ಕರ್ನಾಟಕ

karnataka

ETV Bharat / state

ಏರ್ ಪೋರ್ಟ್​ನಲ್ಲಿ ಮಹಿಳೆಯ ರಂಪಾಟ: ವಿಮಾನ ಮಿಸ್​ ಮಾಡಿಕೊಂಡ ದಂಪತಿಯಿಂದ ಪರಿಹಾರಕ್ಕೆ ಒತ್ತಾಯ - Kempegowda International Airport

ಮುಂಬೈನ ಅಂಧೇರಿ ಪಶ್ಚಿಮದಲ್ಲಿ ನೆಲೆಸಿರುವ ನೀಕೇತ ಆಗಮ್ ಎಂಬ ಮಹಿಳೆಯು ಸರತಿಯಲ್ಲಿದ್ದ ಪ್ರಯಾಣಿಕರ ಪಟ್ಟಿಯನ್ನ ಬೈಪಾಸ್ ಮಾಡಿ ಮುಂದಕ್ಕೆ ಹೋಗಲು ಪ್ರಯತ್ನಿಸಿದ್ದಾರೆ. ಆ ವೇಳೆ ಭಧ್ರತಾ ಸಿಬ್ಬಂದಿ ಮಹಿಳೆಯನ್ನ ತಡೆದಿದ್ದಾರೆ. ಆದರೆ, ತಡೆದ ಸಿಬ್ಬಂದಿ ವಿರುದ್ಧವೇ ಮಹಿಳೆ ಕೆಟ್ಟದಾಗಿ ವರ್ತಿಸಿದ್ದಾರೆ. ಈ ಗಲಾಟೆ ನಡುವೆ ನವ ದಂಪತಿ ವಿಮಾನ ಮಿಸ್​ ಮಾಡಿಕೊಂಡಿದ್ದಾರೆ. ಪರಿಣಾಮ ಪರಿಹಾರಕ್ಕೆ ಆಗ್ರಹ ಮಾಡಿದ್ದಾರೆ.

ವಿಮಾನ ಮಿಸ್​ ಮಾಡಿಕೊಂಡ ದಂಪತಿಯಿಂದ ಪರಿಹಾರಕ್ಕೆ ಒತ್ತಾಯ
ವಿಮಾನ ಮಿಸ್​ ಮಾಡಿಕೊಂಡ ದಂಪತಿಯಿಂದ ಪರಿಹಾರಕ್ಕೆ ಒತ್ತಾಯ

By

Published : Nov 25, 2021, 11:42 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈಗೆ ತೆರಳುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರು ಭಧ್ರತಾ ಸಿಂಬ್ಬದಿಯ ಜೊತೆ ಅಸಭ್ಯವಾಗಿ ವರ್ತಿಸಿ CISF ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು, ಈ ಸಮಯದಲ್ಲಿ ನವದಂಪತಿ ತಾವು ಹೋಗಬೇಕಾದ ವಿಮಾನದಲ್ಲಿ ಸಂಚರಿಸಲು ಸಾಧ್ಯವಾಗಲಿಲ್ಲ.ಇದಕ್ಕಾಗಿ ಅವರು 3 ಲಕ್ಷ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

ಬುಧವಾರ ರಾತ್ರಿ 11:50 ರ ಸಮಯದಲ್ಲಿ ಗೇಟ್ ನಂಬರ್ 4ರಲ್ಲಿ ಈ ಘಟನೆ ನಡೆದಿದೆ. ಮುಂಬೈನ ಅಂಧೇರಿ ಪಶ್ಚಿಮದಲ್ಲಿ ನೆಲೆಸಿರುವ ನೀಕೇತ ಆಗಮ್ ಎಂಬ ಮಹಿಳೆಯು ಸರತಿಯಲ್ಲಿದ್ದ ಪ್ರಯಾಣಿಕರ ಪಟ್ಟಿಯನ್ನ ಬೈಪಾಸ್ ಮಾಡಿ ಮುಂದಕ್ಕೆ ಹೋಗಲು ಪ್ರಯತ್ನಿಸಿದ್ದಾರೆ. ಆ ವೇಳೆ ಭಧ್ರತಾ ಸಿಬ್ಬಂದಿ ಮಹಿಳೆಯನ್ನ ತಡೆದಿದ್ದಾರೆ. ಆದರೆ, ತಡೆದ ಸಿಬ್ಬಂದಿ ವಿರುದ್ಧವೇ ಮಹಿಳೆ ಕೆಟ್ಟದಾಗಿ ವರ್ತಿಸಿದ್ದಾರೆ.

ಈ ಜಗಳದಲ್ಲಿ ಸರದಿ ಸಾಲಿನಲ್ಲಿದ್ದ ಮತ್ತಿಕೆರೆ ನಿವಾಸಿಗಳಾದ ಪ್ರಿಯಾಂಕ ರಾಚಮಲ್ಲ ಮತ್ತು ವಿಜಯಕಾಂತ್ ಭೀಮಿರೆಡ್ಡಿ ತಮ್ಮ ವಿಮಾನವನ್ನು ಏರಲು ಸಾಧ್ಯವಾಗಲಿಲ್ಲ. ನವ ದಂಪತಿಗಳಾದ ಪ್ರಿಯಾಂಕ ರಾಚಮಲ್ಲ ಮತ್ತು ವಿಜಯಕಾಂತ್ ಭೀಮಿರೆಡ್ಡಿ ಗೋ ಫಸ್ಟ್ ಜಿ-8 4032 ವಿಮಾನದಲ್ಲಿ ಮಾಲೆಗೆ ತೆರಳುತ್ತಿದ್ದರು.ಆದರೆ, ಮಹಿಳೆಯ ರಂಪಾಟದಿಂದ ಸೆಕ್ಯೂರಿಟಿ ಕ್ಲಿಯರೆನ್ಸ್ ಸಮಯಕ್ಕೆ ಸರಿಯಾಗಿ ಪಡೆಯಲು ಸಾಧ್ಯವಾಗದೆ ತಮ್ಮ ವಿಮಾನವನ್ನು ಮಿಸ್​ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನವದಂಪತಿ ವಿಮಾನ ಸಂಸ್ಥೆಗೆ 3 ಲಕ್ಷ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಇನ್ನು ಭಧ್ರತಾ ಸಿಬ್ಬಂದಿ ಮಹಿಳೆ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details