ಕರ್ನಾಟಕ

karnataka

'ಆ ಹೆಣ್ಣಿನ ಜಾಲಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ': ಅನಂತರಾಜು ಬರೆದ ಪತ್ರ ಪತ್ತೆ?

By

Published : Jun 5, 2022, 4:44 PM IST

'ಕೆ.ಆರ್. ಪುರಂ ನ ಹೆಣ್ಣಿನ ಜಾಲಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಅವಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದು, ಅವಳ‌ ಮೇಲೆ ಕಾನೂನು ಕ್ರಮ ಕೈಗೊಳ್ಳಿ' ಎಂದು ಇನ್​ಸ್ಪೆಕ್ಟರ್ ಹೆಸರಿಗೆ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಿಜೆಪಿ ಮುಖಂಡ ಅನಂತರಾಜು ಬರೆದಿದ್ದಾರೆ ಎನ್ನಲಾದ ಡೆತ್​ನೋಟ್ ಬಹಿರಂಗವಾಗಿದೆ.

ಅನಂತರಾಜು ಬರೆದ ಪತ್ರ ಪತ್ತೆ?
ಅನಂತರಾಜು ಬರೆದ ಪತ್ರ ಪತ್ತೆ?

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅನಂತರಾಜು ಸಾವಿಗೂ ಮುನ್ನ ಬರೆದಿದ್ದರೆನ್ನಲಾದ ಡೆತ್​ನೋಟ್​ ಸದ್ಯ ರಿವಿಲ್​ ಆಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಪತ್ನಿ ಸುಮಾಗೆ ಎರಡು ಪುಟದ ಪತ್ರ ಬರೆದು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅನಂತರಾಜು ಬರೆದ ಪತ್ರ ಪತ್ತೆ?

'ಕೆ.ಆರ್. ಪುರಂ ನ ಹೆಣ್ಣಿನ ಜಾಲಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಅವಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದು, ಅವಳ‌ ಮೇಲೆ ಕಾನೂನು ಕ್ರಮ ಕೈಗೊಳ್ಳಿ' ಎಂದು ಇನ್​ಸ್ಪೆಕ್ಟರ್ ಹೆಸರಿಗೆ ಅನಂತರಾಜು ಬರೆದಿದ್ದರು ಎನ್ನಲಾದ ಪತ್ರ ಬಹಿರಂಗವಾಗಿದೆ.

'ಪತ್ನಿ ಸುಮಾ ನನ್ನ ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ, ಕ್ಷಮೆ ಕೇಳಲು ಅರ್ಹನಲ್ಲ. ಆಕೆಯ ಸಹವಾಸ ಮಾಡಿ ಅವಳಿಂದ ಫೋಟೋ, ವಿಡಿಯೋ ಟ್ರ್ಯಾಪ್​​ಗೆ ಸಿಲುಕಿ ಬ್ಲಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನ ಚೆನ್ನಾಗಿ ನೋಡಿಕೊ' ಎಂದು ಅನಂತರಾಜು ಸಾವಿಗೂ ಮುನ್ನ ತಮ್ಮ ಕೊನೆ ಪತ್ರದಲ್ಲಿ ಪತ್ನಿಗೆ ಡೆತ್ ನೋಟ್ ಬರೆದು ಕ್ಷಮೆ ಕೇಳಿದ್ದಾರೆ ಎನ್ನಲಾಗ್ತಿದೆ. ಈ ಪತ್ರದ ಅಸಲಿಯತ್ತು ತನಿಖೆಯಿಂದ ತಿಳಿದುಬರಬೇಕಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಸಾವು ಪ್ರಕರಣ: ವಿಚಾರಣೆಗೆ ಹಾಜರಾದ ಪತ್ನಿ‌ ಸುಮಾ

For All Latest Updates

ABOUT THE AUTHOR

...view details