ಕರ್ನಾಟಕ

karnataka

ETV Bharat / state

ಪಾರ್ಕ್ ಒಳಗೆ  ಐಪಿಎಸ್ ಅಧಿಕಾರಿಗೆ ಅವಕಾಶ: ಕಬ್ಬನ್ ಪಾರ್ಕ್ ಉಪನಿರ್ದೇಶಕಿ ಸಸ್ಪೆಂಡ್​​ - ಬೆಂಗಳೂರು ಕಬ್ಬನ್ ಪಾರ್ಕ್ ಲೇಟೆಸ್ಟ್​ ನ್ಯೂಸ್​

ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ದೃಷ್ಟಿಯಿಂದ ರಾಜ್ಯ ಸರ್ಕಾರ ಪಾರ್ಕ್​ಗಳಲ್ಲಿ ವಾಕ್ ಮಾಡುವುದು ನಿಷೇಧ ಹೇರಿದರೂ ಐಪಿಎಸ್ ಅಧಿಕಾರಿಯೊಬ್ಬರ ಒತ್ತಡಕ್ಕೆ ಮಣಿದು ಪಾಕ್​ನೊಳಗೆ ಪ್ರವೇಶ ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ ಉಪನಿರ್ದೇಶಕಿ ಕುಸುಮಾ ಅವರನ್ನು ಸಸ್ಪೆಂಡ್‌ ಮಾಡಿ ಇಲಾಖೆ ಮಟ್ಟದಲ್ಲಿ ತನಿಖೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

Cubbon Park deputy director suspended leaving IPS officer inside park
ಐಪಿಎಸ್ ಅಧಿಕಾರಿಯನ್ನು ಪಾರ್ಕ್ ಒಳಗೆ ಬಿಟ್ಟ ಕಬ್ಬನ್ ಪಾರ್ಕ್ ಉಪನಿರ್ದೇಶಕಿ ಸಸ್ಪೆಂಡ್​​

By

Published : May 18, 2020, 4:59 PM IST

ಬೆಂಗಳೂರು:ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ದೃಷ್ಟಿಯಿಂದ ರಾಜ್ಯ ಸರ್ಕಾರ ಪಾರ್ಕ್​ಗಳಲ್ಲಿ ವಾಕ್ ಮಾಡುವುದು ನಿಷೇಧ ಹೇರಿದರೂ ಐಪಿಎಸ್ ಅಧಿಕಾರಿಯೊಬ್ಬರ ಒತ್ತಡಕ್ಕೆ ಮಣಿದು ಪಾಕ್​ನೊಳಗೆ ಪ್ರವೇಶ ಕಲ್ಪಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ನಿಯಮ ಪಾಲನೆ ಮಾಡಿ ಜನರಿಗೆ ಮಾದರಿಯಾಗಬೇಕಾದ ಸರ್ಕಾರಿ ಅಧಿಕಾರಿಗಳೇ ಲಾಕ್​​ಡೌನ್ ನಿಯಮ ಉಲ್ಲಂಘಿಸಿದ್ದಾರೆ‌.

ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಡಾ.ಎಸ್.ಉಮೇಶ್ ಕುಮಾರ್

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಾರ್ಕ್​ಗಳಿಗೆ ಹೋಗುವುದನ್ನು ನಿಷೇಧಿಸಿ ತೋಟಗಾರಿಕೆ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಲಾಕ್​​ಡೌನ್ ನಿಯಮ ಉಲ್ಲಂಘನೆ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಿ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಆದರೆ, ಸರ್ಕಾರ ಆದೇಶವನ್ನು ಪಾಲನೆ ಮಾಡಬೇಕಿದ್ದ ಸರ್ಕಾರಿ ಅಧಿಕಾರಿಗಳೇ ನಿಯಮವನ್ನು ಉಲ್ಲಂಘಿಸಿದ್ದಾರೆ.

ಆದೇಶದ ಪ್ರತಿ

ಐಪಿಎಸ್ ಅಧಿಕಾರಿ ಒತ್ತಡಕ್ಕೆ ಒಳಗಾದ್ರಾ ಮಹಿಳಾ ಅಧಿಕಾರಿ ?

ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆ ಅಲಂಕರಿಸಿರುವ ಡಿಐಜಿ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಪ್ರಭಾವ ಬಳಸಿ ಕಬ್ಬನ್​ ಪಾರ್ಕ್ ಪ್ರವೇಶಿಸುವ ಅನುಮತಿ ಪಡೆದುಕೊಂಡಿದ್ದಾರೆ.‌ ಲಾಕ್​ಡೌನ್ ಪ್ರತಿದಿನ ಪಾಕ್​ನೊಳಗೆ ಹೋಗಿ ಕಸರತ್ತು ನಡೆಸಿದ್ದಾರೆ‌‌‌ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅನುಮತಿ‌ ನೀಡಿದ ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ ಉಪ ನಿರ್ದೇಶಕಿ ಕುಸುಮಾ ಅವರನ್ನು ಸಸ್ಪೆಂಡ್‌ ಮಾಡಿ ಇಲಾಖೆ ಮಟ್ಟದಲ್ಲಿ ತನಿಖೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಜನರು ಪಾಕ್​ಗೆ ಬರುತ್ತಿದ್ದರು. ವ್ಯಾಯಾಮ, ಯೋಗ ಸೇರಿದಂತೆ ನಾನಾ ತರಹದ ದೈಹಿಕ ಕಸರತ್ತು ನಡೆಸುತ್ತಿದ್ದರು‌.‌ ಲಾಕ್​​​​​ಡೌನ್ ಕಾರಣಕ್ಕಾಗಿ ಪಾರ್ಕ್ ಪ್ರವೇಶ ಬಂದ್ ಮಾಡಿದ್ದರಿಂದ ಸಾವಿರಾರು ಜನರಿಗೆ ವಾಕಿಂಗ್ ಮಾಡಲು ಸಾಧ್ಯವಾಗಿಲ್ಲ. ಆದರೆ, ಪಾರ್ಕ್​ಗೆ ತಮಗೆ ಬೇಕಾದವರನ್ನು ಒಳಗೆ ಬಿಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಡಾ.ಎಸ್.ಉಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಲಾಕ್​​ಡೌನ್ ಆದೇಶ ಜಾರಿ ಇದ್ದರೂ ಪಾರ್ಕ್​ಗೆ ಹೋಗಿರುವ ಐಪಿಎಸ್ ಅಧಿಕಾರಿ ಮೇಲೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿದೆ.

For All Latest Updates

ABOUT THE AUTHOR

...view details