ಬೆಂಗಳೂರು : ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೌಡರು, ಶಂಕರಾಚಾರ್ಯರ ಚಿಂತನೆಗಳು ಸರ್ವ ಸಮಾಜವನ್ನು ಒಗ್ಗೂಡಿಸುವುದಕ್ಕೆ ಪ್ರೇರಕವಾಗಿತ್ತು. ಭಾರತದ ಧಾರ್ಮಿಕತೆಯ ಮೇರು ವ್ಯಕ್ತಿಯಾಗಿರುವ ಶಂಕರಾಚಾರ್ಯರು ಮಾನವ ಕುಲವೆಲ್ಲ ಒಂದೇ ಎನ್ನುವ ಮೂಲಕ ಸಾಮಾಜಿಕ ನ್ಯಾಯವನ್ನು ಎಂಟನೆಯ ಶತಮಾನದಲ್ಲೇ ಜಗತ್ತಿಗೆ ಸಾರಿ ಹೇಳಿದ ಮಹಾನ್ ದಾರ್ಶನಿಕರು ಎಂದಿದ್ದಾರೆ.
TAGGED:
Deve Gowda