರಾಣಿ ಪಕ್ಷಿಗಳ ನೀರಿನ ದಾಹ ನೀಗಿಸಲು ನೀರಿನ ಪಾಟ್ ವಿತರಣೆ

ಬೆಂಗಳೂರಿನಲ್ಲಿ ಪ್ರಾಣಿ-ಪಕ್ಷಿಗಳ ನೀರಿನ ದಾಹ ನೀಗಿಸುವ ಉದ್ದೇಶದಿಂದ ಇಲ್ಲಿನ ನಾಗರಬಾವಿ ಬಳಿಯ ಕಲ್ಯಾಣ್ ನಗರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀರಿನ ಪಾಟ್ ವಿತರಿಸಲಾಯಿತು.

Distribution of the water pot to quench the animal's water thirst in Bangalore
ಪ್ರಾಣಿ ಪಕ್ಷಿಗಳ ನೀರಿನ ದಾಹ ನೀಗಿಸಲು ನೀರಿನ ಪಾಟ್ ವಿತರಣೆ

By

Published : Apr 10, 2021, 10:05 AM IST

ಬೆಂಗಳೂರು:ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ನೀರಿಗಾಗಿ ಪ್ರಾಣಿ-ಪಕ್ಷಿಗಳ ಪರದಾಟ ತಪ್ಪಿಸುವ ಸಲುವಾಗಿ ಸ್ವಯಂ ಜಾಗೃತಿ ಎಂಬ ಸ್ವಯಂ ಸೇವಕರ ನೀರಿನ ಪಾಟ್ ವಿತರಿಸಿತು.

ನೀರಿನ ಪಾಟ್ ವಿತರಣಾ ಸಮಾರಂಭ

ಪ್ರಾಣಿ-ಪಕ್ಷಿಗಳ ನೀರಿನ ದಾಹ ನೀಗಿಸುವ ಉದ್ದೇಶದಿಂದ ಬೆಂಗಳೂರಿನ ನಾಗರಬಾವಿ ಬಳಿಯ ಕಲ್ಯಾಣ್ ನಗರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೀರಿನ ಪಾಟ್ ವಿತರಿಸಲಾಯಿತು. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ಸ್ವಯಂ ಜಾಗೃತಿ ತಂಡ ಮನವಿ ಮಾಡಿತು.

ಸ್ವಯಂ ಜಾಗೃತಿ ಸ್ವಯಂ ಸೇವಕರ ತಂಡ

ಬದಲಾವಣೆಗಾಗಿ, ಬದಲಾವಣೆಗೋಸ್ಕರ ಎಂಬ ಧ್ಯೇಯದೊಂದಿಗೆ ಮಾಡಲಾದ ಈ ಕಾರ್ಯಕ್ರಮದಲ್ಲಿ ಇತಿಹಾಸ ಪರಿಚಾರಕರಾದ ಅರೆನಹಳ್ಳಿ ಧರ್ಮೇಂದ್ರ ಕುಮಾರ್, ಚಂದ್ರ ಲೇಔಟ್ ಪೋಲಿಸ್ ಠಾಣೆಯ ಸಬ್ ಇನ್​ಸ್ಪೆಕ್ಟರ್ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರ ಠಾಣೆಯ ಸಬ್ ಇನ್​ಸ್ಪೆಕ್ಟರ್ ಶಾಂತಪ್ಪ ಜಡೆಮ್ಮನವರ್ ಭಾಗವಹಿಸಿದ್ದರು. ಸ್ವಯಂ ಜಾಗೃತಿ ತಂಡದ ಅಧ್ಯಕ್ಷರಾದ ಸಿ.ಅಜಯ್ ಕುಮಾರ್ ಹಾಗೂ ತಂಡದವರು ಉಪಸ್ಥಿತರಿದ್ದರು.

ನೀರಿನ ಪಾಟ್ ವಿತರಣೆ

For All Latest Updates

TAGGED:

ABOUT THE AUTHOR

...view details