ಬೆಂಗಳೂರು: ಲಾಕ್ಡೌನ್ 4.0 ಸಡಿಲಿಕೆ ಬೆನ್ನಲ್ಲೇ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವವರಿಗೆ ಪಾಸ್ ಅವಶ್ಯಕತೆಯಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಧಿಕೃತವಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗೊಂದಲ ವಿಚಾರ: ಡಿಜಿಪಿ ಯಿಂದ ಮಹತ್ವದ ಆದೇಶ - D.G And IGP Latest news
ಅಂತರ್ ಜಿಲ್ಲೆಗಳ ಪ್ರಯಾಣಕ್ಕೆ ಕಡಿವಾಣ ಹಾಕಿದ್ದ ಸರ್ಕಾರ ಈಗ ಜನತೆಗೆ ಕೊಂಚ ರಿಲೀಫ್ ನೀಡಿದೆ. ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಅಗತ್ಯವಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
![ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗೊಂದಲ ವಿಚಾರ: ಡಿಜಿಪಿ ಯಿಂದ ಮಹತ್ವದ ಆದೇಶ DG, IGP](https://etvbharatimages.akamaized.net/etvbharat/prod-images/768-512-7274572-586-7274572-1589978396988.jpg)
ರಾಜ್ಯದ ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗೊಂದಲ
ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬರಲು ಜನರಿಗೆ ಅವಕಾಶ ಇದೆ. ಆದ್ರೆ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯೊಳಗಿನ ಲಾಕ್ ಡೌನ್ ಎಂದಿನಂತೆ ಇರುತ್ತಿದ್ದು, ಅದನ್ನು ಮರೆಯದಿರಿ ಎಂದು ಜನತೆಗೆ ಪ್ರವೀಣ್ ಸೂದ್ ಹೇಳಿದ್ದಾರೆ.
Last Updated : May 20, 2020, 8:58 PM IST