ಕರ್ನಾಟಕ

karnataka

ಚುನಾವಣಾ ಲಾಭಕ್ಕಾಗಿ ಜಿಲ್ಲಾ ವಿಭಜನೆ ಬೇಡ: ದಿನೇಶ್ ಗುಂಡೂರಾವ್

ಇಷ್ಟು ವರ್ಷಗಳಿಂದ ಹೆಚ್‌.ವಿಶ್ವನಾಥ್ ರಾಜಕೀಯದಲ್ಲಿ ಇದ್ದಾರೆ. ಕೇವಲ ಸ್ವಾರ್ಥ ರಾಜಕಾರಣಕ್ಕಾಗಿ ಜಿಲ್ಲಾ ವಿಭಜನೆ ಬಗ್ಗೆ ಮಾತನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೆಚ್​. ವಿಶ್ವನಾಥ್​ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

By

Published : Oct 14, 2019, 7:34 PM IST

Published : Oct 14, 2019, 7:34 PM IST

Updated : Oct 14, 2019, 10:38 PM IST

ETV Bharat / state

ಚುನಾವಣಾ ಲಾಭಕ್ಕಾಗಿ ಜಿಲ್ಲಾ ವಿಭಜನೆ ಬೇಡ: ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

ಬೆಂಗಳೂರು:ಸ್ವಾರ್ಥ ರಾಜಕಾರಣಕ್ಕಾಗಿ ಜಿಲ್ಲಾ ವಿಭಜನೆ ಮಾಡ ಕೂಡದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನೂತನ ಜಿಲ್ಲೆಗಳಿಗೆ ಬೇಡಿಕೆ ಇಡುತ್ತಿರುವ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್​ ಗುಂಡೂರಾವ್​

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಹೆಚ್‌.ವಿಶ್ವನಾಥ್ ರಾಜಕೀಯದಲ್ಲಿದ್ದಾರೆ. ಜಿಲ್ಲೆ ವಿಭಜನೆ ಬಗ್ಗೆ ಎಷ್ಟು ಬಾರಿ ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು. ಈಗ ಉಪಚುನಾವಣೆ ಬರುತ್ತಿದೆ ಎಂದು ಹೀಗೆಲ್ಲಾ ಗಿಮಿಕ್ ಮಾಡಬಾರದು ಎಂದು ಕಿಡಿಕಾರಿದರು.

ನೂತನ ಜಿಲ್ಲೆಗಳ ರಚನೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ವೈಜ್ಞಾನಿಕವಾಗಿ ಚರ್ಚೆ ಮಾಡಿ ಒಳ್ಳೆಯ ವಾತಾವರಣದಲ್ಲಿ ಚರ್ಚೆ ಆಗಬೇಕು. ಅದು ಬಿಟ್ಟು ವೈಯಕ್ತಿಕ ಲಾಭಕ್ಕಾಗಿ ಹೊಸ ಜಿಲ್ಲೆಗಳ ರಚನೆ ಬಗ್ಗೆ ಮಾತನಾಡಬಾರದು ಎಂದು ದಿನೇಶ್​ ಗುಂಡೂರಾವ್​ ಆಕ್ಷೇಪ ವ್ಯಕ್ತಪಡಿಸಿದ್ರು.

ಉಪಚುನಾವಣೆ ಬಗ್ಗೆ ಚರ್ಚೆ:ನಾಳೆ ಕೆ.ಸಿ. ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಲಿದ್ದು, ಉಪ ಚುನಾವಣೆ ಸಂಬಂಧ ಸರಣಿ ಸಭೆ ನಡೆಸಲಿದ್ದಾರೆ ಎಂದು ಇದೇ ವೇಳೆ ಮಾಧ್ಯಮದವರಿಗೆ ತಿಳಿಸಿದರು.

ಮುಂದಿನ ಉಪಚುನಾವಣೆ ಹಾಗೂ ಪಕ್ಷದ ಸಂಘಟನೆ ವಿಚಾರವಾಗಿ ಸಭೆ ಕರೆದಿದ್ದೇವೆ. ನಾಳೆ ದಿನಪೂರ್ತಿ ಹಲವು ಸಭೆಗಳನ್ನು ನಡೆಸಲಿದ್ದು, ಪೂರ್ವಸಿದ್ಧತೆ ಬಗ್ಗೆ ಚರ್ಚಿಸಲಿದ್ದೇವೆ‌. ಸಭೆಯಲ್ಲಿ ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಕೂಡ ಚರ್ಚೆ ಮಾಡಲಿದ್ದೇವೆ ಎಂದರು.

Last Updated : Oct 14, 2019, 10:38 PM IST

ABOUT THE AUTHOR

...view details