ಕರ್ನಾಟಕ

karnataka

ETV Bharat / state

ತೌಕ್ತೆ ಎಫೆಕ್ಟ್​: ಕರಾವಳಿ ಜಿಲ್ಲೆಗಳಲ್ಲಿ ಮೇ 17 ರಿಂದ 20ರವರೆಗೆ ಎಲ್ಲೋ ಅಲರ್ಟ್ - Cyclone Tauktae to cause very heavy rains in karnataka

ಉಡುಪಿ ಜಿಲ್ಲೆಯ ಕೊಲ್ಲೂರು 24 ಸೆಂಮೀ, ಕೋಟ 19 ಸೆಂಮೀ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು 19 ಸೆಂಮೀ, ಕುಂದಾಪುರ 16 ಸೆಂಮೀ, ಭಟ್ಕಳ 16 ಸೆಂಮೀ, ಉಡುಪಿ 15 ಸೆಂಮೀ, ಧರ್ಮಸ್ಥಳ 14 ಸೆಂಮೀ, ಶಿವಮೊಗ್ಗ 19 ಸೆಂಮೀ, ಭಾಗಮಂಡಲ 17 ಸೆಂಮೀ ಮಳೆಯಾಗಿದೆ.

cyclone
ಮಳೆ

By

Published : May 16, 2021, 7:06 PM IST

ಬೆಂಗಳೂರು: ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಹಾಸನ, ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಮೇ 16 ರಂದು ಭಾರಿ ಮತ್ತು ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆದರೆ ಮೇ 17 ರಿಂದ 20ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ. ಎಸ್. ಪಾಟೀಲ ಮಾತನಾಡಿದರು

ಕರ್ನಾಟಕ ರಾಜ್ಯದ ಹವಾಮಾನ ಮುನ್ಸೂಚನೆಯನ್ನು ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ ನೀಡಿದ್ದು, ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಕೊಲ್ಲೂರು 24 ಸೆಂಮೀ, ಕೋಟ 19 ಸೆಂಮೀ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು 19 ಸೆಂಮೀ, ಕುಂದಾಪುರ 16 ಸೆಂಮೀ, ಭಟ್ಕಳ 16 ಸೆಂಮೀ, ಉಡುಪಿ 15 ಸೆಂಮೀ, ಧರ್ಮಸ್ಥಳ 14 ಸೆಂಮೀ, ಶಿವಮೊಗ್ಗ 19 ಸೆಂಮೀ, ಭಾಗಮಂಡಲ 17 ಸೆಂಮೀ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

ಅತಿ ಪ್ರಬಲವಾದ ಚಂಡಮಾರುತ ತೌಕ್ತೆ ಪೂರ್ವ ಅರೇಬಿಯನ್ ಸಮುದ್ರದ ಮಧ್ಯಭಾಗದಲ್ಲಿ ಇದ್ದು, ಪಣಜಿ ಗೋವಾದ ನೈರುತ್ಯ ಭಾಗದಲ್ಲಿ ಸುಮಾರು 120 ಕಿ.ಮೀ ದೂರದಲ್ಲಿದೆ. ಅದು ತೀವ್ರಗೊಳ್ಳುತ್ತಾ ಉತ್ತರದ ಕಡೆ ಚಲಿಸುತ್ತಿದೆ ಎಂದು ಹೇಳಿದ್ದಾರೆ.

ತೌಕ್ತೆ ಮೇ 18ಕ್ಕೆ ಗುಜರಾತ್ ರಾಜ್ಯದ ಪೋರಬಂದರ್ ಮಾವುವೇ ಮಧ್ಯ ತಲುಪಲಿದ್ದು, ಇದರ ಪ್ರಭಾವದಿಂದ ಕರ್ನಾಟಕದಲ್ಲಿ ಮೇ 16 ರಿಂದ 20 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಹಾಗೂ ಮೇ 17 ರಿಂದ ಮಳೆಯ ಪ್ರಮಾಣ ತಗ್ಗುವ ಸಾಧ್ಯತೆ ಇದೆ ಎಂದು ಪಾಟೀಲ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಸಿದ್ದಾರೆ.

ಓದಿ:ಬ್ಲಾಕ್ ಫಂಗಸ್ ರೋಗದ ಭೀತಿಯಲ್ಲಿ ಬಾಗಲಕೋಟೆ ಜನತೆ!

ABOUT THE AUTHOR

...view details