ಕರ್ನಾಟಕ

karnataka

ETV Bharat / state

ದೇವನಹಳ್ಳಿಯಲ್ಲಿ ಭೂ ಗೋಲ್ಮಾಲ್ ಆರೋಪ​: ದುಡ್ಡು ಕೊಟ್ರೆ ಯಾರದ್ದೇ ಜಮೀನು ನಿಮ್ಮ ಹೆಸರಿಗೆ ಫಿಕ್ಸ್?! - subrigister office

ದೇವನಹಳ್ಳಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬೃಹತ್ ಗೋಲ್ ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ದುಡ್ಡು ಕೊಟ್ರೆ ಸಾಕು ಯಾವ ಸೈಟ್ ಬೇಕಾದ್ರು ನೊಂದಾಣಿ ಮಾಡ್ತರೆ ಇಲ್ಲಿನ ಸಬ್ ರಿಜಿಸ್ಟರ್​ಗಳು. ಇದನ್ನು ಕೇಳಲು ಹೋದ ಮಾಧ್ಯಮಗಳ ಮೇಲೂ ಸಹ ಸಬ್ ರಿಜಿಸ್ಟರ್ ಮಹೋದಯರು ಗರಂ ಆಗಿಬಿಡ್ತಾರೆ.

ಸಬ್ ರಿಜಿಸ್ಟರ್ ಕಚೇರಿ

By

Published : Aug 15, 2019, 1:38 PM IST

ಬೆಂಗಳೂರು: ಇಲ್ಲಿ ಜಮೀನಿನ ಬೆಲೆ ಮಾತ್ರ ಗಗನಕ್ಕೇರಿಲ್ಲ. ಜೊತೆಗೆ, ಇಲ್ಲಿಗೆ ಬರುವಂತಹ ಅಧಿಕಾರಿಗಳು ಸಹ ನಾ ಮುಂದು ತಾ ಮುಂದು ಎಂದು ಭ್ರಷ್ಟಾಚಾರಕ್ಕಿಳಿದು ಇಲ್ಲಿನ ಜಮೀನುಗಳ ವಹಿವಾಟಿನಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ದೇವನಹಳ್ಳಿ ತಾಲೂಕಲ್ಲಿ ಕೇಳಿಬಂದಿವೆ.

ಇಲ್ಲಿನ ಸಬ್ ರಿಜಿಸ್ಟ್ರಾರ್​ಗಳಿಗೆ ಭಾರಿ ಬೇಡಿಕೆಯಿದೆ. ಇವರೆಲ್ಲಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದು, ನಿಯಮ ಬಾಹಿರವಾಗಿ ಸರ್ಕಾರಿ ಜಮೀನುಗಳನ್ನು ರಿಜಿಸ್ಟರ್ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.

ಸಬ್ ರಿಜಿಸ್ಟರ್ ಕಚೇರಿಯಲ್ಲಿ ನಡೆಯುತ್ತಿರುವ ಬೃಹತ್ ಗೋಲ್ ಮಾಲ್ ಆರೋಪ

ದೇವನಹಳ್ಳಿ ಸಬ್ರಿಜಿಸ್ಟ್ರಾರ್​ಕಚೇರಿಯಲ್ಲಿ ಬೃಹತ್ ಗೋಲ್ ಮಾಲ್ ನಡೆಯುತ್ತಿದೆ ಎನ್ನಲಾಗ್ತಿದೆ. ಸರ್ಕಾರಿ ನಿಯಮಗಳಂತೆ ಸೈಟ್ ನ್ನು ರಿಜಿಸ್ಟರ್ ಮಾಡಬೇಕಾದರೆ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಇ-ಸ್ವತ್ತು ಮಾಡಿಸಬೇಕಾಗುತ್ತದೆ. ಇನ್ನು ಕೃಷಿ ಜಮೀನಿನಲ್ಲಿ ಲೇಔಟ್ ಮಾಡಿ ಸೈಟ್​ಗಳ ನೋಂದಣಿ ಮಾಡಿಸಬೇಕಾದ್ರೆ ಸಾಕಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದ್ರೆ ಇಲ್ಲಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲವಂತೆ. ದುಡ್ಡು ಕೊಟ್ರೆ ಸಾಕು ಯಾವ ಸೈಟ್ ಬೇಕಾದ್ರು ನೋಂದಣಿಯನ್ನು ಸಬ್ ರಿಜಿಸ್ಟ್ರಾರ್​ರ್ಸ್​ ಮಾಡುತ್ತಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೇಳಲು ಹೋದ್ರೆ ಮಾಧ್ಯಮದವರ ಮೇಲೂ ಗರಂ ಆಗ್ತಾರೆ.

ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಸರ್ವೇ ನಂಬರ್ 215 ರಲ್ಲಿನ ಜಮೀನು ರಿಜಿಸ್ಟರ್ ಅಗಿದೆ. ಸರ್ವೇ ನಂಬರ್ 215 ರಲ್ಲಿರುವುದು ಸರ್ಕಾರಿ ಗೋಮಾಳದ ಜಮೀನು. ಕೆಲವರು ಅನಧಿಕೃತವಾಗಿ ಸೈಟ್​ಗಳನ್ನು ಮಾಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ಗೋಮಾಳವನ್ನೇ ಸಬ್ ರಿಜಿಸ್ಟ್ರಾರ್​ಗಳಾದ, ಶ್ರೀನಾಥ್, ಅಂಜಲಿ, ರವೀಂದ್ರ ಬೇರೆಯವರ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲ, ದೇವನಹಳ್ಳಿ ತಾಲೂಕಿನಾದ್ಯಂತ ನಿರ್ಮಾಣವಾಗುತ್ತಿರುವ ಅನಧಿಕೃತ ಬಡಾವಣೆಗಳನ್ನು ಸಹ ಕಾನೂನು ಬಾಹಿರವಾಗಿ ಯಾವುದೇ ದಾಖಲಾತಿಗಳನ್ನು ಪಡೆಯದೇ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಒಟ್ಟಾರೆ ಈ ದಂಧೆ ಎಲ್ಲಾ ಅಧಿಕಾರಿಗಳಿಗೆ ಕಣ್ಣೆದುರೇ ನಡೆಯುತ್ತಿದೆ. ಆದ್ರೆ ಇಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದ್ರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮಗೇನು ಗೊತ್ತಿಲ್ಲದಂತೆ ಕಾಣ್ತಾನೆ ಇಲ್ಲ ಎಂಬಂತಿದ್ದಾರಂತೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

ABOUT THE AUTHOR

...view details