ಕರ್ನಾಟಕ

karnataka

ETV Bharat / state

ಸಿದ್ದಾರ್ಥ್​ ನಾಪತ್ತೆ ಆಗಿರೋದು ನಂಬಲು ಸಾಧ್ಯವಾಗುತ್ತಿಲ್ಲ: ಡಿಕೆಶಿ - cafe coffee day

ಸಿದ್ದರ್ಥ್​​​ ನಾಪತ್ತೆ ಬಗ್ಗೆ ನನಗೆ ಅನುಮಾನವಿದೆ. ಅವರನ್ನು ಯಾರಾದ್ರು ಅಲ್ಲಿಗೆ ಕರೆದುಕೊಂಡು ಹೋದ್ರಾ ಅಥವಾ ಈ ಘಟನೆ ಹಿಂದೆ ಯಾರದಾದ್ರು ಕೈವಾಡ ಇದೆಯಾ ಎಂದು ಡಿ.ಕೆ.ಶಿವಕುಮಾರ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿದ್ದಾರ್ಥ್​ ನಾಪತ್ತೆ ನಂಬಲು ಸಾಧ್ಯವಾಗುತ್ತಿಲ್ಲ : ಡಿಕೆ ಶಿವಕುಮಾರ್​​

By

Published : Jul 30, 2019, 2:10 PM IST

Updated : Jul 30, 2019, 2:51 PM IST

ಬೆಂಗಳೂರು: ಸಿದ್ಧಾರ್ಥ್​​​ ನಾಪತ್ತೆ ಬಗ್ಗೆ ನನಗೆ ಅನುಮಾನವಿದೆ. ಅವರನ್ನು ಯಾರಾದ್ರು ಅಲ್ಲಿಗೆ ಕರೆದುಕೊಂಡು ಹೋದ್ರಾ ಅಥವಾ ಈ ಘಟನೆ ಹಿಂದೆ ಯಾರದಾದ್ರು ಕೈವಾಡ ಇದೆಯಾ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿದ್ಧಾರ್ಥ್​ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಈ ಘಟನೆ ನಂಬಲು ಸಾಧ್ಯಾಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಸಿದ್ಧಾರ್ಥ್​ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್, ಸಿದ್ಧಾರ್ಥ್​​​ ಏನನ್ನೂ ಆಸೆ ಪಡದ ಸರಳ ವ್ಯಕ್ತಿತ್ವದವರು. ಭಾನುವಾರ ಸಿದ್ಧಾರ್ಥ್​​ ನನಗೆ ಕರೆ ಮಾಡಿದ್ರು. ನಾನು ಆಗ ಕಂಚಿಯಲ್ಲಿದ್ದೆ. ನಾಳೆ ಭೇಟಿ ಮಾಡ್ತೇನೆ ಅಂತ ಹೇಳಿದ್ದೆ ಅಂತ ಡಿಕೆಶಿ ಹೇಳಿದ್ರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್​​

ಸಿದ್ಧಾರ್ಥ್ ರಾಜ್ಯದ 50000 ಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ. ಅವರ ಹುಡುಕಾಟದಲ್ಲಿ ಸರ್ಕಾರ ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡ್ತಿದೆ. ಭಗವಂತನ ಮೇಲೆ ಭಾರ ಹಾಕಿದ್ದೇವೆ ಎಂದು ಭಾವುಕರಾದ್ರು.

Last Updated : Jul 30, 2019, 2:51 PM IST

ABOUT THE AUTHOR

...view details