ಕರ್ನಾಟಕ

karnataka

ETV Bharat / state

ಪ್ರಧಾನಿ ಚೀನಾ ಗಡಿ ಸಂಘರ್ಷದ ಬಗ್ಗೆ ಸುಳ್ಳು ಹೇಳಿ ಜನರ ಹಾದಿ ತಪ್ಪಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್ - dinesh gundurao tweet about pm Narendra modhi

ವಾಸ್ತವಿಕ ಗಡಿ ರೇಖೆಯನ್ನು ದಾಟಿ ಭಾರತದ ನೆಲಕ್ಕೆ ಕಾಲಿಟ್ಟಿರುವ ಚೀನಾ, ತನ್ನ ಸೈನಿಕರನ್ನು ವಾಪಸ್ ಕರೆಸಿಕೊಂಡಿಲ್ಲ. ಆದರೆ, ಪ್ರಧಾನಿ ಮೋದಿ ಚೀನಾದೊಂದಿಗಿನ ಗಡಿ ಸಂಘರ್ಷದ ಬಗ್ಗೆ ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

dinesh-gundurao
ದಿನೇಶ್ ಗುಂಡೂರಾವ್

By

Published : Mar 10, 2021, 9:08 PM IST

ಬೆಂಗಳೂರು: ಚೀನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಹೇಡಿತನ ಪ್ರದರ್ಶಿಸುತ್ತಿದ್ದು, ಭಾರತೀಯ ಯೋಧರಿಗೆ ಅವಮಾನ ಮಾಡುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಅವರು, ವಾಸ್ತವಿಕ ಗಡಿ ರೇಖೆಯನ್ನು ದಾಟಿ ಭಾರತದ ನೆಲಕ್ಕೆ ಕಾಲಿಟ್ಟಿರುವ ಚೀನಾ, ತನ್ನ ಸೈನಿಕರನ್ನು ವಾಪಸ್ ಕರೆಸಿಕೊಂಡಿಲ್ಲ. ಆದರೆ, ಪ್ರಧಾನಿ ಮೋದಿ ಚೀನಾದೊಂದಿಗಿನ ಗಡಿ ಸಂಘರ್ಷದ ಬಗ್ಗೆ ಸುಳ್ಳು ಹೇಳುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ. ಚೀ‌ನಾ ನಮ್ಮ ಭೂಮಿಯನ್ನು ಅಕ್ರಮಿಸಿಕೊಂಡು ಇಲ್ಲೇ ನೆಲೆ ನಿಂತಿದ್ದರೂ, ಮೋದಿಯವರ ಮೌನದ ಅರ್ಥ ಶರಣಾಗತಿಯೇ? ಎಂದಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಬಿದ್ದಿದ್ದ ಕನ್ನಡ ಬಾವುಟಗಳು.. ಹೋರಾಟಗಾರರ ಆಕ್ರೋಶ

ಚೀನಾದ ಜೊತೆಗಿನ ಸಂಘರ್ಷದಲ್ಲಿ ಭಾರತದ 20 ಹೆಮ್ಮೆಯ ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಮೋದಿ ಸರ್ಕಾರ ಚೀನಾದ ಎದುರು ಹೇಡಿತನ ಪ್ರದರ್ಶಿಸಿ ಹುತಾತ್ಮ ಯೋಧರಿಗೆ ಅವಮಾನ ಮಾಡುತ್ತಿದೆ. ಶತ್ರು ತನ್ನ ಬಾಗಿಲು ದಾಟಿ ಒಳ ಬಂದಿದ್ದರೂ ಮೋದಿಯವರಿಗೆ ದೇಶದ ಚಿಂತೆಯಿಲ್ಲ. ದೇಶ ರಕ್ಷಣೆಗಿಂತ ಚುನಾವಣಾ ಪ್ರಚಾರವೇ ಮೋದಿಯವರಿಗೆ ಮುಖ್ಯವಾದಂತಿದೆ ಎಂದಿದ್ದಾರೆ.

For All Latest Updates

ABOUT THE AUTHOR

...view details